ನಾಗ್ಪುರ: ಬಳಕೆದಾರರಿಗೆ ಸ್ಮಾರ್ಟ್​​ಫೋನ್ ಎಷ್ಟು ಮುಖ್ಯವೋ ಅದರ ಅನ್​ಲಾಕ್ ಪ್ಯಾಟರ್ನ್ / ಪಾಸ್​ವರ್ಡ್ ಕೂಡ ಅಷ್ಟೇ ಮುಖ್ಯ. ಹಲವು ಸಲ ಯಾವ ಅನ್‌ಲಾಕ್ ಪ್ಯಾಟರ್ನ್ ಅಥವಾ ಪಾಸ್‌ವರ್ಡ್ ಅನ್ನು ಬಳಸಬೇಕು ಎಂಬ ಸಂದಿಗ್ಧತೆಯನ್ನು ಎದುರಿಸುತ್ತೇವೆ. ಈ ಸಂದಿಗ್ಧತೆ ಏಕೆಂದರೆ ಬಲವಾದ ಪಾಸ್‌ವರ್ಡ್ ಅಥವಾ ಸುಲಭವಾಗಿ ಮರೆಯಲಾಗದ ಸರಳವಾದದನ್ನು ಇಟ್ಟುಕೊಳ್ಳಬೇಕೆಂದು ನಿರ್ಧರಿಸಬೇಕಾಗುತ್ತದೆ.ಸ್ಮಾರ್ಟ್ ಫೋನ್ ಅನ್​​ಲಾಕ್ ಮಾದರಿ ಎಂಬುದು ಒಂದು ಗೌಪ್ಯತೆ ವಿಷಯ. ಗೆಳೆಯ, ಗೆಳತಿ, ಪ್ರೇಮಿ, ಹೆಂಡತಿ, ಗಂಡ, ಕುಟುಂಬದ ಸದಸ್ಯರು, ಅಷ್ಟೇ ಏಕೆ ಅಕೌಂಟ್ ಹ್ಯಾಕರ್​​ಗಳಿಂದ ರಹಸ್ಯ ಕಾಪಾಡಿಕೊಳ್ಳಲು ಎಷ್ಟು ಗೌಪ್ಯವಾದ ಪಾಸ್​​ವರ್ಡ್ ಅಥವಾ ಅನ್​​ಲಾಕ್ ಪ್ಯಾಟರ್ನ್ ಇಟ್ಟರೂ ಕಡಿಮೆಯೇ.
ಇದನ್ನೂ ಓದಿ :ಇದು ಕಥೆಯಲ್ಲ…. ಹದಿನಾರು ವರ್ಷ ಜೈಲು ವಾಸ ಅನುಭವಿಸಿದವ ಈಗ ವಿಶ್ವವಿದ್ಯಾಲಯದ ಅಪರಾಧ ಶಾಸ್ತ್ರದ ಪ್ರಾಧ್ಯಾಪಕ…!
ಡಿಜಿಟಲ್ ಕಳ್ಳತನ ಮತ್ತು ಹ್ಯಾಕಿಂಗ್ ಯುಗದಲ್ಲಿ, ಫೋನ್ ಮತ್ತು ಸಾಮಾಜಿಕ ಮಾಧ್ಯಮ ಖಾತೆಗಳಿಗೆ ಬಲವಾದ ಪಾಸ್‌ವರ್ಡ್ ಇಟ್ಟುಕೊಂಡರೆ ಉತ್ತಮ.ಬಲವಾದ ಪಾಸ್​​ವರ್ಡ್ ಇಟ್ಟುಕೊಳ್ಳುವ ಪ್ರಾಮುಖ್ಯತೆಯನ್ನು ಎತ್ತಿ ಹಿಡಿಯಲು, ವಿಶ್ವದಾದ್ಯಂತ ಹಲವಾರು ಪೊಲೀಸ್ ಇಲಾಖೆಗಳು ಪಾಸ್‌ವರ್ಡ್‌ಗಳು ಮತ್ತು ಸಾಮಾಜಿಕ ಮಾಧ್ಯಮ ಮತ್ತು ಡಿಜಿಟಲ್ ಖಾತೆಗಳ ಬಗ್ಗೆ ಪ್ರಮುಖ ವಿವರಗಳನ್ನು ನೀಡಲು ಅಭಿಯಾನವನ್ನು ಪ್ರಾರಂಭಿಸಿವೆ.ನಾಗ್ಪುರ ಪೊಲೀಸ್ ವಿಭಾಗ ಆಗಾಗ ಟ್ವಿಟರ್​​ನಲ್ಲಿ ಸಲಹಾ ಪೋಸ್ಟ್​​ಗಳನ್ನು ಹಂಚಿಕೊಳ್ಳುತ್ತದೆ. ಈ ಹಿಂದೆ, ಅವರು ತಮ್ಮ ಫಾಲೋವರ್​​ಗಳಿಗೆ ಸಾಮಾಜಿಕ ಮಾಧ್ಯಮ ಖಾತೆಗಳಿಗೆ ಸುಭದ್ರ ಪಾಸ್‌ವರ್ಡ್‌ಗಳನ್ನು ಬಳಸುವಂತೆ ತಿಳಿಸಿದ್ದರು. ಆದರೆ ಪಾಸ್‌ವರ್ಡ್‌ಗಳಿಗೆ ಸಂಬಂಧಪಟ್ಟಂತೆ ಅವರ ಇತ್ತೀಚಿನ ಪೋಸ್ಟ್ ಸಾಮಾಜಿಕ ಮಾಧ್ಯಮ ಖಾತೆಗಳಲ್ಲ, ಅದು ನಮ್ಮ ಫೋನ್‌ಗಳಿಗೆ ಸಂಬಂಧಿಸಿದ್ದು.
ಇದನ್ನೂ ಓದಿ:ಔಷಧಿ ಕಂಡುಹಿಡಿದ ಬಯೋಕಾನ್‌ ವ್ಯವಸ್ಥಾಪಕಿಗೂ ಬಿಡದ ಕರೊನಾ: ಟ್ವೀಟ್‌
ಫೋನ್‌ಗಳಿಗೆ ಬಲವಾದ ಪಾಸ್‌ವರ್ಡ್‌ಗಳನ್ನು ಬಳಸುವ ಬಗ್ಗೆ ಜನರಿಗೆ ತಿಳಿಸುವ ಪ್ರಯತ್ನದಲ್ಲಿ, ನಾಗ್ಪುರ ಪೊಲೀಸರು ವೀಡಿಯೊವನ್ನು ಹಂಚಿಕೊಂಡಿದ್ದಾರೆ, ಅದು ವ್ಯಕ್ತಿಯು ಫೋನ್ ಅನ್ಲಾಕ್ ಮಾಡಲು ಬಳಸುವ ಮಾದರಿಯನ್ನು ತೋರಿಸುತ್ತದೆ.ಅನ್‌ಲಾಕ್ ಮಾದರಿಗಳು ಸ್ಮಾರ್ಟ್‌ಫೋನ್ ಬಳಕೆದಾರರಿಗೆ ದೊಡ್ಡ ವಿಷಯವಲ್ಲವಾದರೂ, ಈ ನಿರ್ದಿಷ್ಟ ಮಾದರಿಯು ನೆಟಿಜನ್‌ಗಳಿಗೆ ಒಂಥರ ತಮಾಷೆ ಎನಿಸಿದೆ.
"Choose a strong password to secure your device"Password –pic.twitter.com/qkVw0cNgSw— Nagpur City Police (@NagpurPolice)August 18, 2020
"Choose a strong password to secure your device"Password –pic.twitter.com/qkVw0cNgSw
ಫೋನ್ ಅನ್ಲಾಕ್ ಮಾಡಲು ಆ ವ್ಯಕ್ತಿ ಏನು ಮಾಡುತ್ತಿದ್ದಾರೆಂಬುದನ್ನು ವಿವರಿಸುವುದು ಕಷ್ಟ. ಎಲ್ಲ ಮಾದರಿಯ ಚುಕ್ಕೆಗಳನ್ನು ಬಳಸಲಾಗಿದೆ ಎಂಬುದು ಅರ್ಥವಾಗುವ ಏಕೈಕ ವಿಷಯ.ವೀಡಿಯೊ ಶೇರ್ ಆದಾಗಿನಿಂದ 2,000 ಕ್ಕೂ ಹೆಚ್ಚು ಬಾರಿ ವೀಕ್ಷಿಸಲ್ಪಟ್ಟಿದೆ. ಟ್ವಿಟರ್ ಬಳಕೆದಾರರು ಇದಕ್ಕೆ ಆಶ್ಚರ್ಯಪಟ್ಟಿದ್ದು, ಉತ್ತಮ ಪ್ರತಿಕ್ರಿಯೆ ಬಂದಿದೆ.
ಪ್ರಧಾನಿ ಮೋದಿ, ಅಮಿತ್​ ಷಾಗೆ ಕ್ಲೀನ್​ ಚಿಟ್​ ಕೊಟ್ಟಿದ್ದನ್ನು ವಿರೋಧಿಸಿದ್ದ ಚುನಾವಣಾ ಆಯುಕ್ತ ಅಶೋಕ್​ ಲಾವಸಾ ರಾಜೀನಾಮೆ

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:seventeen − three =
Remember me
