ನೇಪಾಳ:ರಾಮ ಮಂದಿರ ಪ್ರತಿಷ್ಠಾಪನೆಯ ನಂತರ ಅಯೋಧ್ಯೆಯಲ್ಲಿ ರಾಮಲಲ್ಲಾನ ದರ್ಶನ ಪಡೆಯಲು ಜನರ ನೂಕುನುಗ್ಗಲು ಉಂಟಾಗಿದೆ. ದೇಶ ವಿದೇಶಗಳಿಂದಲೂ ಜನರು ದರ್ಶನಕ್ಕಾಗಿ ಇಲ್ಲಿಗೆ ಆಗಮಿಸುತ್ತಿದ್ದಾರೆ. ಇದೀಗ ನೇಪಾಳದ ವಿದೇಶಾಂಗ ಸಚಿವ ಎನ್.ಪಿ. ಸೌದ್ ಇಂದು ಅಯೋಧ್ಯೆಗೆ ತೆರಳಿ ರಾಮಲಲ್ಲಾರ ದರ್ಶನ ಪಡೆಯಲಿದ್ದಾರೆ. ಅಷ್ಟೇ ಅಲ್ಲ, ರಾಮಲಲ್ಲಾಗೆ ಅರ್ಪಿಸಲು ಐದು ಉಡುಗೊರೆಗಳನ್ನು ಸಹ ತಂದಿದ್ದಾರೆ. ರೈಸಿನಾ ಡೈಲಾಗ್‌ನಲ್ಲಿ ಭಾಗವಹಿಸಲು ಅವರು ಕಳೆದ ಮೂರು ದಿನಗಳಿಂದ ದೆಹಲಿಯಲ್ಲಿದ್ದು, ಸೌದ್ ಇಂದು ಅಯೋಧ್ಯೆಗೆ ತೆರಳಿ, ರಾಮಲಲ್ಲಾ ದರ್ಶನ ಪಡೆಯಲಿದ್ದಾರೆ.
ರಾಮಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಕೆನೇಪಾಳದ ವಿದೇಶಾಂಗ ಸಚಿವರನ್ನು ಹಿರಿಯ ಅಧಿಕಾರಿಗಳು ಅಯೋಧ್ಯೆಯ ಮಹರ್ಷಿ ವಾಲ್ಮೀಕಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಲಿದ್ದಾರೆ. ವಿಮಾನ ನಿಲ್ದಾಣದಿಂದ ನೇರವಾಗಿ ಶ್ರೀರಾಮ ಜನ್ಮಭೂಮಿ ದೇವಸ್ಥಾನಕ್ಕೆ ತೆರಳಲಿದ್ದಾರೆ. ನೇಪಾಳದ ವಿದೇಶಾಂಗ ಸಚಿವರೊಂದಿಗೆ ಅವರ ಪತ್ನಿ ಜ್ಯೋತ್ಸ್ನಾ ಸೌದ್ ಕೂಡ ಆಗಮಿಸಲಿದ್ದಾರೆ. ಅಯೋಧ್ಯೆ ತಲುಪಿದ ನಂತರ ನೇಪಾಳದ ವಿದೇಶಾಂಗ ಸಚಿವರು ರಾಮಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.

ಸರಯೂ ದಂಡೆಯಲ್ಲಿ ಸಂಜೆ ಆರತಿಸಚಿವರು ಪ್ರತಿಮೆಗೆ ಐದು ಬಗೆಯ ಬೆಳ್ಳಿ ಆಭರಣಗಳನ್ನು ಅರ್ಪಿಸಲಿದ್ದಾರೆ. ಇವುಗಳಲ್ಲಿ ಬಿಲ್ಲು, ಗದೆ, ಗಲಹಾರ, ಕೈ ಮತ್ತು ಕಾಲುಗಳಲ್ಲಿ ಧರಿಸಿರುವ ಬಳೆಗಳು ಇತ್ಯಾದಿ ಸೇರಿವೆ. ಸೌದ್ ಅಯೋಧ್ಯೆಗೆ ಭೇಟಿ ನೀಡಲಿರುವ ನೇಪಾಳ ಸರ್ಕಾರದ ಮೊದಲ ಮಂತ್ರಿಯಾಗಿದ್ದಾರೆ. ರಾಮ್ ಲಲ್ಲಾನ ದರ್ಶನದ ನಂತರ ಸಚಿವರು ಸರಯೂ ತೀರದಲ್ಲಿ ಸಂಜೆ ಆರತಿಯಲ್ಲಿ ಭಾಗವಹಿಸಲಿದ್ದಾರೆ. ಹನುಮಂತನಗರಿ ದೇವಸ್ಥಾನಕ್ಕೆ ಭೇಟಿ ನೀಡುವುದಲ್ಲದೆ ಅಲ್ಲಿನ ಇತರ ಸ್ಥಳಗಳಿಗೂ ಭೇಟಿ ನೀಡಲಿದ್ದಾರೆ.
ಟಿವಿ ಆ್ಯಂಕರ್‌ನನ್ನು ಕಿಡ್ನಾಪ್ ಮಾಡಿದ ಐದು ಸ್ಟಾರ್ಟ್‌ಅಪ್ ಕಂಪನಿಗಳ ಎಂಡಿ; ವಂಚನೆ ಕೃತ್ಯ ಬಯಲಾಗಿದ್ದು ಹೇಗೆ?


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × one =
Remember me
