ನವದೆಹಲಿ:ಭಾರತದ ಚಂದ್ರಯಾನ 3 ಯೋಜನೆಯ ಯಶಸ್ಸನ್ನು ಕಂಡು ಇಡೀ ಜಗತ್ತೇ ನಿಬ್ಬೆರಗಾಗಿ ಸಂಭ್ರಮಿಸುತ್ತಿರುವ ಈ ಹೊತ್ತಿನಲ್ಲಿ ಬ್ರಿಟನ್ನಿನ ಕೆಲವರು ಅಸೂಯೆಯನ್ನು ಹೊರಗಾಕಿದ್ದಾರೆ. ಯುನೈಟೆಡ್​ ಕಿಂಗ್​ಡಮ್​, ಭಾರತಕ್ಕೆ ಕಳುಹಿಸುವ ನೆರವಿನ ಕುರಿತು ಟಿವಿ ಆ್ಯಂಕರ್​ ಮಾಡಿರುವ ಟ್ವೀಟ್​, ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯನ್ನು ಹುಟ್ಟುಹಾಕಿದೆ.
ಎಕ್ಷ್​ ಬಯೋ ಪ್ರಕಾರ ಟಿವಿ ಆ್ಯಂಕರ್​ ಮತ್ತು ರಾಜಕೀಯ ಪ್ರಸಾರಕ ಎಂದು ಹೇಳಿಕೊಂಡಿರುವ ಸೋಫಿಯಾ ಕೊರ್ಕೊರಾನ್, ಸುಧಾರಿತ ಬಾಹ್ಯಾಕಾಶ ಕಾರ್ಯಕ್ರಮಗಳನ್ನು ಹೊಂದಿರುವ ಮತ್ತು ಚಂದ್ರನ ಮೇಲೆಯೇ ರಾಕೆಟ್​ ಅನ್ನು ಲ್ಯಾಂಡ್​ ಮಾಡುವ ಸಾಮರ್ಥ್ಯವನ್ನು ಹೊಂದಿರುವ ಭಾರತದಂತಹ ದೇಶಗಳಿಗೆ ಯುಕೆ ನೆರವನ್ನು ನೀಡಬಾರದು. ನಮ್ಮ ಹಣವನ್ನು ಮರಳಿ ಪಡೆಯುವ ಸಮಯವಿದು ಎಂದು ಹೇಳಿದ್ದಾರೆ.
ಇದನ್ನೂ ಓದಿ:ವಿಮಾ ಯೋಜನೆಯಲ್ಲಿ ಮಂಡ್ಯ ಉತ್ತಮ ಸಾಧನೆ: ಅಧಿಕಾರಿಗಳಿಗೆ ಸಚಿವ ಚಲುವರಾಯಸ್ವಾಮಿ ಅಭಿನಂದನೆ
ಚಂದ್ರನ ದಕ್ಷಿಣ ಧ್ರುವದಲ್ಲಿ ಬಾಹ್ಯಾಕಾಶ ನೌಕೆಯನ್ನು ಯಶಸ್ವಿಯಾಗಿ ಇಳಿಸಿದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಭಾರತ ಭಾಜನವಾಗಿದೆ. ಆದ್ದರಿಂದ 33.4 ಮಿಲಿಯನ್​ ಪೌಂಡ್ ಹಾಗೂ 2024-25ನೇ ಸಾಲಿನಲ್ಲಿ 57 ಮಿಲಿಯನ್​ ಪೌಂಡ್​ಗೆ ಏರಿಸಬೇಕು ಅಂದುಕೊಂಡಿರುವ ವಿದೇಶಿ ನೆರವನ್ನು ನಾವೇಕೆ ಅವರಿಗೆ ನೀಡಬೇಕು ಎಂದು ಕೊರ್ಕೊರಾನ್ ಎಕ್ಷ್​ನಲ್ಲಿ ಬುಧವಾರ ಪ್ರಶ್ನಿಸಿದ್ದಾರೆ.
The uk shouldn’t be sending aid to countries with space programs so advance they can land rockets on the other side of the moon
— Sophie Corcoran (@sophielouisecc)August 23, 2023

ಇಷ್ಟೇ ಅಲ್ಲದೆ, ಪ್ಯಾಟ್ರಿಕ್​ ಕ್ರಿಸ್ಟ್ಸ್​ ಎಂಬ ಮತ್ತೊಬ್ಬ ಬ್ರಿಟನ್​ ಆ್ಯಂಕರ್​ ಕೂಡ ನಾಲಿಗೆ ಹರಿಬಿಟ್ಟಿದ್ದಾರೆ. ಚಂದ್ರಯಾನ ಯಶಸ್ಸಿಗಾಗಿ ಭಾರತವನ್ನು ಅಭಿನಂದಿಸುತ್ತಾನೆ. ಚಂದ್ರನ ಡಾರ್ಕ್ ಸೈಡ್‌ನಲ್ಲಿ ರಾಕೆಟ್ ಅನ್ನು ಹಾರಿಸಲು ನೀವು ಶಕ್ತರಾಗಿದ್ದರೆ, ನೀವು ವಿದೇಶಿ ಸಹಾಯಕ್ಕಾಗಿ ನಮ್ಮ ಬಳಿಗೆ ಬರಬಾರದು. ನಮ್ಮ 2.3 ಬಿಲಿಯನ್​ ಪೌಂಡರ್​ ವಿದೇಶಿ ನೆರವನ್ನು ಹಿಂತಿರುಗಿಸಿ ಎಂದಿದ್ದಾರೆ.
‘India, give us back our £2.3 BILLION!’@PatrickChristyscongratulates India on their successful moon mission, but says ‘as a rule, if you can afford to fire a rocket at the dark side of the moon, you shouldn’t be coming to us with your hand out for foreign aid!’pic.twitter.com/fNMLY5RCok
— GB News (@GBNEWS)August 23, 2023

ಕೊರ್ಕೊರಾನ್ ಹಾಗೂ ಪ್ಯಾಟ್ರಿಕ್​ ಮಾತಿಗೆ ಬ್ರಿಟನ್​ನ ಅನೇಕರು ಕೂಡ ಧ್ವನಿಗೂಡಿಸಿದ್ದಾರೆ. ಸರ್ಕಾರ ವಿದೇಶಿ ನೆರವನ್ನು ನಿಲ್ಲಿಸಬೇಕೆಂದು ಆಗ್ರಹಿಸಿದ್ದದಾರೆ. ಇತ್ತ ಭಾರತೀಯರು ಕೊರ್ಕೊರಾನ್ ಮತ್ತು ಬ್ರಿಟನ್​ ಪ್ರಜೆಗಳ ಮಾತಿಗೆ ವಿರೋಧ ವ್ಯಕ್ತಪಡಿಸಿದ್ದಾರೆ.​ ಅಲ್ಲದೆ, ಬ್ರಿಟಿಷರ ಆಡಳಿತದಲ್ಲಿ ಭಾರತದಿಂದ ಲೂಟಿ ಮಾಡಿದ ಹಣವನ್ನು ಮರಳಿಸಿ ಎಂದು ಧ್ವನಿ ಎತ್ತಿದ್ದಾರೆ. 45 ಟ್ರಿಲಿಯನ್​ ಎಂಬ ಪದ ಎಕ್ಷ್​ನಲ್ಲಿ ಟ್ರೆಂಡ್​ ಕೂಡ ಆಗಿದೆ.
ಇದನ್ನೂ ಓದಿ:ಅತಿಥಿ ಉಪನ್ಯಾಸಕ ನೇಮಕಾತಿಗೆ ಮೀಸಲಾತಿ ಅನ್ವಯಿಸಿ; ಸಿಎಂಗೆ ಪತ್ರ ಬರೆದ ಎಂಎಲ್‌ಸಿ ಡಾ.ಸಾಬಣ್ಣ
ಭಾರತದಿಂದ ಯುಕೆ ಲೂಟಿ ಮಾಡಿದ 45 ಟ್ರಿಲಿಯನ್​ ಡಾಲರ್​ ಹಣವನ್ನು ಮರಳಿಸಬೇಕು ಮತ್ತು ವಿದೇಶಿ ನೆರವಿನ ಹೆಸರಿನಲ್ಲಿ ಎನ್​ಜಿಒಗಳಿಗೆ ಫಂಡಿಂಗ್​ ಮಾಡುವುದನ್ನು ಬ್ರಿಟನ್​ ನಿಲ್ಲಿಸಬೇಕೆಂದು ನೆಟ್ಟಿಗರೊಬ್ಬರು ಆಗ್ರಹಿಸಿದ್ದಾರೆ. ಮತ್ತೊಬ್ಬ ನೆಟ್ಟಿಗ, ಕೊಹಿನೂರು ವಜ್ರವನ್ನು ಮರಳಿಸುವಂತೆ ಒತ್ತಾಯಿಸಿದ್ದಾರೆ.
Just Subtract it from the $44 trillion you have looted from India.Give back our Kohinoor also. 🤫pic.twitter.com/3xGtuvOcPK
— Nobuddy (@Mr__Nobuddy__)August 23, 2023

ಬ್ರಿಟನ್​ ತನ್ನ ಆಡಳಿತದ ಅವಧಿಯಲ್ಲಿ ಭಾರತದಿಂದ 45 ಟ್ರಿಲಿಯನ್ ಡಾಲರ್​ (ಇಂದಿನ ಮೌಲ್ಯದ ಪ್ರಕಾರ) ಗಿಂತ ಹೆಚ್ಚಿನ ಹಣವನ್ನು ಲೂಟಿ ಮಾಡಿದೆ ಎಂದು ಅಂದಾಜಿಸಲಾಗಿದೆ. ಬೇಕಾದರೆ ಬ್ರಿಟನ್ 2.3 ಶತಕೋಟಿ ಡಾಲರ್ ಹೆಚ್ಚಿನ ಬಡ್ಡಿಯನ್ನು ಇಟ್ಟುಕೊಳ್ಳಬಹುದು ಮತ್ತು ಉಳಿದ ಹಣವನ್ನು ಭಾರತಕ್ಕೆ ಕಳುಹಿಸಬಹುದು ಎಂದು ಮತ್ತೊರ್ವ ಟ್ವೀಟ್​ ಮಾಡಿದ್ದಾರೆ. ​
ಇದನ್ನೂ ಓದಿ:ಹೆಲ್ಮೆಟ್​ ಒಳಗಿದ್ದ ವಿಷಕಾರಿ ಹಾವು ಕಡಿತ: ಸಾವಿನ ಹೊಸ್ತಿಲಲ್ಲಿದ್ದ ಯುವಕ ಬದುಕಿ ಬಂದಿದ್ದೇ ರೋಚಕ!
ಕೊಲಂಬಿಯಾ ಯೂನಿವರ್ಸಿಟಿ ಪ್ರೆಸ್ ಪ್ರಕಟಿಸಿದ ಅರ್ಥಶಾಸ್ತ್ರಜ್ಞ ಉತ್ಸಾ ಪಟ್ನಾಯಕ್ ಅವರ ಸಂಶೋಧನೆ ಪ್ರಕಾರ 45 ಟ್ರಿಲಿಯನ್ ಡಾಲರ್​ ಅನ್ನು ಉಲ್ಲೇಖಿಸಲಾಗಿದೆ. 1765 ರಿಂದ 1938ರ ಅವಧಿಯಲ್ಲಿ ಬ್ರಿಟನ್ ಸುಮಾರು 45 ಟ್ರಿಲಿಯನ್ ಡಾಲರ್​ ಮೊತ್ತವನ್ನು ಭಾರತದಿಂದ ಲೂಟಿ ಮಾಡಿದೆ ಎಂದು ಪಟ್ನಾಯಕ್ ಅವರು ಸುಮಾರು ಎರಡು ಶತಮಾನಗಳ ತೆರಿಗೆ ಮತ್ತು ವ್ಯಾಪಾರದ ಡೇಟಾವನ್ನು ಚಿತ್ರಿಸಿದ್ದಾರೆ ಎಂದು ಅಲ್ ಜಜೀರಾದಲ್ಲಿ ವರದಿಯಾಗಿದೆ. ಅಂದಹಾಗೆ ಲೂಟಿ ಮಾಡಿದ ಮೊತ್ತವು ಇಂದಿನ ಬ್ರಿಟನ್‌ನ ಜಿಡಿಪಿಗಿಂತ ಸುಮಾರು 15 ಪಟ್ಟು ಹೆಚ್ಚಿದೆ.
It is estimated Britain drained out over $45 trillion (as per today’s value) from India.
Britain can keep the $2.3 Billion plus the interest and send the rest back to india
— Mac (@pattaazhy)August 24, 2023

2016 ಮತ್ತು 2021 ರ ನಡುವೆ ಯುಕೆ ಸರ್ಕಾರವು ಭಾರತಕ್ಕೆ 2.3 ಬಿಲಿಯನ್ ಪೌಂಡ್​ ನೆರವು ನೀಡಿದೆ ಎಂದು 2023ರ ಮಾರ್ಚ್​ನಲ್ಲಿ ಪ್ರಕಟವಾದ ದಿ ಗಾರ್ಡಿಯನ್ ವರದಿಯಲ್ಲಿ ಉಲ್ಲೇಖವಾಗಿದೆ.(ಏಜೆನ್ಸೀಸ್​)
ವಿಕ್ರಮ್​ ಲ್ಯಾಂಡರ್​ನಿಂದ ಪ್ರಜ್ಞಾನ್ ರೋವರ್​ ಚಂದ್ರನ ಅಂಗಳಕ್ಕೆ ಇಳಿದ ವಿಡಿಯೋ ಹಂಚಿಕೊಂಡ ಇಸ್ರೋ!

ಕನ್ನಡ ಶಾಲೆಗೆ ಮಲಯಾಳಿ ಶಿಕ್ಷಕಿ ನೇಮಿಸಿದ್ದ ಕೇರಳ ಸರ್ಕಾರ; ಕನ್ನಡ ತಿಳಿದ ಶಿಕ್ಷಕರನ್ನೇ ನೇಮಿಸುವಂತೆ ಹೈಕೋರ್ಟ್ ಆದೇಶ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + 15 =
Remember me
