ಮುಂಬೈ:ಬಾಲಿವುಡ್​ ನಟ ನವಾಜುದ್ದೀನ್ ಸಿದ್ದಿಕಿ ಪತ್ನಿ ಆಲಿಯಾ ಸಿದ್ದಿಕಿಗೆ ವಿಚ್ಛೇದನ ನೀಡಿದ್ದರು. ಇಬ್ಬರ ಕಿತ್ತಾಟ ದೊಡ್ಡಮಟ್ಟದಲ್ಲಿ ಸುದ್ದಿಯಾಗಿತ್ತು. ಕಿತ್ತಾಡಿಕೊಂಡು ದೂರವಾಗಿದ್ದ ಈ ಜೋಡಿ ತಮ್ಮ ಮಕ್ಕಳ ಸಲುವಾಗಿ ಮತ್ತೆ ಒಂದಾಗಲಿದ್ದಾರೆ ಎನ್ನುವ ಸುದ್ದಿಯೊಂದು ಬಾಲಿವುಡ್​ ಅಂಗಳದಲ್ಲಿ ಹರಿದಾಡುತ್ತಿದೆ.
ನವಾಜುದ್ದೀನ್ ಸಿದ್ದಿಕಿ ವಿಚ್ಛೇದಿತ ಪತ್ನಿ ಆಲಿಯಾ ಸಿದ್ದಿಕ್ ಅವರು ತಮ್ಮ 14 ನೇ ವಿವಾಹ ವಾರ್ಷಿಕೋತ್ಸವದಂದು ತನ್ನ ಪತಿಗೆ ವಿಶ್ ಮಾಡುವ ವೀಡಿಯೊವನ್ನು ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದರು. ಇವರಿಬ್ಬರು ರಾಜಿಯಾಗಿದ್ದಾರೆ ಎಂದು ಫ್ಯಾನ್ಸ್​​ ಕಾಮೆಂಟ್​​ ಮಾಡುತ್ತಿದ್ದಾರೆ.

ಇತ್ತೀಚಿನ ಸಂದರ್ಶನದಲ್ಲಿ ಆಲಿಯಾ, ಮೂರನೇ ವ್ಯಕ್ತಿಯ ಕಾರಣದಿಂದಾಗಿ ತಮ್ಮ ಸಂಬಂಧದಲ್ಲಿ ಸಮಸ್ಯೆಗಳನ್ನು ಎದುರಿಸಿದ್ದೇವೆ. ತಪ್ಪು ತಿಳುವಳಿಕೆಯಿಂದ ಇಬ್ಬರು ಹೊರಗೆ ಬಂದಿದ್ದೇವೆ. ಮಕ್ಕಳಾದ ಶೋರಾ ಮತ್ತು ಯಾನಿಯಿಂದಾಗಿ ನಾವು ಮೊದಲಿನಂತೆ ಪತಿ-ಪತ್ನಿಯಾಗಿ ಜೀವಿಸಲಿದ್ದೇವೆ. ಮಕ್ಕಳು ಸಹ ಬೆಳೆಯುತ್ತಿದ್ದಾರೆ. ಅಲ್ಲದೆ ನವಾಜ್ ಶೋರಾಗೆ ತುಂಬಾ ಹತ್ತಿರವಾಗಿದ್ದಾರೆ. ಇಲ್ಲಿಯವರೆಗೆ ನಡೆದಿರುವುದರಿಂದ ಮಗಳು ತುಂಬಾ ತೊಂದರೆಗೀಡಾಗಿದ್ದಳು. ಅವಳಿಗೆ ಅದನ್ನು ಸಹಿಸಲಾಗಲಿಲ್ಲ. ಆದ್ದರಿಂದ ನಾವು ಶಾಂತಿಯುತವಾಗಿ ಒಟ್ಟಿಗೆ ಬದುಕುತ್ತೇನೆ ಎಂದು ಅವರು ಹೇಳಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಪರಿಸ್ಥಿತಿ ಬದಲಾಗಿದೆ. ನಾವು ಜಗತ್ತಿನೊಂದಿಗೆ ಕೆಟ್ಟ ವಿಷಯಗಳನ್ನು ಹಂಚಿಕೊಂಡಾಗ, ಒಳ್ಳೆಯದನ್ನು ಸಹ ಹಂಚಿಕೊಳ್ಳಬೇಕು ಎಂದು ನಾನು ಭಾವಿಸುತ್ತೇನೆ. ಒಳ್ಳೆಯದನ್ನು ಸಹ ಜನ ನೋಡಬೇಕು ಎಂದು ನಾನು ಭಾವಿಸುತ್ತೇನೆ. ನವಾಜ್ ಕೂಡ ಇಲ್ಲಿದ್ದರು, ಆದ್ದರಿಂದ ನಾವು ಮಕ್ಕಳೊಂದಿಗೆ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿದ್ದೇವೆ ಎಂದು ಆಲಿಯಾ ಹೇಳಿದರು.

ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡಿದ್ರು, ಕೊತ್ತಂಬರಿ ಸೊಪ್ಪು ಸಹ ಮಾರಾಟ ಮಾಡಿದ್ದ ನವಾಜುದ್ದೀನ್, ದೆಹಲಿಗೆ ಬಂದು ನಟನೆಯತ್ತ ಗಮನ ಹರಿಸಿದ್ರು. ನವಾಜುದ್ದೀನ್ ಸಿದ್ದಿಕಿ ಬಹುಮುಖ ನಟನೆಯಿಂದ ಬಾಲಿವುಡ್ ನಲ್ಲಿ ವಿಶೇಷ ಕ್ರೇಜ್ ಸೃಷ್ಟಿಸಿದ್ದಾರೆ. ಸಿನಿಮಾದಲ್ಲಿ ಖಳನಟನಾಗಿ ನಟಿಸಿ ಅಭಿಮಾನಿಗಳ ಮನಗೆದ್ದಿದ್ದಾರೆ.

ನವಾಜ್ ಮತ್ತು ಆಲಿಯಾ 2009 ರಲ್ಲಿ ವಿವಾಹವಾದರು ಮತ್ತು ಇಬ್ಬರು ಮಕ್ಕಳಿದ್ದಾರೆ. ನವಾಜ್ ತನಗೆ ತಿಳಿಸದೆ ಮಕ್ಕಳನ್ನು ದುಬೈಗೆ ಕರೆತಂದ ನಂತರ ದೂರವಾದ ಹೆಂಡತಿಯ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದರು.ನನ್ನ ಮಕ್ಕಳಿಬ್ಬರೂ ನನ್ನೊಂದಿಗೆ ಇರಲು ಬಯಸುತ್ತಾರೆ ಮತ್ತು ಅವನೊಂದಿಗೆ ಬದುಕಲು ಬಯಸುವುದಿಲ್ಲ ಎಂದು ಹೇಳಲಾಗಿತ್ತು. ಕೊನೆಗೂ ಈ ಜೋಡಿ ವಿಚ್ಛೇದನ ಪಡೆದುಕೊಂಡಿತ್ತು. ಆದರೆ ಇದೀಗ ಮಕ್ಕಳಿಗಾಗಿ ದಂಪತಿ ಮತ್ತೆ ಒಂದಾಗಲಿದ್ದಾರಂತೆ.
ಹಣಕ್ಕಾಗಿ ನಾನು…ಮಾಡಿದ್ದೇನೆ; ಜನ್ಮದಿನ ಸಂಭ್ರಮದಲ್ಲಿರುವ ಪ್ರಕಾಶ್ ರೈ ಹೀಗೆ ಹೇಳಿದ್ಯಾಕೆ?

ಮಗಳಿಗೆ ಓದು ಅಂತಾ ಕಳುಹಿಸಿದ್ರೆ ಹೀಗೆ ಮಾಡ್ತಿದ್ದಾಳೆ! ಬದಲಾಯಿಸಲು ಸಾಧ್ಯವಿಲ್ಲ ಎಂದ ನಟಿ ಊರ್ವಶಿ

ಸಿನಿಮಾ ಶೂಟಿಂಗ್ ಎಂದು ಸುಳ್ಳು ಹೇಳಿ ಮದುವೆಯಾದ ಸಿದ್ಧಾರ್ಥ್ ಜೋಡಿ

ಮಾವಿನಕಾಯಿ ತಿನ್ನಬೇಕು ಅನಿಸುತ್ತಾ? ಹಾಗಿದ್ರೆ ತಪ್ಪದೇ ಈ ಸುದ್ದಿ ಓದಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + one =
Remember me
