ಬೆಂಗಳೂರು:ಸೋಷಿಯಲ್ ಮೀಡಿಯಾದಲ್ಲಿ ಆಗಾಗ ಏನಾದರೊಂದು ಟ್ರೆಂಡ್ ಆಗುತ್ತಲೇ ಇರುತ್ತದೆ. ಅದರಲ್ಲೂ ಇಂದು ಹಿಂದೂಗಳ ಅಭಿಯಾನವೊಂದು ಪುನಃ ಮುನ್ನೆಲೆಗೆ ಬಂದಿದ್ದಲ್ಲದೆ ಟ್ರೆಂಡ್ ಕೂಡ ಆಗಿದೆ. ‘ಸಿಂಧೂರ ಇರದಿದ್ದರೆ ಇಲ್ಲ ವ್ಯವಹಾರ’ ( #NoBindiNoBusiness ) ಎನ್ನುವ ಈ ಅಭಿಯಾನಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.
ಹಬ್ಬದ ಸಂದರ್ಭಗಳಲ್ಲಿ ವಿವಿಧ ಕಂಪನಿಗಳು ನೀಡುವ ಜಾಹೀರಾತಿನಲ್ಲಿ ಕೆಲವು ವರ್ಷಗಳ ಹಿಂದೆ ಹಿಂದೂ ಧಾರ್ಮಿಕ ಸಂಗತಿಗಳಿಗೆ ಪ್ರಾಧಾನ್ಯತೆ ಇರುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಅವು ಮರೆಯಾಗಿದ್ದು, ಹಿಂದೂ ಧಾರ್ಮಿಕ ಸಂಕೇತಗಳು ನಗಣ್ಯ ಎಂಬಂತಾಗಿವೆ ಎಂಬ ಹಿನ್ನೆಲೆಯಲ್ಲಿ ಈ ಅಭಿಯಾನ ಹುಟ್ಟಿಕೊಂಡಿದೆ.
ಹಬ್ಬದ ಜಾಹೀರಾತುಗಳಲ್ಲಿ ಇರುತ್ತಿದ್ದ ದೀಪ, ರಂಗೋಲಿ, ಹೂವುಗಳು ಕಳೆದ ನಾಲ್ಕೈದು ವರ್ಷಗಳಲ್ಲಿ ಒಂದೊಂದಾಗಿ ಕಾಣೆಯಾಗಿದ್ದು, ಇದೀಗ ಕಾಣಿಸಬಹುದಾದ ಕೊನೆಯ ಧಾರ್ಮಿಕ ಸಂಕೇತವಾದ ಬಿಂದಿ ಕೂಡ ನಾಪತ್ತೆ ಆಗಿದೆ. ಬಹಳಷ್ಟು ಜಾಹೀರಾತುಗಳಲ್ಲಿನ ರೂಪದರ್ಶಿಗಳ ಹಣೆಯಲ್ಲಿ ಬೇಕಂತಲೇ ಬಿಂದಿಯನ್ನು ಇರಿಸುತ್ತಿಲ್ಲ ಎಂದು ಅಭಿಯಾನ ನಡೆಸುತ್ತಿರುವವರು ಹೇಳಿಕೊಂಡಿದ್ದಾರೆ.
This is the right time to relaunch the#NoBindiNoBusinesscampaign, just ahead of the festive season. If you want Hindu money, learn to respect Hindu beliefs, sentiments and symbols. Say it loud and clear, No Bindi, No Business. Do share this video if you agree!pic.twitter.com/f0ZM6LfL0g
— Shefali Vaidya. 🇮🇳 (@ShefVaidya)September 26, 2023

ಬಹಳಷ್ಟು ಕಂಪನಿಗಳು ಹಿಂದೂಗಳ ಹಬ್ಬಗಳನ್ನು ವ್ಯವಹಾರದ ಸಂದರ್ಭವನ್ನಾಗಿಯಷ್ಟೇ ನೋಡುತ್ತಿದ್ದಾರೆ. ಅವರಿಗೆ ಹಿಂದೂಗಳಿಂದ ವ್ಯಾಪಾರ ಬೇಕು, ಹಿಂದೂಗಳ ಹಣ ಬೇಕು. ಆದರೆ ಹಿಂದೂಗಳ ಧಾರ್ಮಿಕ ಸಂಕೇತಗಳಿಗೆ ಅವರು ಮನ್ನಣೆ ನೀಡುತ್ತಿಲ್ಲ. ನಾವು ಹೀಗೆ ಅಭಿಯಾನ ಹಮ್ಮಿಕೊಂಡಿದ್ದರಿಂದ ಕೆಲವರು ತಮ್ಮ ಜಾಹೀರಾತು ವಾಪಸ್ ಪಡೆದು ಹೊಸ ಜಾಹೀರಾತು ಸೃಷ್ಟಿಸಿದ್ದರೆ, ಇನ್ನು ಕೆಲವರು ಫೋಟೋಶಾಪ್ ಮೂಲಕ ಬಿಂದಿಗಳನ್ನು ಹಾಕಿದ್ದಾರೆ ಎಂದು ಅಭಿಯಾನನಿರತ ಹಿಂದೂಗಳು ಹೇಳಿಕೊಂಡಿದ್ದಾರೆ.
Ad for palam silks. One prominent south indian saree store.. why have they become like this?? Am surprised that every where the culture to portray feminine has become so corrupted. Tch.. gloomy and dead.. will anyone be like this on festive day.. senseless#nobindinobusinesspic.twitter.com/CP1XiFhJVg
— Vidhya #SaveSoil💜💜💜 (@vidhya35966971)October 12, 2023

ಇನ್ನು ಕೆಲವು ಸಾಮಾಜಿಕ ಕಾರ್ಯಕರ್ತರು ಹಿಂದೂಗಳ ಹಬ್ಬದ ಸಮಯದಲ್ಲಷ್ಟೇ ಜಾಗೃತರಾಗುತ್ತಿದ್ದು, ಹಬ್ಬದ ವಿಚಾರದಲ್ಲಿ ತಕರಾರು ತೆಗೆಯುತ್ತಿದ್ದಾರೆ. ಹಿಂದೂಗಳ ಧಾರ್ಮಿಕ ವಿಚಾರಗಳೆಲ್ಲ ನ್ಯಾಯಾಲಯದಲ್ಲೇ ತೀರ್ಮಾನ ಆಗುವಂತಾಗುತ್ತಿವೆ. ಬರೀ ಹಿಂದೂಗಳನ್ನಷ್ಟೇ ಗುರಿಯಾಗಿಸಿ ಇವನ್ನೆಲ್ಲ ನಡೆಸಲಾಗುತ್ತಿದೆ, ಎಲ್ಲಿಯವರೆಗೆ ಅಂತ ಇವುಗಳನ್ನೆಲ್ಲ ಸಹಿಸಿಕೊಂಡು ಇರಲು ಸಾಧ್ಯ ಎಂದು ಅಭಿಯಾನ ನಡೆಸುತ್ತಿರುವವರು ಹೇಳಿಕೊಂಡಿದ್ದಾರೆ.
ಬರೀ 23 ದಿನಗಳಲ್ಲಿ ಭಾರತದಲ್ಲಾಗಲಿವೆ 35 ಲಕ್ಷ ಮದುವೆಗಳು!; ಈ ಮದುವೆ ಸೀಸನ್​ನ ವಹಿವಾಟೆಷ್ಟು ಗೊತ್ತೇ?; ಇಲ್ಲಿದೆ ವಿವರ..
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:two × one =
Remember me
