ಕೊಂಡಗಾಂವ್‌ (ಛತ್ತೀಸಗಢ):ದೇಶ ಮುಂದುವರೆಯುತ್ತಿದೆ, ತಂತ್ರಜ್ಞಾನಗಳು ದಾಪುಗಾಲು ಇಡುತ್ತಿವೆ ಎಂದು ಹೇಳಿದರೂ ಇಂದಿಗೂ ಅದೆಷ್ಟೋ ಹಳ್ಳಿಗಳಿಗೆ ಸರಿಯಾದ ಮೂಲ ಸೌಕರ್ಯಗಳೇ ಇಲ್ಲ. ಇದರಿಂದ ಅವರು ಅನುಭವಿಸುತ್ತಿರುವ ಕಷ್ಟಗಳು ಹೇಳತೀರದು.
ಇಂಥದ್ದೇ ಒಂದು ವಿಷಾದಕರ ಎನಿಸುವ ಘಟನೆ ಛತ್ತೀಸಗಢದ ಕೊಂಡಗಾಂವ್‌ನ ಮೋಹನ್ ಬೇಡಾ ಗ್ರಾಮದಲ್ಲಿ ಗ್ರಾಮದಲ್ಲಿ ನಡೆದಿದೆ. ಈ ಗ್ರಾಮದಲ್ಲಿ ಮಹಿಳೆಯೊಬ್ಬರು ತುಂಬುಗರ್ಭಿಣಿಯೊಬ್ಬರು ಹೆರಿಗೆ ನೋವಿನಿಂದ ಬಳಲುತ್ತಿದ್ದರು.
ಈ ಸಮಯದಲ್ಲಿ ಕುಟುಂಬಸ್ಥರು ಅಂಬ್ಯುಲೆನ್ಸ್‌ಗೆ ಕರೆದಿದ್ದಾರೆ. ಆದರೆ ರಸ್ತೆಗಳು ಸರಿಯಲ್ಲ ಎನ್ನುವ ಕಾರಣ ನೀಡಿ ಅಂಬ್ಯುಲೆನ್ಸ್‌ ನೀಡಲು ಆಸ್ಪತ್ರೆ ನಿರಾಕರಿಸಿದೆ. ಎಷ್ಟೇ ಬೇಡಿಕೊಂಡರೂ ಅಂಬ್ಯುಲೆನ್ಸ್‌ ಬರಲಿಲ್ಲ. ಅಷ್ಟೇ ಅಲ್ಲ… ಬೇರೆ ವಾಹನದಲ್ಲಿ ಕರೆದುಕೊಂಡು ಹೋಗೋಣವೆಂದರೆ ಇವರ ರಸ್ತೆಯನ್ನು ನೋಡಿದೇ ವಾಹನ ಚಾಲಕರು ಹೆದರಿ ಯಾರೂ ಬರಲು ರೆಡಿ ಇರಲಿಲ್ಲ.
https://www.facebook.com/VVani4U/videos/1187333284951442/
ಬೇರೆ ದಾರಿ ಕಾಣದ ಕುಟುಂಬಸ್ಥರು. ತಾತ್ಕಾಲಿಕ ಬುಟ್ಟಿಯಲ್ಲಿ ಗರ್ಭಿಣಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಇದನ್ನು ಸ್ಥಳೀಯರೊಬ್ಬರು ವಿಡಿಯೋ ಮಾಡಿದ್ದು, ಅದೀಗ ವೈರಲ್‌ ಆಗಿದೆ. ಒಂದೆಡೆ ಗ್ರಾಮಸ್ಥರ ನೋವಿಗೆ ಜನರು ಮನಮಿಡಿದಿದ್ದರೆ, ಅಂಬ್ಯುಲೆನ್ಸ್‌ ಕಳಿಸದ ಆಸ್ಪತ್ರೆಯ ವಿರುದ್ಧ ಕಿಡಿಕಾರಿದ್ದಾರೆ.
ಈ ವಿಡಿಯೋ ವೈರಲ್‌ ಆಗುತ್ತಿದ್ದಂತೆಯ ಕೊಂಡಗಾಂವ್ ನ ಮುಖ್ಯ ವೈದ್ಯಕೀಯ ಆರೋಗ್ಯ ಅಧಿಕಾರಿ ಟಿ.ಆರ್. ಕನ್ವಾರ್ ಸ್ಪಷ್ಟನೆ ನೀಡಿದ್ದು, ಕುಟುಂಬದವರು ಅಂಬ್ಯುಲೆನ್ಸ್‌ಗೆ ಕರೆ ಮಾಡಿದ್ದರು. ಆದರೆ, ರಸ್ತೆಯಿಲ್ಲದ ಕಾರಣ ಅಲ್ಲಿಗೆ ಆಂಬ್ಯುಲೆನ್ಸ್‌ ಹೋಗಲು ಸಾಧ್ಯವೇ ಇರಲಿಲ್ಲ. ಆದ್ದರಿಂದ ಅವರು ಬುಟ್ಟಿಯಲ್ಲಿ ಮಹಿಳೆಯನ್ನು ಕರೆತಂಇದ್ದಾರೆ. ಹೆರಿಗೆ ಮಾಡಿಸಲಾಗಿದೆ ತಾಯಿ, ಮಗುವನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು ಹೆರಿಗೆ ನಂತರ ಇಬ್ಬರೂ ಸುರಕ್ಷಿತವಾಗಿದ್ದಾರೆ ಎಂದು ತಿಳಿಸಿದ್ದಾರೆ.(ಏಜೆನ್ಸೀಸ್‌)
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:17 − 9 =
Remember me
