ವಿಜಯವಾಡ:ಆಂಧ್ರಪ್ರದೇಶದಲ್ಲಿ ಎನ್‌ಡಿಎ ಮೈತ್ರಿಕೂಟ ಅನಿರೀಕ್ಷಿತ ಗೆಲುವು ಸಾಧಿಸಿದ್ದು, ಇದು ಸಣ್ಣ ಗೆಲುವಲ್ಲ ಎಂದು ದಿ.ಎನ್​ಟಿಆರ್​ ಪುತ್ರಿ, ರಾಜ್ಯ ಬಿಜೆಪಿ ಅಧ್ಯಕ್ಷೆ ದಗ್ಗುಬಾಟಿ ಪುರಂದೇಶ್ವರಿ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ:ಭಾರತದಲ್ಲಿ ತಯಾರಿಸಿದ ಐಫೋನ್‌ಗಳು.. 2 ತಿಂಗಳಲ್ಲಿ ದಾಖಲೆ ರಫ್ತು!
ಈ ವಿಜಯದಲ್ಲಿ ನಮಗೆ ಎಚ್ಚರಿಕೆ, ಮಾಡಬೇಕಾದ ಕರ್ತವ್ಯ ಅಡಗಿದೆ. ಕಳೆದ ಐದು ವರ್ಷಗಳಲ್ಲಿ ಜನರು ಅನೇಕ ಕಷ್ಟಗಳನ್ನು ಎದುರಿಸಿದ್ದಾರೆ. ಹಿಂದಿನ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿತ್ತು. ಹಿಂದಿನ ಸರ್ಕಾರದ ನಡವಳಿಕೆಯಿಂದ ಜನರು ತಕ್ಕ ಪಾಠ ಕಲಿತಿದ್ದಾರೆ ಎಂದರು.
ವಿಜಯವಾಡದ ಬಿಜೆಪಿ ರಾಜ್ಯ ಕಚೇರಿಯಲ್ಲಿ ನಡೆದ ರಾಜ್ಯ ಪದಾಧಿಕಾರಿಗಳ ಸಭೆಯಲ್ಲಿ ಅವರು ಈ ವಿಷಯ ತಿಳಿಸಿದರು.
ಅಧಿಕಾರಕ್ಕೆ ಬಂದ ನಂತರ ಅಭಿವೃದ್ಧಿ ಮಾಡದಿದ್ದರೆ ಜನ ತಕ್ಕ ಪಾಠ ಕಲಿಸುತ್ತಾರೆ ಎಂಬುದನ್ನು ಈ ಫಲಿತಾಂಶಗಳು ಸಾಬೀತುಪಡಿಸಿವೆ ಎಂದು ಪುರಂದೇಶ್ವರಿ ಪ್ರತಿಕ್ರಿಯಿಸಿದ್ದಾರೆ.
ಹಿಂದಿನ ಸರ್ಕಾರ ಗುಂಪುಗಾರಿಕೆಯಿಂದ ನಡೆದುಕೊಂಡಿತ್ತು. ಈಗ ಎನ್​ಡಿಎ ಮೈತ್ರಿಕೂಟ 164 ಸ್ಥಾನ ಪಡೆದಿದ್ದು, ಇಷ್ಟು ದೊಡ್ಡ ಬಹುಮತವನ್ನು ಯಾರೂ ನಿರೀಕ್ಷಿಸಿರಲಿಲ್ಲ, ಇದೊಂದು ಮೂಕ ಕ್ರಾಂತಿಯಾಗಿದೆ ಎಂದರು.
ತೆಲುಗಿನ ಜನತೆಗೆ ತಲೆಬಾಗುತ್ತೇನೆ ಹಾಗೂ ಮೈತ್ರಿಗೆ ಅಧಿಕಾರ ನೀಡಿದ ಎಲ್ಲರಿಗೂ ಧನ್ಯವಾದ ಹೇಳುತ್ತೇನೆ. ಟಿಕೆಟ್ ಸಿಗದಿದ್ದರೂ ಹೈಕಮಾಂಡ್ ತೀರ್ಮಾನದಂತೆ ಎಲ್ಲರೂ ಕೆಲಸ ಮಾಡುತ್ತಿರುವುದು ಒಳ್ಳೆಯದು. ಮೈತ್ರಿಯ ಯಶಸ್ಸನ್ನು ದೆಹಲಿಯ ಪ್ರಮುಖ ನಾಯಕರು ಶ್ಲಾಘಿಸುತ್ತಿದ್ದಾರೆ. ಬಿಜೆಪಿ ಪರವಾಗಿ ಸಮನ್ವಯ ಸಮಿತಿಗಳನ್ನು ರಚಿಸಲಾಗಿದೆ. ಸಮನ್ವಯತೆಯಿಂದ ಮುನ್ನಡೆದು ರಾಜ್ಯವನ್ನು ಮತ್ತೆ ಅಭಿವೃದ್ಧಿ ಪಥಕ್ಕೆ ತರುವ ಜವಾಬ್ದಾರಿ ನಮ್ಮೆಲ್ಲರ ಮೇಲೆ ಇದೆ ಎಂದು ಹೇಳಿದರು.
ರಾಜ್ಯದಲ್ಲಿ ಅಮರಾವತಿ ಮತ್ತು ಪೋಲವರಂ ನಿರ್ಮಾಣ ನಮ್ಮ ಆದ್ಯತೆಯಾಗಿದೆ. ಐದು ವರ್ಷಗಳ ನಂತರ ಅಮರಾವತಿಯಲ್ಲಿ ವಿದ್ಯುತ್ ದೀಪಗಳು ಉರಿಯುತ್ತಿವೆ. ವೈಸಿಪಿಗೆ ಪ್ರತಿಪಕ್ಷ ಸ್ಥಾನಮಾನವೂ ಇಲ್ಲ. ಸಾರ್ವಜನಿಕ ಸಮಸ್ಯೆಗಳತ್ತ ಗಮನ ಹರಿಸಿದರೆ ನಮ್ಮ ವಿರೋಧವಿಲ್ಲ. ಸಾರ್ವಜನಿಕ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವುದು ನಮ್ಮೆಲ್ಲರ ಜವಾಬ್ದಾರಿ. ರಾಜ್ಯದಲ್ಲಿ ಹೊಸ ಯುಗ ಆರಂಭವಾಗಿದೆ. ರಾಜ್ಯದ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಜನರಿಗೆ ನಿಜವಾದ ಕಲ್ಯಾಣ ನೀಡಬೇಕು. ಅಧಿಕಾರದಲ್ಲಿದ್ದುಕೊಂಡು ಪಕ್ಷವನ್ನು ಮತ್ತಷ್ಟು ಅಭಿವೃದ್ಧಿ ಪಡಿಸಬೇಕು ಹೇಳಿದರು.
ಬಿಜೆಪಿ ಸಹ ಸಮಾವೇಶದ ಪ್ರಧಾನ ಕಾರ್ಯದರ್ಶಿ ಶಿವಪ್ರಕಾಶ್‌ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಈ ಸಭೆಯಲ್ಲಿ ಕೇಂದ್ರ ಸಚಿವ ಶ್ರೀನಿವಾಸ್ ವರ್ಮಾ, ಸಂಸದ ಸಿಎಂ ರಮೇಶ್, ಶಾಸಕರಾದ ಸುಜನಾ ಚೌಧರಿ, ರಾಮಕೃಷ್ಣ ರೆಡ್ಡಿ, ಈಶ್ವರರಾವ್, ವಿಷ್ಣುಕುಮಾರ್ ರಾಜು, ಪಾರ್ಥಸಾರಧಿ ಭಾಗವಹಿಸಿದ್ದರು. ಬಿಜೆಪಿ ಪರವಾಗಿ ಗೆದ್ದ ಸಂಸದರು ಮತ್ತು ಶಾಸಕರನ್ನು ಬಿಜೆಪಿ ಎಪಿ ಪದಾಧಿಕಾರಿಗಳು ಮತ್ತು ಜಿಲ್ಲಾ ಉಸ್ತುವಾರಿಗಳು ಸನ್ಮಾನಿಸಿದರು.
ವಾರಣಾಸಿಯಲ್ಲಿ ಮೋದಿ ಸ್ವಲ್ಪದರಲ್ಲೇ ಸೋಲು ತಪ್ಪಿಸಿಕೊಂಡರು: ರಾಹುಲ್ ಗಾಂಧಿ ಟೀಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + twenty =
Remember me
