ಬರೇಲಿ:ಮುಸ್ಲಿಂ ಮಹಿಳೆಯೋರ್ವರು ತಮ್ಮ ನವಜಾತ ಗಂಡು ಮಗುವಿಗೆ ಹಿಂದು ಹೆಸರನ್ನು ಇಡಲು ಕರೊನಾ ಕರ್ಫ್ಯೂ ಕಾರಣವಾಗಿದೆ.
ಈಗ ಎಲ್ಲೆಲ್ಲೂ ಕರೊನಾ ಭೀತಿ. ಮಾ.24ರಿಂದ ಇಡೀ ದೇಶವೇ ಲಾಕ್​ಡೌನ್ ಆಗಿದೆ. ಹಾಗಾಗಿ ಯಾವುದೇ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಿಲ್ಲ. ಈ ಮಧ್ಯೆ ಉತ್ತರ ಪ್ರದೇಶದ ಬರೇಲಿಯಲ್ಲಿ ಮುಸ್ಲಿಂ ಮಹಿಳೆಯೋರ್ವರು ಹೆರಿಗೆ ನೋವಿನಿಂದ ಬಳಲುತ್ತಿದ್ದರು. ಅವರ ಪತಿ ನೊಯ್ಡಾದಲ್ಲಿ ಇದ್ದರು. ಆ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲು ಪತಿಯೇ ಹೋಗಬೇಕಿತ್ತು. ಆದರೆ ಲಾಕ್​ಡೌನ್​ ಮಧ್ಯೆ ಬರೇಲಿಗೆ ಹೋಗಲಾಗದೆ ಕಷ್ಟಪಡುತ್ತಿದ್ದ ಆ ವ್ಯಕ್ತಿಗೆ ನೊಯ್ಡಾದ ಅಡಿಷನಲ್ ಡಿಸಿಪಿ ಕುಮಾರ್​ ರಣವಿಜಯ​ ಎಂಬುವರು ಸಹಾಯ ಮಾಡಿದರು.
ಅಡಿಷನಲ್​ ಡಿಸಿಪಿ ಸಹಾಯದಿಂದ ಬರೇಲಿಗೆ ಹೋದ ವ್ಯಕ್ತಿ, ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆಕೆಗೆ ಹೆರಿಗೆಯಾಗಿ ಗಂಡುಮಗುವೂ ಜನಿಸಿತು. ಪೊಲೀಸ್ ಅಧಿಕಾರಿ ರಣವಿಜಯ್​ ಅವರ ಉಪಕಾರ ಸ್ಮರಿಸಿದ ಮುಸ್ಲಿಂ ಮಹಿಳೆ ತನ್ನ ಮಗುವಿಗೆ ರಣವಿಜಯ​ ಎಂದೇ ಹೆಸರನ್ನಿಟ್ಟಿದ್ದಾರೆ. (ಏಜೆನ್ಸೀಸ್)

‘ಕರೊನಾ ವಿರುದ್ಧದ ಹೋರಾಟದಲ್ಲಿ ಭಾರತ ಶೀಘ್ರದಲ್ಲೇ ಜಯ ಸಾಧಿಸಲಿದೆ…ನಾವು ಏನು ಸಹಾಯ ಬೇಕಾದ್ರೂ ಮಾಡುತ್ತೇವೆ’ ಎಂದ ಚೀನಾ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + eleven =
Remember me
