–ಟಿ20 ವಿಶ್ವಕಪ್ ಗೆದ್ರು ಪ್ರತಿಕ್ರಿಯೆ ನೀಡದ ಹಾರ್ದಿಕ್ ಪತ್ನಿ
ನವದೆಹಲಿ:ಬಾರ್ಬಡೋಸ್‌ನಲ್ಲಿ ನಡೆದ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಭಾರತ ಐತಿಹಾಸಿಕ ಗೆಲುವು ದಾಖಲಿಸಿದೆ. ಭಾರತದ ಗೆಲುವಿನಲ್ಲಿ ಹಾರ್ದಿಕ್ ಪಾಂಡ್ಯ ಪ್ರಮುಖ ಪಾತ್ರ ವಹಿಸಿದ್ದರು. ಕಪ್ ಗೆದ್ದ ನಂತರ ಹಾರ್ದಿಕ್ ಮೈದಾನದಲ್ಲಿ ಕಣ್ಣೀರು ಹಾಕಿದರು. ಕಳೆದ ಕೆಲವು ತಿಂಗಳುಗಳಿಂದ ಅನುಭವಿಸುತ್ತಿರುವ ಮಾನಸಿಕ ಯಾತನೆ ಕುರಿತು ಭಾವುಕರಾದರು. ಆದರೆ ವಿಶ್ವಕಪ್ ಗೆದ್ದ ನಂತರ ಹಾರ್ದಿಕ್ ಪತ್ನಿ ನತಾಶಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂಬುದು ಗಮನಾರ್ಹ.
ಹಾರ್ದಿಕ್ ಅಥವಾ ಟೀಂ ಇಂಡಿಯಾಗೆ ಸಂಬಂಧಿಸಿದಂತೆ ಒಂದೇ ಒಂದು ಪೋಸ್ಟ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿಲ್ಲ. ಆದರೆ ವಿಶ್ವಕಪ್ ಗೆದ್ದ ಮೂರು ದಿನಗಳ ನಂತರ, ನತಾಶಾ ತನ್ನ ಇನ್​ಸ್ಟಾಗ್ರಾಮ್​​ನಲ್ಲಿ ಮೊದಲ ಬಾರಿಗೆ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಕೂಡ ಹಾರ್ದಿಕ್ ಬಗ್ಗೆ ಅಲ್ಲ. ಇದರಿಂದಾಗಿ ಅಭಿಮಾನಿಗಳು ಮತ್ತು ನೆಟಿಜನ್‌ಗಳು ಆಕೆಯ ಮೇಲೆ ಕೋಪಗೊಂಡಿದ್ದಾರೆ. ನೀವು ಹಾರ್ದಿಕ್ ಜೊತೆ ಇದ್ದೀರೋ ಇಲ್ಲವೋ ಹೇಳಿ’ ಎಂದು ಅವರ ಪೋಸ್ಟ್‌ಗೆ ಕಾಮೆಂಟ್‌ಗಳ ಸುರಿಮಳೆ ಗೈದಿದ್ದಾರೆ.

A post shared by @natasastankovic__

ಇಂದು ನತಾಶಾ ತಮ್ಮ ಫೋಟೋಗಳನ್ನು Instagram ನಲ್ಲಿ ಪೋಸ್ಟ್ ಮಾಡಿದ್ದಾರೆ. ಭಾರತ ವಿಶ್ವಕಪ್ ಗೆದ್ದ ನಂತರ ಇದು ಅವರ ಮೊದಲ ಪೋಸ್ಟ್ ಆಗಿದೆ. ಹಾಗಾಗಿಯೇ ಎಲ್ಲರ ಗಮನ ಸೆಳೆದಿತ್ತು. ನತಾಶಾ ಪೋಸ್ಟ್ ಮಾಡಿದ ಫೋಟೋಗಳಲ್ಲಿ, ಅವರು ತಮ್ಮ ಉಡುಗೆ ಮತ್ತು ಪರ್ಸ್ ಅನ್ನು ತೋರಿಸುತ್ತಾರೆ. ಅವರು ಈ ಫೋಟೋಗಳಿಗೆ ‘ಫಿಟ್ ಚೆಕ್’ ಎಂದು ಶೀರ್ಷಿಕೆ ನೀಡಿದ್ದಾರೆ. ಈ ಫೋಟೋಗೆ ಲೈಕ್‌ಗಳ ಮಹಾಪೂರವೇ ಹರಿದು ಬರುತ್ತಿದೆ. ಆದರೆ ಅದರ ಜೊತೆಗೆ ಹಾರ್ದಿಕ್ ಮೇಲೆ ಹಲವು ಪ್ರಶ್ನೆಗಳನ್ನು ಎಸೆದಿದ್ದಾರೆ.
‘ಹಾರ್ದಿಕ್ ವಿಶ್ವಕಪ್ ಗೆದ್ದಿದ್ದಾರೆ, ಅವರಿಗೆ ಮೆಚ್ಚುಗೆಯ ಪೋಸ್ಟ್ ಎಲ್ಲಿದೆ?. ನತಾಶಾ ನಾವು ಇನ್ನು ಮುಂದೆ ಕಾಯಲು ಸಾಧ್ಯವಿಲ್ಲ. ಹಾರ್ದಿಕ್ ಜೊತೆ ಇದ್ದೀರೋ ಇಲ್ಲವೋ ನೇರವಾಗಿ ಹೇಳಿ?, ವಿಶ್ವಕಪ್ ಬರಲಿ, ಬರದಿರಲಿ ಇಂಥಾ ಹೆಂಡತಿ ಯಾರಿಗೂ ಬೇಡ ಎಂದು ಕಾಮೆಂಟ್ ಮಾಡಿದ್ದಾರೆ.
ಕಳೆದ ಕೆಲವು ತಿಂಗಳುಗಳಿಂದ ಹಾರ್ದಿಕ್ ಪಾಂಡ್ಯ ಹಾಗೂ ನತಾಶಾ ಮದುವೆ ಬಗ್ಗೆ ಹಲವು ಸುದ್ದಿಗಳು ಹರಿದಾಡುತ್ತಿವೆ. ಇಬ್ಬರೂ ವಿಚ್ಛೇದನ ಪಡೆಯುತ್ತಿದ್ದಾರೆ ಮತ್ತು ಈಗಾಗಲೇ ಬೇರೆಯಾಗಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿವೆ. ಆದರೆ, ಈ ಸುದ್ದಿಗೆ ಈವರೆಗೆ ಇಬ್ಬರೂ ಪ್ರತಿಕ್ರಿಯಿಸಿದ ದಾಖಲೆಗಳಿಲ್ಲ. ಮದುವೆಯ ನಂತರ ನತಾಶಾ ತನ್ನ ಹೆಸರಿಗೆ ಪಾಂಡ್ಯವನ್ನು ಸೇರಿಸಿದಳು. ಆದರೆ ಈಗ ಅದನ್ನು ತೆಗೆದುಹಾಕಲಾಗಿದೆ. ಅಲ್ಲದೇ ಹಾರ್ದಿಕ್ ಜೊತೆಗಿನ ಕೆಲವು ಫೋಟೋಗಳನ್ನು ಡಿಲೀಟ್ ಮಾಡಿದ್ದಾರೆ. ಇದು ವಿಚ್ಛೇದನದ ವದಂತಿಗಳಿಗೆ ಕಾರಣವಾಗಿದೆ. ಆದರೆ ಈ ಕುರಿತಾಗಿ ಯಾವುದೇ ಸ್ಪಷ್ಟನೆಯನ್ನು ಈ ಜೋಡಿ ನೀಡಿಲ್ಲ.
ಶ್ರೀ ಕೃಷ್ಣನ ಫೋಟೋ ಜತೆ ಭಗವದ್ಗೀತೆ ಸಂದೇಶ ಹಂಚಿಕೊಂಡ ಪಾಕ್​ ಆಟಗಾರ ಶೋಯೆಬ್ ಅಖ್ತರ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × two =
Remember me
