ನವದೆಹಲಿ:2012ರಲ್ಲಿ ನಡೆದ ನಿರ್ಭಯಾ ಅತ್ಯಾಚಾರ ಪ್ರಕರಣದ ನಾಲ್ವರು ಆರೋಪಿಗಳನ್ನು ಇಂದು ಗಲ್ಲಿಗೇರಿಸಲಾಗಿದೆ.
ಅಪರಾಧಿಗಳಾದ ಅಕ್ಷಯ್​ಕುಮಾರ್​, ಪವನ್​ ಗುಪ್ತಾ, ಮುಕೇಶ್​ ಸಿಂಗ್​ ಮತ್ತು ವಿನಯ್​ ಶರ್ಮಾರಿಗೆ ಸುಪ್ರೀಂಕೋರ್ಟ್​ ಗಲ್ಲುಶಿಕ್ಷೆಯನ್ನು ವಿಧಿಸಿದಾಗಿನಿಂದಲೂ ವಿಳಂಬವಾಗುತ್ತಲೇ ಬಂದಿತ್ತು. ಅಂತಿಮವಾಗಿ ಗುರುವಾರ (ಮಾ.19)ದಂದು ಅಪರಾಧಿಗಳ ಎಲ್ಲ ಕಾನೂನು ಪ್ರಕ್ರಿಯೆಗಳೂ ಮುಕ್ತಾಯವಾಗುವ ಮೂಲಕ, ದೆಹಲಿ ಪಟಿಯಾಲಾ ಹೌಸ್ ಕೋರ್ಟ್ ಜಾರಿ ಮಾಡಿದ್ದ ಡೆತ್​ ವಾರೆಂಟ್​ನಂತೆ ಇಂದು (ಮಾ.20) ಮುಂಜಾನೆ 5.30ಕ್ಕೆ ನಾಲ್ವರೂ ತಿಹಾರ್ ಜೈಲಿನಲ್ಲಿ ನೇಣುಗಂಬಕ್ಕೆ ಏರಿದ್ದಾರೆ.
ತಿಹಾರ್‍ ಜೈಲಿನ ಸುತ್ತ ರಾತ್ರಿಯಿಂದಲೇ ಬಿಗಿ ಬಂದೋಬಸ್ತ್ ಮಾಡಲಾಗಿದ್ದು, ನಸುಕಿನ ವೇಳೆಯೇ ಆರೋಪಿಗಳನ್ನು ನೇಣುಗಂಬದ ಬಳಿ ಕೊಂಡೊಯ್ಯಲು ಸಿದ್ಧತೆಯನ್ನು ಅಧಿಕಾರಿಗಳು ಮಾಡಿಕೊಂಡಿದ್ದರು. ಮುಂಜಾನೆ 5 ಗಂಟೆಗೂ ಮುನ್ನವೇ ನಾಲ್ಕೂ ಆರೋಪಿಗಳನ್ನು ನೇಣುಗಂಬದ ಬಳಿಕ ಅಧಿಕಾರಿಗಳು ಕರೆದೊಯ್ದಿದ್ದರು. 5.34ರ ಹೊತ್ತಿಗೆ ಆರೋಪಿಗಳನ್ನು ನೇಣುಗಂಬಕ್ಕೆ ಏರಿಸಿ ಶಿಕ್ಷೆ ಜಾರಿಗೊಳಿಸಿರುವ ಸುದ್ದಿ ಬಹಿರಂಗವಾಗಿದೆ.
ಬದುಕುಳಿಯಲು ಕೊನೇ ಕ್ಷಣದವರೆಗೂ ಕಾನೂನು ಹೋರಾಟ ನಡೆಸಿದ ಅಪರಾಧಿಗಳು, ಮಾ.19ರಂದು ಸಂಜೆ ಕೂಡ ತಮ್ಮ ಮರಣದಂಡನೆಯನ್ನು ತಪ್ಪಿಸಿಕೊಳ್ಳಲು ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ತುರ್ತು ವಿಚಾರಣೆ ನಡೆಸಿದ ಹೈಕೋರ್ಟ್​, ಅಪರಾಧಿಗಳ ಅರ್ಜಿ ವಜಾಗೊಳಿಸಿ, ಗಲ್ಲುಶಿಕ್ಷೆಯನ್ನು ಅಂತಿಮಗೊಳಿಸಿತು. (ಏಜೆನ್ಸೀಸ್​)
ನಿರ್ಭಯಾ ಕೊಲೆ ಪ್ರಕರಣದ ಅಪರಾಧಿಗಳಿಗೆ ಗಲ್ಲು: ತಾಯಿ ಆಶಾದೇವಿ ಅವರ ಮೊದಲ ಪ್ರತಿಕ್ರಿಯೆ ಇದಾಗಿತ್ತು..



ನಿರ್ಭಯಾ ಅತ್ಯಾಚಾರ ಅಪರಾಧಿಗಳನ್ನು ನಾನು ನೇಣುಗಂಬಕ್ಕೆ ಏರಿಸಿದ ಬಳಿಕ ಜನರಿಗೆ ನನ್ನ ಮೇಲಿನ ಗೌರವ ಇಮ್ಮಡಿಯಾಗುತ್ತದೆ: ಹ್ಯಾಂಗ್​ಮನ್​ ಪವನ್​ ಕುಮಾರ್​


2012 Delhi gang-rape case: All 4 death row convicts have been hanged at Tihar jail.pic.twitter.com/xOFJirPf8A
— ANI (@ANI)March 20, 2020


Tihar jail officials to ANI: All four 2012 Delhi gang-rape death row convicts have been brought to the place where they will be hanged shortly.pic.twitter.com/dAaG5kiLsx
— ANI (@ANI)March 19, 2020


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + seven =
Remember me
