ಮೊರಾಕೊ:ಉತ್ತರ ಆಫ್ರಿಕಾದ ಮೊರಾಕೊದಲ್ಲಿ ಸಂಭವಿಸಿದ ಭೂಕಂಪವು ಆರು ದಶಕಗಳಲ್ಲಿ ಸಂಭವಿಸಿದ ಭೀಕರ ಭೂಕಂಪಗಳಲ್ಲಿ ಒಂದಾಗಿದೆ. ಸೆಪ್ಟೆಂಬರ್ 9 ರಂದು ಸಂಭವಿಸಿದ ಪ್ರಬಲ ಭೂಕಂಪದಿಂದ ಈಗ ತಿಖ್ತ್‌ನಲ್ಲಿ ಏನೂ ಉಳಿದಿಲ್ಲ. ಒಡೆದ ಮನೆಗಳು, ಕಂಬಳಿ ಹೊದಿಸಿದ ದೇಹಗಳು ಎಲ್ಲೆಡೆ ಗೋಚರಿಸುತ್ತಿವೆ. ಈಗಿಲ್ಲಿ ಮರದ ಅವಶೇಷಗಳು, ಕಲ್ಲಿನ ತುಂಡುಗಳು ಮತ್ತು ಮುರಿದ ಫಲಕಗಳು ಕಂಡುಬರುವುದರಿಂದ ಇಡೀ ಹಳ್ಳಿಯೇ ಒಂದು ರೀತಿ ರೂಪಾಂತರಗೊಂಡಿದೆ. 33 ವರ್ಷದ ಯುವಕನೊಬ್ಬ ‘ಇಲ್ಲಿ ಜೀವನ ಮುಗಿದಿದೆ, ಈಗ ಈ ಹಳ್ಳಿ ಸತ್ತಿದೆ’ ಎಂದು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಮಣ್ಣಿನಿಂದ ಮಾಡಿದ್ದ ಮನೆಗಳುತಿಖ್ತ್ ಗ್ರಾಮದ ಮನೆಗಳು ಹೆಚ್ಚಾಗಿ ಮಣ್ಣಿನಿಂದ ಮಾಡಲ್ಪಟ್ಟಿದ್ದು, ಭೂಕಂಪದ ಬಲವಾದ ಕಂಪನದ ನಂತರ ಸಂಪೂರ್ಣವಾಗಿ ಹಾನಿಗೊಳಗಾದವು. “ಜನರು ತಮ್ಮ ಮನೆಗಳನ್ನು ನಿರ್ಮಿಸುವಾಗ ವಿನಾಶಕಾರಿ ಭೂಕಂಪದ ಬಗ್ಗೆ ಯೋಚಿಸರಲಿಲ್ಲ” ಎಂದು ದುರಂತದಲ್ಲಿ ತನ್ನ ಕುಟುಂಬವನ್ನು ಕಳೆದುಕೊಂಡ ವಿದ್ಯಾರ್ಥಿಯೊಬ್ಬ ಹೇಳುತ್ತಾನೆ.
‘ಎಲ್ಲವೂ ಮುಗಿದಿದೆ’ಕೆಲವೇ ವಾರಗಳಲ್ಲಿ ಮದುವೆಯಾಗಲಿದ್ದ 25 ವರ್ಷದ ಓಮರ್ ಐತ್ ಮಬಾರೆಕ್ ಈಗ ತನ್ನ ಭಾವಿ ಪತ್ನಿಯ ದೇಹ ಸಮಾಧಿ ಮಾಡುವುದನ್ನು ನೋಡುತ್ತಿದ್ದಾನೆ. ಕಣ್ಣೀರಿನಿಂದ ತುಂಬಿದ ಅವನ ಕೆಂಪು ಕಣ್ಣುಗಳು ‘ಎಲ್ಲವೂ ಮುಗಿದಿದೆ’ ಎಂಬರ್ಥ ಹೇಳುತ್ತವೆ. ಸೆಪ್ಟೆಂಬರ್ 9 ರ ರಾತ್ರಿ, ಮೊರಾಕೊದಲ್ಲಿ ಭೂಕಂಪನದ ಕೆಲವು ನಿಮಿಷಗಳ ಮೊದಲು, ಒಮರ್ ತನ್ನ ಪ್ರೇಯಸಿಯೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಿದ್ದನು. ಈ ಸಮಯದಲ್ಲಿ ಬಲವಾದ ಕಂಪನದಿಂದ ಮಡಕೆ ಬಿದ್ದ ಶಬ್ದವನ್ನು ಅವರು ಫೋನ್​​​​ನಲ್ಲಿ ಕೇಳಿದರು. ನಂತರ ಫೋನ್ ಸಂಪರ್ಕ ಕಡಿತಗೊಂಡಿತು. ದಾರಿಯಲ್ಲಿ ಎಲ್ಲೋ ಉಮರ್‌ಗೆ ತನ್ನ ಭಾವಿ ಪತ್ನಿ ಸತ್ತು ಹೋಗಿರುವ ವಿಷಯ ತಿಳಿಯಿತು.

ಸ್ಮಶಾನವಾದ ತಿಖ್ತ್ ಗ್ರಾಮಸುದ್ದಿ ಸಂಸ್ಥೆ AFP ಪ್ರಕಾರ, ಮೊರೊಕನ್ ಗ್ರಾಮದ ತಿಖ್ತ್‌ನ ಅವಶೇಷಗಳಿಂದ ದೇಹವನ್ನು ಹೊರತೆಗೆಯಲು ಹೆಣಗಾಡಬೇಕಾಯಿತು. ಆದರೆ ಈ ಕೆಲಸವು ತುಂಬಾ ಸೂಕ್ಷ್ಮವಾಗಿತ್ತು. ಎಎಫ್‌ಪಿಯೊಂದಿಗೆ ಮಾತನಾಡಿದ ಒಮರ್, ತನ್ನ ನಿಶ್ಚಿತ ವರ ಮಿನಾ ಐತ್ ಬಿಹಿಯನ್ನು ಕಂಬಳಿಯಲ್ಲಿ ಸುತ್ತಿ ತಾತ್ಕಾಲಿಕ ಸ್ಮಶಾನಕ್ಕೆ ಕೊಂಡೊಯ್ಯಲಾಯಿತು, ಅಲ್ಲಿ ಈಗಾಗಲೇ 68 ಜನರ ಶವಗಳಿವೆ ಎಂದರು. ಮೀನಾ ಅವರ ದೇಹವನ್ನು ಅವಶೇಷಗಳಿಂದ ಹೊರತೆಗೆದಾಗ, ಅವರ ಬಳಿ ಫೋನ್ ಕೂಡ ಕಂಡುಬಂದಿದೆ. ಅದನ್ನು ಅವರ ನಿಶ್ಚಿತ ಒಮರ್​​​ಗೆ ಹಸ್ತಾಂತರಿಸಲಾಯಿತು.

ತಂದೆಯ ಸಾವನ್ನು ಕಂಡ ಮಗಒಮರ್ ಅವರಂತೆಯೇ, ತಂದೆಯನ್ನು ಕಳೆದುಕೊಂಡ ಮಗನೂ AFP ಯೊಂದಿಗೆ ನೋವಿನ ಕಥೆಯನ್ನು ಹಂಚಿಕೊಂಡಿದ್ದಾನೆ. ವಾಸ್ತವವಾಗಿ ಭೂಕಂಪದ ಮೊದಲು, ಕಂಪನ ಪ್ರಾರಂಭವಾದಾಗ ಮಗ ವಾಕಿಂಗ್‌ಗೆ ಹೋಗಿದ್ದನು. ಜನರು ತಮ್ಮ ಕುಸಿಯುತ್ತಿರುವ ಮನೆಗಳಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವುದನ್ನು ನೋಡಿದನು. ಅವನು ತನ್ನ ತಂದೆಯೂ ಮನೆಯಿಂದ ಹೊರಬರುವುದನ್ನು ನೋಡಿದನು. ಆದರೆ ಗಾಯಗಳು ತುಂಬಾ ತೀವ್ರವಾಗಿದ್ದವು. ಕೊನೆಗೆ ಮಗನ ಮಡಿಲಲ್ಲಿ ತಂದೆ ಸಾವನ್ನಪ್ಪಿದರು.
ತ್ರಿಕೋನ ಪ್ರೇಮಕಥೆ: ಜೂನಿಯರ್ ಆರ್ಟಿಸ್ಟ್ ಬರ್ಬರ ಹತ್ಯೆ, ನಾಲ್ವರ ಬಂಧನ

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:20 − four =
Remember me
