ಮುಂಬೈ:ಕರೊನಾ ದೇಶದ ಜನತೆಯ ಜೀವನವನ್ನು ಅಲ್ಲೋಲ ಕಲ್ಲೋಲ ಮಾಡಿಬಿಟ್ಟಿದೆ. ಈ ಸಂಕಷ್ಟದ ಸಮಯದಲ್ಲಿ ಕೆಲವರು ದೇವರಂತೆ ಜನರ ಸಹಾಯಕ್ಕೆ ಮುಂದಾಗಿರುವುದು ಸುಳ್ಳಲ್ಲ. ಮಹಾರಾಷ್ಟ್ರದ ಮುಂಬೈನಲ್ಲಿ ಕರೊನಾ ದಾಳಿ ಹೆಚ್ಚಾಗಿ ರೋಗಿಗಳು ಆಕ್ಸಿಜನ್​ಗಾಗಿ ಪರದಾಡುತ್ತಿರುವಾಗ ಆಕ್ಸಿಜನ್​ ಮ್ಯಾನ್​ ಆಗಿ ಹೊರಹೊಮ್ಮಿರುವವರು ಶಹನವಾಜ್ ಶೇಖ್.
ಶಹನವಾಜ್​ ಶೇಖ್​ರನ್ನು ಸ್ಥಳೀಯರು ಆಕ್ಸಿಜನ್​ ಮ್ಯಾನ್​ ಎಂದೇ ಕರೆಯುತ್ತಾರೆ. ಕಳೆದ ವರ್ಷ ಕರೊನಾ ದಾಳಿ ಹೆಚ್ಚಾದ ಸಮಯದಿಂದ ಈವರೆಗೆ ಕರೊನಾ ಸೋಂಕಿತರ ಸಹಾಯಕ್ಕೆ ಈ ವ್ಯಕ್ತಿ ಸದಾ ಮುಂದಿದ್ದಾರೆ. ಈ ವರ್ಷ ಇನ್ನಷ್ಟು ಜನರು ಶಹನವಾಜ್​ ಜತೆ ಕೈ ಜೋಡಿಸಿದ್ದು, ಅವರದ್ದೇ ಒಂದು ಹೆಲ್ಪ್​ಲೈನ್​ ಅನ್ನೂ ಮಾಡಿಕೊಂಡಿದ್ದಾರಂತೆ. ಆಕ್ಸಿಜನ್​ ಬೇಡಿಕೆ ಹೆಚ್ಚಾಗಿ, ಅದಕ್ಕೆ ಹೊಂದಿಸಲು ಹಣವಿಲ್ಲದಿದ್ದಾಗ ತನ್ನ 22 ಲಕ್ಷ ರೂಪಾಯಿ ಬೆಲೆಯ ಕಾರನ್ನೇ ಮಾರಿ ಅದರಿಂದ ಬಂದ ಹಣದಲ್ಲಿ 160 ಜನರಿಗೆ ಆಕ್ಸಿಜನ್​ ವ್ಯವಸ್ಥೆ ಮಾಡಿಸಿಕೊಟ್ಟಿದ್ದಾರೆ.
ಹತ್ತಿರದಲ್ಲಿ ಯಾರೇ ಆಕ್ಸಿಜನ್​ ಕೊರತೆಯೆಂದು ಶಹನವಾಜ್​ಗೆ ಕರೆ ಮಾಡಿದರೆ ಕೂಡಲೇ ಅವರಿಗೆ ಸಹಾಯ ಮಾಡಲಾಗುತ್ತಿದಯಂತೆ. ಈವರೆಗೆ ಸುಮಾರು 4 ಸಾವಿರ ಜನರಿಗೆ ಆಕ್ಸಿಜನ್​ ವ್ಯವಸ್ಥೆ ಮಾಡಿಕೊಟ್ಟಿದೆಯಂತೆ ಇವರ ತಂಡ. ಕರೊನಾದ ಕಷ್ಟದ ಸಮಯದಲ್ಲಿ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ನೆರವಿನ ಹಸ್ತ ಚಾಚುತ್ತಿರುವ ಇವರೇ ನಮ್ಮ ಪಾಲಿನ ದೇವರೆನ್ನುತ್ತಿದ್ದಾರೆ ನೆರವು ಪಡೆದ ಸಾಕಷ್ಟು ಜನರು. (ಏಜೆನ್ಸೀಸ್​)
ದುಬಾರಿ ಕಾರಿನ ಒಡೆಯನಾದ ಮಾಡರ್ನ್​​ ರೈತ ಶಶಿ! ಕಾರಿನ ಬೆಲೆ ಕೇಳಿದರೆ ಹುಬ್ಬೇರಿಸೋದು ಗ್ಯಾರಂಟಿ

ದಿನಗೂಲಿ ಕೆಲಸಕ್ಕೆ ಹೊರಟಿದ್ದ ಮಹಿಳೆಯನ್ನು ಗ್ಯಾಂಗ್​ ರೇಪ್​ ಮಾಡಿ ಕೊಂದ ಪಾಪಿಗಳು!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:five × three =
Remember me
