ಬೆಂಗಳೂರು:ಅಮೃತ ಕಾಲದಲ್ಲಿ ದೇಶದ ಹಿರಿಮೆ-ಗರಿಮೆ ಬಗ್ಗೆ ಹೆಮ್ಮೆ, ದೇಶಾಭಿಮಾನ ಬೆಳೆಸಲು ಉದ್ದೇಶಿತ ಬಿಜೆಪಿಯ ‘ನನ್ನ ಮಣ್ಣು, ನನ್ನ ದೇಶ’ ಅಭಿಯಾನ ಬುಧವಾರದಿಂದ ಪ್ರಾರಂಭವಾಗಲಿದೆ.
ಪ್ರಧಾನಿ ನರೇಂದ್ರ ಮೋದಿ ಅಭಿಲಾಷೆ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೂಚನೆಯಂತೆ ಅ.30ರವರೆಗೆ ವಿವಿಧ ಕಾರ್ಯಚಟುವಟಿಕೆಗಳನ್ನು ಪಕ್ಷದ ರಾಜ್ಯ ಸಮಿತಿ ಹಮ್ಮಿಕೊಂಡಿದೆ. ಅಭಿಯಾನದ ಮುಖೇನ ಕಾರ್ಯಕರ್ತರು ಪ್ರತಿ ಮನೆಗೆ ತಲುಪಲಿದ್ದಾರೆ. ಆ ಮನೆಯ ಕುಟುಂಬದ ಸದಸ್ಯರೊಂದಿಗೆ ಆತ್ಮೀಯ ಮಾತುಕತೆ ನಡೆಸಿ, ಮನೆಯಂಗಳದ ಮಣ್ಣು ಸಂಗ್ರಹಿಸುವರು.
ರಾಜ್ಯದ ಎಲ್ಲ ಹಳ್ಳಿಗಳಲ್ಲಿ ಏಕಕಾಲಕ್ಕೆ ಕಾರ್ಯಕ್ರಮ ನಡೆಯಲಿದೆ. ಬೂತ್​ವುಟ್ಟದ ಕಾರ್ಯಕರ್ತರು ಸ್ವಯಂಸೇವಕರ ರೀತಿಯಲ್ಲಿ ತೊಡಗಿಕೊಳ್ಳುವಂತೆ ಸೂಚನೆ ನೀಡಲಾಗಿದೆ. ದೇಶ ಸಾಧಿಸುತ್ತಿರುವ ಪ್ರಗತಿ, ಅಭಿವೃದ್ಧಿ ಫಲಿತಾಂಶ, ವಿಭಿನ್ನ ಆಲೋಚನೆ, ಹೊಸ ಯೋಜನೆಗಳು ಸರ್ವಾಂಗೀಣ ಪ್ರಗತಿಗೆ ಸಾಧ್ಯವಾಗಿಸಿದ್ದರ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಲಿದ್ದಾರೆ. ದೆಹಲಿಯ ಕರ್ತವ್ಯಪಥದಲ್ಲಿ ಹುತಾತ್ಮರ ಗೌರವಾರ್ಥ ನಿರ್ವಿುಸಲಿರುವ ‘ಅಮೃತ ಉದ್ಯಾನವನ’ಕ್ಕೆ ಮನೆಯಂಗಳದಿ ಸಂಗ್ರಹಿಸಿದ ಮಣ್ಣು ಬಳಕೆಯಾಗಲಿದೆ ಎಂದು ಗ್ರಾಮಸ್ಥರಿಗೆ ತಿಳಿಸಲಿದ್ದಾರೆ.
ಸಾಧಕರೊಂದಿಗೆ ಸಂವಾದ:ಗ್ರಾಮ, ಮಂಡಲಮಟ್ಟದಲ್ಲಿ ಮನೆ ಸಂಪರ್ಕದ ವೇಳೆ ಆಯಾ ಗ್ರಾಮದ ಸಾಹಿತಿಗಳು, ಸಾಧಕರು, ಗಣ್ಯ ವ್ಯಕ್ತಿಗಳೊಂದಿಗೆ ಕಾರ್ಯಕರ್ತರು ಸಂವಾದ ನಡೆಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅಮೃತ ಕಾಲದ ಪರಿಕಲ್ಪನೆ, 2047ಕ್ಕೆ ಅಭಿವೃದ್ಧಿ ಹೊಂದಿದ ಭಾರತವಾಗಬೇಕು, ಆರ್ಥಿಕವಾಗಿ ಬಲಿಷ್ಠ ರಾಷ್ಟ್ರವಾಗಬೇಕು ಎನ್ನುವ ಮಹತ್ವಾಕಾಂಕ್ಷೆ. ಈ ನಿಟ್ಟಿನಲ್ಲಿ ಕೈಗೊಂಡಿರುವ ಕ್ರಮಗಳ ಮಾಹಿತಿ ಹಂಚಿಕೊಳ್ಳಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಹಲವು ಹಂತದ ಸಮಿತಿಗಳು:ಅಭಿಯಾನ ಮತ್ತದರ ಭಾಗವಾಗಿರುವ ವಿವಿಧ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಹಲವು ಹಂತದ ಸಮಿತಿಗಳನ್ನು ರಚಿಸಲಾಗಿದೆ. ರಾಜ್ಯ ತಂಡವು ಮೇಲ್ವಿಚಾರಣೆ, ಪ್ರತಿದಿನದ ವರದಿ ತರಿಸಿಕೊಳ್ಳಲಿದೆ. ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಕಾರ್ಯದರ್ಶಿ ಜಗದೀಶ್ ಹಿರೇಮನಿ, ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಮಾಜಿ ಎಂಎಲ್​ಸಿ ಅರುಣ್ ಶಹಪುರ ರಾಜ್ಯ ತಂಡದಲ್ಲಿದ್ದಾರೆ.
ಅದೇ ರೀತಿ ಜಿಲ್ಲೆ, ಮಂಡಲ, ಶಕ್ತಿ ಕೇಂದ್ರಮಟ್ಟದಲ್ಲಿ ಸಂಯೋಜಕರು, ಗ್ರಾ.ಪಂ.ಮಟ್ಟದಲ್ಲಿ ತಂಡ, ಜಿಲ್ಲೆ ಹಾಗೂ ವಿಧಾನಸಭೆ ಕ್ಷೇತ್ರಕ್ಕೆ ತಲಾ ಮೂವರನ್ನು ಒಳಗೊಂಡ ವಿಶೇಷ ತಂಡಗಳು ರಚನೆಯಾಗಿವೆ.
ಅಮೃತ ಕಾಲದಲ್ಲಿ ದೇಶದೊಂದಿಗೆ ಕಾರ್ಯಕರ್ತರನ್ನು ಬೆಸೆಯುವ ಭಾವನಾತ್ಮಕ ಅಭಿಯಾನವಿದು. ದೇಶಾಭಿಮಾನ, ತಾಯ್ನೆಲದ ಬಗ್ಗೆ ಶ್ರೇಷ್ಠ ಭಾವನೆ, ಸೌಹಾರ್ದಯುತ ಒಡನಾಟ ಬೆಳೆಸುವುದು. ಜತೆಗೆ ಕಾರ್ಯಕರ್ತರಲ್ಲಿ ಚೈತನ್ಯ ತುಂಬುವುದು ಕಾರ್ಯಕ್ರಮಗಳ ಉದ್ದೇಶ.
| ಅರುಣ್ ಶಹಾಪುರ
ಉದ್ಘಾಟನಾ ಕಾರ್ಯಕ್ರಮ:ಬಿಜೆಪಿ ರಾಜ್ಯ ಕಚೇರಿ ಸಮೀಪದ ಕಾಡು ಮಲ್ಲೇಶ್ವರ ದೇವಸ್ಥಾನದಲ್ಲಿ ಬೆಳಗ್ಗೆ 10ಕ್ಕೆ ಪೂಜೆ ಸಲ್ಲಿಸುವ ಮೂಲಕ ‘ಮೇರಿ ಮಿಟ್ಟಿ ಮೇರಾ ದೇಶ್’ ಅಭಿಯಾನ ಉದ್ಘಾಟನೆಯಾಗಲಿದೆ. ಕಾರ್ಯಕ್ರಮದಲ್ಲಿ ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ, ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಎನ್.ರವಿಕುಮಾರ್, ಸಿದ್ದರಾಜು, ಕಾರ್ಯದರ್ಶಿ ಜಗದೀಶ್ ಹಿರೇಮನಿ, ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ್ ಶಹಪುರ ಹಾಜರಿರಲಿದ್ದಾರೆ.
ಮಂಡಲಮಟ್ಟದಲ್ಲಿ ಅ.3 ರಿಂದ 13
ರಾಜ್ಯಮಟ್ಟದಲ್ಲಿ ಅ.25 ರಿಂದ 28
ರಾಷ್ಟ್ರೀಯಮಟ್ಟದಲ್ಲಿ ಅ.29 ರಿಂದ 30


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 3 =
Remember me
