ನವದೆಹಲಿ:ಹಿಂದಿನ ಕಾಂಗ್ರೆಸ್ ಸರ್ಕಾರವು ತನ್ನ ಅಧಿಕಾರಾವಧಿಯಲ್ಲಿ ಭಾರತೀಯ ಬಾಹ್ಯಾಕಾಶ ಸಂಸ್ಥೆಗೆ ಸಾಕಷ್ಟು ಹಣವನ್ನು ಹಂಚಿಕೆ ಮಾಡಲಿಲ್ಲ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮಾಜಿ ವಿಜ್ಞಾನಿ ನಂಬಿ ನಾರಾಯಣನ್ ಹೇಳಿದ್ದಾರೆ.
ಇದನ್ನೂ ಓದಿ:ಚಂದ್ರಯಾನ ನವಭಾರತ ಚೈತನ್ಯದ ಸಂಕೇತ; ಬಾಹ್ಯಾಕಾಶಕ್ಕೂ ಭಾರತೀಯ ಪುತ್ರಿಯರ ಸವಾಲು
ಇಸ್ರೋದ ಆರಂಭಿಕ ದಿನಗಳಲ್ಲಿ ನಂಬಿ ನಾರಾಯಣನ್ ಅವರು ಇಸ್ರೋ ಬಗ್ಗೆ ಮಾತನಾಡಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ಹಿಂದೆ ಇಸ್ರೋಗೆ ಹಂಚಿಕೆಯಾದ ಹಣದ ಬಗ್ಗೆ ಮಾಜಿ ವಿಜ್ಞಾನಿ ಮಾತನಾಡುವ ವೀಡಿಯೊವನ್ನು ಬಿಜೆಪಿ ಕೂಡ ಹಂಚಿಕೊಂಡಿದೆ.
Listen to former ISRO scientist Nambi Narayanan. This is a damning indictment of Congress regimes, who had different priorities, never prioritised space research, funds were not allotted, ISRO had no jeeps or cars for research work. They had just one bus, which moved in shifts……pic.twitter.com/Cc1SP1PO3a
— BJP (@BJP4India)August 27, 2023

ಇಸ್ರೋ ತನ್ನ ವಿಶ್ವಾಸಾರ್ಹತೆಯನ್ನು ತೋರಿಸಿದ ನಂತರವೇ ಸರ್ಕಾರವು ಬಾಹ್ಯಾಕಾಶ ಸಂಸ್ಥೆಗೆ ಧನಸಹಾಯವನ್ನು ನೀಡಿದೆ ಎಂದು ನಾರಾಯಣನ್ ಹೇಳಿದ್ದಾರೆ. “ನಮ್ಮ ಬಳಿ ಜೀಪ್ ಇರಲಿಲ್ಲ. ನಮ್ಮ ಬಳಿ ಕಾರು ಇರಲಿಲ್ಲ. ನಮ್ಮ ಬಳಿ ಏನೂ ಇರಲಿಲ್ಲ. ಅಂದರೆ, ನಮಗೆ ಯಾವುದೇ ಬಜೆಟ್ ಹಂಚಿಕೆ ಇರಲಿಲ್ಲ. ಈ ಪರಿಸ್ಥಿತಿ ಆರಂಭದಲ್ಲಿತ್ತು, “ಎಂದು ಅವರು ಹೇಳಿದರು.
ಇದನ್ನೂ ಓದಿ:ಚಂದ್ರಯಾನ -3 | ರೋವರ್ ಲ್ಯಾಂಡ್‍ ಆದ ಸ್ಥಳದ ಹೆಸರನ್ನು ವಿವಾದ ಮಾಡಬೇಡಿ ಎಂದ ಇಸ್ರೋ ಮುಖ್ಯಸ್ಥರು!
ಪ್ರಧಾನಿ ನರೇಂದ್ರ ಮೋದಿ ಐತಿಹಾಸಿಕ ಚಂದ್ರಯಾನದ ಕ್ರೆಡಿಟ್‍ ಪಡೆದಿದ್ದಾರೆ ಎಂಬ ಪ್ರತಿಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯಿಸಿದ ನಂಬಿ ನಾರಾಯಣನ್, ಚಂದ್ರಯಾನ -3 ರಂತಹ ರಾಷ್ಟ್ರೀಯ ಯೋಜನೆಗೆ ಪ್ರಧಾನಿ ಅಲ್ಲದಿದ್ದರೆ ಬೇರೆ ಯಾರಿಗೆ ಕ್ರೆಡಿಟ್ ನೀಡಲು ಸಾಧ್ಯ ಎಂದು ಕೇಳಿದರು.
“ನೀವು ರಾಷ್ಟ್ರೀಯ ಯೋಜನೆಯ ವಿಚಾರಕ್ಕೆ ಬಂದಾಗ, ಬೇರೆ ಯಾರಿಗೆ ಕ್ರೆಡಿಟ್ ನೀಡಬಹುದು? ಪ್ರಧಾನಮಂತ್ರಿಗೇ ನೀಡಬೇಕು. ನೀವು ಪ್ರಧಾನಿಯನ್ನು ಇಷ್ಟಪಡದಿರಬಹುದು. ಅದು ನಿಮ್ಮ ಸಮಸ್ಯೆ” ಎಂದು ನಂಬಿ ನಾರಾಯಣನ್ ಹೇಳಿದರು.
ಇದನ್ನೂ ಓದಿ:ಬಾಂಬ್​ ಸಿಡಿಸಿದ ಅಣ್ಣಾಮಲೈ! ಎಐಎಡಿಎಂಕೆ ಜತೆ ಬಿಜೆಪಿ ಮೈತ್ರಿ ಮಾಡಿಕೊಂಡರೆ ಪಕ್ಷಾಧ್ಯಕ್ಷ ಹುದ್ದೆಗೆ ಗುಡ್ ಬೈ!
ಬಾಹ್ಯಾಕಾಶ ವಿಜ್ಞಾನಿಗಳು ತಮ್ಮ ವೇತನವನ್ನು ಸಮಯಕ್ಕೆ ಸರಿಯಾಗಿ ಪಡೆಯುತ್ತಿಲ್ಲ ಎಂಬ ಹೇಳಿಕೆಗಳಲ್ಲಿ ಏನಾದರೂ ಸತ್ಯವಿದೆಯೇ ಎಂದು ಇಸ್ರೋದ ಮಾಜಿ ವಿಜ್ಞಾನಿಯನ್ನು ಕೇಳಲಾಯಿತು. ಆಗ ಅವರು, “ಸಂಬಳ ಅಥವಾ ಪಿಂಚಣಿಯನ್ನು ಜಮಾ ಮಾಡುವಲ್ಲಿ ಯಾವುದೇ ವಿಳಂಬವಾಗಿಲ್ಲ” ಎಂದು ಹೇಳಿದರು. ಜತೆಗೆ ತಾವು ಪ್ರತಿ ತಿಂಗಳ 29ನೇ ತಾರೀಖಿನಂದು ಪಿಂಚಣಿ ಪಡೆಯುತ್ತಿರುವುದಾಗಿ ಹೇಳಿದರು.
ಬಿಜೆಪಿ ನಾಯಕ ಅಮಿತ್ ಮಾಳವೀಯ ಅವರು ಸಂದರ್ಶನದ ತುಣುಕುಗಳನ್ನು ಎಕ್ಸ್ ನಲ್ಲಿ ಹಂಚಿಕೊಂಡಿದ್ದು ಭಾರತದ ಬಾಹ್ಯಾಕಾಶ ಕಾರ್ಯಾಚರಣೆಗಳಿಗೆ ಪ್ರಧಾನಿ ಮೋದಿ ಹೆಚ್ಚಿನ ಬಜೆಟ್ ಅನ್ನು ಖಚಿತಪಡಿಸಿದ್ದಾರೆ ಎಂದು ಹೇಳಿದರು. “ಅಂದಿನಿಂದ ಇಂದಿನವರೆಗೆ… ಪ್ರಧಾನಿ ಮೋದಿ ಅವರು ಹೆಚ್ಚಿನ ಬಜೆಟ್ ಅನ್ನು ಖಚಿತಪಡಿಸಿದಾಗ ಮತ್ತು ನಮ್ಮ ವಿಜ್ಞಾನಿಗಳೊಂದಿಗೆ ನಿಂತಾಗ, ಅವರ ಯಶಸ್ಸು ಮತ್ತು ವೈಫಲ್ಯಗಳಲ್ಲಿ, ಭಾರತದ ಬಾಹ್ಯಾಕಾಶ ಕಾರ್ಯಾಚರಣೆಗಳು ಬಹಳ ದೂರ ಸಾಗಿವೆ” ಎಂದು ಅವರು ಬರೆದಿದ್ದಾರೆ.
ಇದನ್ನೂ ಓದಿ:ನಂಬಿ ನಾರಾಯಣನ್ ಗೂಢಚರ್ಯೆ ಪ್ರಕರಣ: ಸಿಬಿಐ ತನಿಖೆ ಮುಂದುವರೆಸಲು ಸುಪ್ರೀಂ ಆದೇಶ
ಆಗಸ್ಟ್ 3ರಂದು ಚಂದ್ರಯಾನ -3 ಚಂದ್ರನ ಮೇಲೆ ಯಶಸ್ವಿಯಾಗಿ ಲ್ಯಾಂಡಿಂಗ್ ಆದ ನಂತರ ಮಾಡಿದ ಭಾಷಣವನ್ನು ಉಲ್ಲೇಖಿಸಿ ಪ್ರಧಾನಿ ನರೇಂದ್ರ ಮೋದಿಯವರನ್ನು ಕಾಂಗ್ರೆಸ್ ಟೀಕಿಸಿತ್ತು.
“ಲ್ಯಾಂಡಿಂಗ್ ನಂತರ ನೀವು ಪರದೆಯ ಮೇಲೆ ಬಂದು ಕ್ರೆಡಿಟ್ ತೆಗೆದುಕೊಳ್ಳಲು ತ್ವರಿತವಾಗಿ ಬಂದಿದ್ದೀರಿ, ಆದರೆ ವಿಜ್ಞಾನಿಗಳು ಮತ್ತು ಇಸ್ರೋವನ್ನು ಬೆಂಬಲಿಸುವಲ್ಲಿ ನಿಮ್ಮ ಸರ್ಕಾರ ಏಕೆ ಭೀಕರವಾಗಿ ವಿಫಲವಾಗಿದೆ?” ಎಂದು ಕಾಂಗ್ರೆಸ್ ಮುಖಂಡ ಕೆ.ಸಿ.ವೇಣುಗೋಪಾಲ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದರು.(ಏಜೆನ್ಸೀಸ್)
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:10 − three =
Remember me
