ಧಮ್ತಾರಿ: ಛತ್ತೀಸ್​ಗಢದ ಧಮ್ತಾರಿ ಜಿಲ್ಲೆಯಲ್ಲಿ ಭಾನುವಾರ ರಾತ್ರಿ ನಡೆದ ಕಾರ್ಯಾಚರಣೆಯಲ್ಲಿ ನಕ್ಸಲ್ ಒಬ್ಬ ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದಾನೆ. ನಕ್ಸಲರ ಇರುವಿಕೆಯ ಮಾಹಿತಿ ಲಭ್ಯವಾದ ಕಾರಣ ಪೊಲೀಸರು ಶೋಧ ಕಾರ್ಯಾಚರಣೆ ಶುರುಮಾಡಿದ್ದರು. ರಾತ್ರಿ ವೇಳೆ ಮುಖಾಮುಖಿ ಸಂಭವಿಸಿದೆ.
ನಗ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಘೋರಾಗಾಂವ್​ ಅರಣ್ಯ ಪ್ರದೇಶದಲ್ಲಿ ಈ ಎನ್​ಕೌಂಟರ್ ನಡೆದಿದೆ. ಇದು ಧಮ್ತಾರಿಯಿಂದ 80 ಕಿ.ಮೀ. ದೂರದಲ್ಲಿದೆ. ಜಿಲ್ಲಾ ಮೀಸಲು ರಕ್ಷಣಾ ಪಡೆ ಪೊಲೀಸರು ಶೋಧ ಕಾರ್ಯ ನಡೆಸಿದ್ದರು. ಗಸ್ತು ಪಡೆ ಅರಣ್ಯದೊಳಭಾಗಕ್ಕೆ ತೆರಳಿದಾಗ ಅಲ್ಲಿದ್ದ ನಕ್ಸಲರು ಗುಂಡಿನ ದಾಳಿ ಶುರುಮಾಡಿದ್ದರು. ಪ್ರತಿಯಾಗಿ ಪೊಲೀಸರು ನಡೆಸಿದ ದಾಳಿಗೆ ಒಬ್ಬ ನಕ್ಸಲ ಬಲಿಯಾಗಿದ್ದಾನೆ. ಸ್ಥಳದಿಂದ ಶಸ್ತ್ರಾಸ್ತ್ರಗಳನ್ನು ವಶಪಡಿಸಲಾಗಿದೆ.
ಇದನ್ನೂ ಓದಿ:ಛಾಪಾ ಕಾಗದದಲ್ಲಿ ಏನೂ ಬೇಡವೆಂದು ತಾಯಿ ಬರೆದರೆ ಮಗುವಿಗೆ ಜೀವನಾಂಶ ಸಿಗುವುದಿಲ್ಲವೇ?
ಮೃತ ನಕ್ಸಲನನ್ನು ರವಿ ಎಂದು ಗುರುತಿಸಲಾಗಿದೆ. ಈತ ಗೋಬ್ರಾ ಎಲ್​ಒಎಸ್​(ಲೋಕಲ್​ ಆರ್ಗನೈಸೇಷನ್ ಸ್ಕ್ವಾಡ್​) ಆಫ್​ ಮಾವೋಯಿಸ್ಟ್​ ಸಂಘಟನೆಯ ಸಕ್ರಿಯ ಸದಸ್ಯ. ಪೊಲೀಸರು ಉಳಿದ ನಕ್ಸಲರಿಗಾಗಿ ಶೋಧಕಾರ್ಯ ಮುಂದುವರಿಸಿದ್ದಾರೆ. (ಏಜೆನ್ಸೀಸ್)
ಕನ್ನಡದಲ್ಲೂ ವಿದ್ಯಾಸುಂದರಿ ಬೆಂಗಳೂರು ನಾಗರತ್ಮಮ್ಮ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 1 =
Remember me
