ಮುಂಬೈ:ಭಾರತದ ಆರ್ಥಿಕ ರಾಜಧಾನಿ ಮುಂಬೈನಲ್ಲಿ ವಾಸಿಸುವ ಬಿಲಿಯನೇರ್‌ಗಳ ಸಂಖ್ಯೆ ಈಗ ಚೀನಾದ ರಾಜಧಾನಿ ಬೀಜಿಂಗ್‌ಗಿಂತ ಹೆಚ್ಚಾಗಿದೆ. ಈ ನಗರವು ಮೊದಲ ಬಾರಿಗೆ ಏಷ್ಯಾದ ಬಿಲಿಯನೇರ್ ರಾಜಧಾನಿಯಾಗಿದೆ. ಈ ಮಾಹಿತಿಯನ್ನು ಹುರುನ್ ರಿಸರ್ಚ್‌ನ 2024 ರ ಜಾಗತಿಕ ಶ್ರೀಮಂತ ಪಟ್ಟಿಯಲ್ಲಿ ಬಹಿರಂಗಪಡಿಸಲಾಗಿದೆ. ಮುಂಬೈನಲ್ಲಿ 92 ಬಿಲಿಯನೇರ್‌ಗಳಿದ್ದರೆ, ಇವರ ಸಂಖ್ಯೆ ಬೀಜಿಂಗ್‌ನಲ್ಲಿ 91 ಆಗಿದೆ. ವಿಶ್ವದಾದ್ಯಂತ ತೆಗೆದುಕೊಂಡರೆ ಚೀನಾದಲ್ಲಿ ಒಟ್ಟು ಶತಕೋಟ್ಯಾಧಿಪತಿಗಳ ಸಂಖ್ಯೆ 814 ಆಗಿದ್ದರೆ, ಭಾರತದಲ್ಲಿ ಒಟ್ಟು 271 ಬಿಲಿಯನೇರ್‌ಗಳಿದ್ದಾರೆ.
ಜಗತ್ತಿನಲ್ಲಿ ಮುಂಬೈಗೆ ಯಾವ ಸ್ಥಾನ ಸಿಕ್ಕಿದೆ?ನಾವು ನಗರಗಳ ಬಗ್ಗೆ ಮಾತನಾಡಿದರೆ, ಮುಂಬೈ ಏಷ್ಯಾದಲ್ಲಿ ಮೊದಲ ಸ್ಥಾನದಲ್ಲಿದೆ. ವಿಶ್ವಾದ್ಯಂತ ನೋಡಿದರೆ, ಈ ನಗರವು ಮೂರನೇ ಸ್ಥಾನವನ್ನು ತಲುಪಿದೆ. ಹುರುನ್‌ನ ಪಟ್ಟಿಯ ಪ್ರಕಾರ, 119 ಬಿಲಿಯನೇರ್‌ಗಳಿಗೆ ನೆಲೆಯಾಗಿರುವ ನ್ಯೂಯಾರ್ಕ್ ಮೊದಲ ಸ್ಥಾನದಲ್ಲಿದೆ. ಏಳು ವರ್ಷಗಳ ನಂತರ ಈ ಪಟ್ಟಿಯಲ್ಲಿ ನ್ಯೂಯಾರ್ಕ್ ಮೊದಲ ಸ್ಥಾನ ಪಡೆದಿದೆ. 97 ಬಿಲಿಯನೇರ್‌ಗಳಿರುವ ಲಂಡನ್ ಎರಡನೇ ಸ್ಥಾನದಲ್ಲಿದೆ. ಈ ವರ್ಷ ಮುಂಬೈನಲ್ಲಿ 26 ಬಿಲಿಯನೇರ್‌ಗಳು ಹೆಚ್ಚಿದ್ದರೆ, ಬೀಜಿಂಗ್‌ನಲ್ಲಿ 18 ಕಡಿಮೆಯಾಗಿದೆ. ಆದರೆ ಜಾಗತಿಕ ಶ್ರೇಯಾಂಕದಲ್ಲಿ ಭಾರತೀಯ ಬಿಲಿಯನೇರ್‌ಗಳ ಸ್ಥಾನವು ಸ್ವಲ್ಪ ದುರ್ಬಲವಾಗಿದೆ.

ಮುಂಬೈನ ಬಿಲಿಯನೇರ್‌ಗಳ ಒಟ್ಟು ಸಂಪತ್ತು ಎಷ್ಟು?ಕನಸಿನ ನಗರ ಎಂದು ಕರೆಯಲ್ಪಡುವ ಮುಂಬೈನ ಎಲ್ಲಾ ಕೋಟ್ಯಾಧಿಪತಿಗಳ ಒಟ್ಟು ಸಂಪತ್ತು 37 ಲಕ್ಷ ಕೋಟಿ ರೂ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಅಂಕಿ ಅಂಶ ಶೇ 47ರಷ್ಟು ಹೆಚ್ಚಾಗಿದೆ. ಇದೇ ಸಮಯದಲ್ಲಿ, ಬೀಜಿಂಗ್‌ನ ಬಿಲಿಯನೇರ್‌ಗಳ ಒಟ್ಟು ಸಂಪತ್ತು ಸರಿಸುಮಾರು 22 ಲಕ್ಷ ಕೋಟಿ ರೂ. ಬೀಜಿಂಗ್‌ನ ಬಿಲಿಯನೇರ್‌ಗಳ ಒಟ್ಟು ಸಂಪತ್ತು ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡ 28 ರಷ್ಟು ಕುಸಿದಿದೆ. ಮುಂಬೈನ ಸಂಪತ್ತಿನ ಕ್ಷೇತ್ರಗಳು ಶಕ್ತಿ, ಔಷಧೀಯ. ಮುಖೇಶ್ ಅಂಬಾನಿಯಂತಹ ಬಿಲಿಯನೇರ್‌ಗಳು ಈ ಕ್ಷೇತ್ರಗಳಿಂದ ಗಣನೀಯವಾಗಿ ಲಾಭ ಪಡೆದಿದ್ದಾರೆ.
ಯಾರ ಸಂಪತ್ತು ಹೆಚ್ಚಾಯಿತು?ಜಾಗತಿಕ ಶತಕೋಟ್ಯಾಧಿಪತಿಗಳ ಪಟ್ಟಿ ನೋಡುವುದಾದರೆ ಭಾರತೀಯ ಬಿಲಿಯನೇರ್‌ಗಳ ಸಂಖ್ಯೆ ಸ್ವಲ್ಪ ದುರ್ಬಲವಾಗಿದೆ. ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ 10ನೇ ಸ್ಥಾನದಲ್ಲಿದ್ದಾರೆ. ಗೌತಮ್ ಅದಾನಿ ಎಂಟನೇ ಮತ್ತು ಎಚ್‌ಸಿಎಲ್‌ನ ಶಿವ ನಾಡಾರ್ ಮತ್ತು ಅವರ ಕುಟುಂಬ 16 ನೇ ಸ್ಥಾನ ಪಡೆದಿದ್ದಾರೆ. ಆದರೆ, ಸೀರಮ್ ಸಂಸ್ಥೆಯ ಸೈರಸ್ ಎಸ್ ಪೂನಾವಾಲಾ ರಾಂಕಿಂಗ್ ಕುಸಿದಿದೆ. ಅವರ ರಾಂಕ್ 9 ಸ್ಥಾನ ಕುಸಿದು 55ನೇ ಸ್ಥಾನಕ್ಕೆ ತಲುಪಿದೆ. ಸನ್ ಫಾರ್ಮಾಸ್ಯುಟಿಕಲ್ಸ್‌ನ ದಿಲೀಪ್ ಸಾಂಘ್ವಿ 61ನೇ ಹಾಗೂ ಕುಮಾರ್ ಮಂಗಳಂ ಬಿರ್ಲಾ ಮತ್ತು ರಾಧಾಕೃಷ್ಣ ದಮಾನಿ 100ನೇ ರಾಂಕ್ ಪಡೆದಿದ್ದಾರೆ.
ಭಾರತದಲ್ಲಿ ವೇಗವಾಗಿ ಹೆಚ್ಚುತ್ತಿದೆ ಬಿಲಿಯನೇರ್‌ಗಳ ಸಂಖ್ಯೆ…ಕಳೆದ ಐದು ವರ್ಷಗಳಲ್ಲಿ ಈ ಸಂಖ್ಯೆ ಸುಮಾರು 76% ಹೆಚ್ಚಳ!



ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:twenty − 10 =
Remember me
