ಭುವನೇಶ್ವರ್​:ಬಿಜೆಡಿ ಸಂಸದ ಹಾಗೂ ಒಡಿಶಾ ನಟ ಅನುಭವ್​ ಮೊಹಾಂತಿ ಶನಿವಾರ ತಮ್ಮ ಬರ್ತಡೇ ಹಿನ್ನೆಲೆಯಲ್ಲಿ ಫೇಸ್​ಬುಕ್ ಖಾತೆಯಲ್ಲಿ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದು, ನನ್ನ ಪತ್ನಿಯ ಜೊತೆ ಡಿವೋರ್ಸ್​ ಪಡೆದುಕೊಂಡ ಬಳಿಕ ತನಗೆ ಹೊಸ ಜನ್ಮ ಸಿಗಲಿದೆ ಎಂದು ಹೇಳಿಕೆ ನೀಡಿದ್ದಾರೆ.
ಕಳೆದ ಮೂರ್ನಾಲ್ಕು ವರ್ಷಗಳಿಂದ ನಾನು ಸತ್ತ ಜೀವನವನ್ನು ನಡೆಸುತ್ತಿದ್ದೇನೆ. ಡಿವೋರ್ಸ್​ ಬಳಿಕ ನನಗೆ ಹೊಸ ಜನ್ಮ ದೊರೆಯಲಿದೆ. ನನ್ನ ಡಿವೋರ್ಸ್​ ದಿನ, ನಾನು ನನ್ನ ಹುಟ್ಟುಹಬ್ಬವನ್ನು ಭರ್ಜರಿಯಾಗಿ ಆಚರಣೆ ಮಾಡುತ್ತೇನೆ. ನನ್ನ ನಿಜವಾದ ಬರ್ತಡೇಯನ್ನು ಡಿವೋರ್ಸ್​ ದಿನದಂದು ಆಚರಿಸುತ್ತೇನೆ. ಆ ದಿನ ನನಗೆ ಹೊಸ ಜನ್ಮ ಮತ್ತು ಹೊಸ ಜೀವನವನ್ನು ನಾನು ಪಡೆಯಲಿದ್ದೇನೆ ಎಂದು ಹೇಳಿದ್ದಾರೆ.
ಬರ್ತಡೇಗೆ ಶುಭಕೋರಿದ ಅಭಿಮಾನಿಗಳಿಗೆ ಇದೇ ಸಂದರ್ಭದಲ್ಲಿ ಅನುಭವ್​ ಧನ್ಯವಾದ ತಿಳಿಸಿದ್ದಾರೆ. ಬಡವರು ಮತ್ತು ನಿರ್ಗತಿಕರನ್ನು ತಲುಪಿ ಅವರನ್ನು ಸಂತೋಷಪಡಿಸಲು ತಮ್ಮ ಕೈಲಾದಷ್ಟು ಪ್ರಯತ್ನಿಸುವಂತೆ ಅಭಿಮಾನಿಗಳನ್ನು ಅನುಭವ್​ ಕೋರಿದರು.
ಇಂದು ಡಿಸೆಂಬರ್ 24. ನನ್ನ ಜನ್ಮದಿನ. ನನ್ನ ಅಭಿಮಾನಿಗಳು ವಿವಿಧ ಮಾಧ್ಯಮಗಳ ಮೂಲಕ ನನಗೆ ಶುಭ ಹಾರೈಸುತ್ತಿದ್ದಾರೆ. ಅವರ ಈ ಪ್ರೀತಿಗಾಗಿ ನಾನು ಅವರಿಗೆ ಕೃತಜ್ಞನಾಗಿದ್ದೇನೆ. ಅಭಿಮಾನಿಗಳ ಪ್ರೀತಿಗೆ ಪ್ರತಿಯಾಗಿ ನನ್ನ ಭಾವನೆಗಳನ್ನು ಮತ್ತು ಸಂತೋಷವನ್ನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ ಎಂದು ನಟ ಕಮ್ ರಾಜಕಾರಣಿ ಹೇಳಿದ್ದಾರೆ.
ನನ್ನ ಹಿರಿಯ ತಂದೆಯ ನಿಧನ ಮತ್ತು ಕಳೆದ ಮೂರೂವರೆ ವರ್ಷಗಳಿಂದ ನಾನು ಅನುಭವಿಸುತ್ತಿರುವ ನೋವಿನಿಂದ ನಾನು ಮತ್ತು ನನ್ನ ಕುಟುಂಬದ ಸದಸ್ಯರು ಮತ್ತು ಅಭಿಮಾನಿಗಳು ಚಿಂತಿತರಾಗಿರುವ ಕಾರಣ, ಈ ವರ್ಷ ನನ್ನ ಹುಟ್ಟುಹಬ್ಬವನ್ನು ಆಚರಿಸದಿರಲು ನಿರ್ಧರಿಸಿದ್ದೇನೆ. ಹೀಗಾಗಿ ನನ್ನ ಅಭಿಮಾನಿಗಳು ಬಡವರು ಮತ್ತು ನಿರ್ಗತಿಕರನ್ನು ತಲುಪಿ, ಕೈಲಾದಷ್ಟು ಸಹಾಯ ಮಾಡಿ ನನ್ನ ಹುಟ್ಟುಹಬ್ಬವನ್ನು ಅವರೊಂದಿಗೆ ಆಚರಿಸಲು ವಿನಂತಿಸುತ್ತೇನೆ ಎಂದಿದ್ದಾರೆ.
ಇನ್ನೂ ಈ  ವಾರದ ಆರಂಭದಲ್ಲಿ ನಟಿ ವರ್ಷಾ ಪ್ರಿಯದರ್ಶಿನಿ ಅವರು ತಮ್ಮ ಗಂಡನ ವಿರುದ್ಧ ಹೇಳಿಕೆಯನ್ನು ದಾಖಲಿಸಲು ಕಟಕ್ ಕೌಟುಂಬಿಕ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಸದ್ಯ ಇಬ್ಬರ ಡಿವೋರ್ಸ್​ ಪ್ರಕರಣ ವಿಚಾರಣೆ ಹಂತದಲ್ಲಿದೆ.
ಘಟನೆ ಹಿನ್ನೆಲೆ ಏನು?ಒಡಿಶಾದ ಪ್ರಖ್ಯಾತ ತಾರಾ ದಂಪತಿಯ ಡಿವೋರ್ಸ್​ ಕಿತ್ತಾಟವು ರಾಜ್ಯದಲ್ಲಿ ಭಾರೀ ಸಂಚಲನ ಮೂಡಿಸಿದ್ದು, ಒಡಿಶಾ ಹೈಕೋರ್ಟ್​ ಇಬ್ಬರನ್ನು ತರಾಟೆಗೆ ತೆಗೆದುಕೊಂಡಿದೆ. ನಟ ಕಂ ರಾಜಕಾರಣಿಯಾಗಿರುವ ಅನುಭವ್​ ಮೊಹಂತಿ ಹಾಗೂ ನಟಿ ವರ್ಷಾ ಪ್ರಿಯದರ್ಶಿನಿ ಡಿವೋರ್ಸ್ ಪ್ರಕರಣ ಸದ್ಯ ಹೈಕೋರ್ಟ್​ನಲ್ಲಿ ವಿಚಾರಣೆ ಹಂತದಲ್ಲಿದೆ. ನಟಿ ಪ್ರಿಯದರ್ಶಿನಿ ಅವರು ತಮ್ಮ ಪತಿ ವಿರುದ್ಧ ಕೌಟುಂಬಿಕ ದೌರ್ಜನ್ಯ ಮಾಡಿದ್ದು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಇಬ್ಬರ ವಿವಾಹ 2014ರಲ್ಲಿ ನಡೆದಿದೆ.
ತಮ್ಮ ಪತಿ ಮದ್ಯಪಾನ ವ್ಯಸನಿ. ತಮ್ಮ ಸ್ನೇಹಿತರ ಜತೆಗೂಡಿ ಬೆಡ್‌ರೂಮಿನಲ್ಲಿಯೇ ಮದ್ಯಪಾನ ಸೇವನೆ ಮಾಡುತ್ತಾರೆ. ಅವರು ಸ್ತ್ರೀಲೋಲ ಕೂಡ. ರಾತ್ರಿ ಅವೇಳೆಯಲ್ಲಿ ಮನೆಗೆ ಬರುತ್ತಾರೆ. ರಾತ್ರಿ ಊಟ ಮಾಡಲು ಅವರಿಗಾಗಿ ಕಾಯುತ್ತಿದ್ದರೆ, ಯಾವಾಗ ಬರುತ್ತಾರೋ ಹೇಳಲಾಗದು. ಅವರು ಮನೆಗೆ ಬರುವ ವೇಳೆ ನಶೆಯಲ್ಲಿ ಇರುತ್ತಾರೆ. ಮೈಮೇಲೆ ಜ್ಞಾನವೇ ಇರುವುದಿಲ್ಲ ಎಂದು ಆರೋಪಿಸಿದ್ದಾರೆ. ತಾವು ಕಣ್ಣೀರಿನಲ್ಲಿಯೇ ಕೈತೊಳೆಯುವಂತಾಗಿದೆ ಎಂದಿದ್ದಾರೆ. ಈ ಹಿನ್ನೆಲೆಯಲ್ಲಿ ಪತಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಪ್ರಿಯದರ್ಶಿನಿ ಆರೋಪ ಮಾಡಿದ್ದಾರೆ.
ಕಳೆದ ಮೇ 21 ರಂದು ಬಿಡುಗಡೆಯಾದ ‘ಅನ್‌ಟೋಲ್ಡ್ ಸ್ಟೋರಿ’ ಎಂಬ ಶೀರ್ಷಿಕೆಯ ವಿಡಿಯೋದ ಎರಡನೇ ಭಾಗದಲ್ಲಿ, ಅನುಭವ್ ಮೊಹಾಂತಿ ಅವರು ತಮ್ಮ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಲು ಪ್ರಮುಖ ಕಾರಣವನ್ನು ತಿಳಿಸಿದರು. ಮದುವೆ ಆಗಿ 6 ವರ್ಷ ಕಳೆದರೂ ನಾನು ಆಕೆಯೊಂದಿಗೆ ಲೈಂಗಿಕ ಸಂಪರ್ಕ ಹೊಂದಿಲ್ಲ. ಲೈಂಗಿಕ ಸಂಬಂಧಕ್ಕೆ ಪ್ರಿಯದರ್ಶಿನಿಯ ವಿರೋಧವಿದೆ. ಡಿವೋರ್ಸ್​ ಪಡೆಯಲು ಸಲ್ಲಿಸಿರುವ ಅರ್ಜಿಯಲ್ಲಿ ಇದನ್ನು ಉಲ್ಲೇಖಿಸಿದ್ದೇನೆ. ಮದುವೆ ಆದಾಗಿನಿಂದ ಆಕೆ ನನಗೆ ಯಾವುದೇ ವೈವಾಹಿಕ ಹಕ್ಕುಗಳನ್ನು ನೀಡಿಲ್ಲ. ಇಡೀ ಆರು ವರ್ಷಗಳಿಂದಲೂ ಆಕೆ ನನ್ನ ಕಲ್ಪನೆಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾಳೆ. ಗಂಡನಾದವನು ಎಷ್ಟು ದಿನ ತಾನೇ ಸಹಿಸಿಕೊಳ್ಳುತ್ತಾನೆ. ಹೀಗಾಗಿ ಡಿವೋರ್ಸ್​ಗೆ ಅರ್ಜಿ ಸಲ್ಲಿಸಿದ್ದೇನೆ. ನನ್ನ ನಿರ್ಧಾರ ತಪ್ಪೋ? ಅಥವಾ ಸರಿಯೋ? ಎಂಬುದನ್ನು ನಿರ್ಧರಿಸುವುದು ನಿಮಗೆ ಬಿಟ್ಟದ್ದು ಎಂದು ವಿಡಿಯೋದಲ್ಲಿ ಹೇಳಿದ್ದಾರೆ.(ಏಜೆನ್ಸೀಸ್​)

ಮದ್ವೆಯಾದ 6 ವರ್ಷದಿಂದ ಲೈಂಗಿಕ ಸಂಭೋಗವಿಲ್ಲ: ಸಂಸದನ ಅಳಲು, ತಾರಾದಂಪತಿಗೆ ಚಾಟಿ ಬೀಸಿದ ಕೊರ್ಟ್​

ಸ್ತ್ರೀಲೋಲ, ಮದ್ಯವ್ಯಸನಿ ಸಂಸದ ಪತಿಗೆ ಶಿಕ್ಷೆ ನೀಡಿ: ನಟಿಯಿಂದ ಕೇಸ್‌ ದಾಖಲು- ದೂರಲ್ಲಿ ಗಂಭೀರ ಆರೋಪ

ಸುರಂಗ ಕೊರೆದು SBI ಬ್ಯಾಂಕ್​ನಲ್ಲಿದ್ದ 1 ಕೋಟಿ ರೂ. ಮೌಲ್ಯದ ಚಿನ್ನಾಭರಣ ಎಗರಿಸಿದ ಖದೀಮರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − three =
Remember me
