ನವದೆಹಲಿ:ಉತ್ತರಾಖಂಡ್‌ನ ಸಿಲ್ಕ್​ಯಾರ್​ ಕುಸಿದ ಸುರಂಗದಲ್ಲಿ ಕಳೆದ 13 ದಿನಗಳಿಂದ ಸಿಲುಕಿರುವ 41 ಕಾರ್ಮಿಕರನ್ನು ದೊಡ್ಡ ಪೈಪ್​ ಮೂಲಕ ಹಗ್ಗ ಕಟ್ಟಿದ ಗಾಲಿ ಸ್ಟ್ರೆಚರ್ ನೆರವಿನಿಂದ ಶುಕ್ರವಾರ ಹೊರ ಕರೆತರಲಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಈ ಕಾರ್ಯದಲ್ಲಿ ಗುರುವಾರದಿಂದ ಪ್ರಗತಿ ಕಂಡುಬಂದಿಲ್ಲ.
ಕಾರ್ಮಿಕರನ್ನು ರಕ್ಷಿಸಲು ಅವಶೇಷಗಳ ಮೂಲಕ ಕೊರೆಯುವ ಕಾರ್ಯದಲ್ಲಿ ಗುರುವಾರದಿಂದ ಯಾವುದೇ ಪ್ರಗತಿ ಕಂಡುಬಂದಿಲ್ಲ ಎಂದು ಸ್ವತಃ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್‌ಡಿಎಂಎ) ಶುಕ್ರವಾರ ಹೇಳಿದೆ. ಆದರೆ ಆಗರ್ ಯಂತ್ರದಿಂದ ಕೊರೆಯುವ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ಅದು ಭರವಸೆ ನೀಡಿದೆ.
ಅಡೆತಡೆಗಳ ಕಾರಣ ಕೊರೆಯುವ ಪ್ರಕ್ರಿಯೆಯನ್ನು ಗುರುವಾರ ನಿಲ್ಲಿಸಲಾಯಿತು, ಆದರೆ, ಶೀಘ್ರದಲ್ಲೇ ಆಗರ್ ಯಂತ್ರವನ್ನು ಬಳಸಿ ಪ್ರಕ್ರಿಯೆ ಮರುಪ್ರಾರಂಭಿಸಲು ದುರಸ್ತಿ ಕಾರ್ಯವನ್ನು ಮಾಡಲಾಗುತ್ತಿದೆ.“ಎಲ್ಲ ಸಂಪನ್ಮೂಲಗಳನ್ನು ಬಳಸಲಾಗುತ್ತಿರುವುದರಿಂದ ಯಾವುದೇ ವಿಧಾನದಿಂದಲಾದರೂ ಕಾರ್ಮಿಕರನ್ನು ರಕ್ಷಿಸಲಾಗುವುದು ಎಂದು ಎನ್‌ಡಿಎಂಎ ಸದಸ್ಯ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಸೈಯದ್ ಅತಾ ಹಸ್ನೈನ್ ಅವರು ಮಾಹಿತಿ ನೀಡಿದ್ದಾರೆ.
ಗುರುವಾರದಿಂದ ಸುರಂಗದಲ್ಲಿ ಶಿಲಾಖಂಡರಾಶಿಗಳ ಮೂಲಕ ಪೈಪ್ ಸಾಗಣೆಯಲ್ಲಿ ಯಾವುದೇ ಪ್ರಗತಿ ಕಂಡುಬಂದಿಲ್ಲ. ಅಲ್ಲದೆ, ಸಿಕ್ಕಿಬಿದ್ದ ಕಾರ್ಮಿಕರನ್ನು ತಲುಪಲು ಅಂದಾಜು 15 ಮೀಟರ್ ಕೊರೆಯುವಿಕೆ ಇನ್ನೂ ಉಳಿದಿದೆ ಎಂದು ಅವರು ಹೇಳಿದರು.
ಯಾವುದೇ ಅಡೆತಡೆಗಳಿಲ್ಲದಿದ್ದರೆ, ಆಗರ್ ಯಂತ್ರದಿಂದ ಒಂದು ಗಂಟೆಯಲ್ಲಿ ಅಂದಾಜು 4-5 ಮೀಟರ್ ಕೊರೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಊಹೆ ಬೇಡ- ಮಾಧ್ಯಮಗಳಿಗೆ ಸಲಹೆ:ರಕ್ಷಣಾ ಕಾರ್ಯಾಚರಣೆಯನ್ನು ಪೂರ್ಣಗೊಳಿಸುವ ಸಮಯದ ಬಗ್ಗೆ ಊಹಿಸಬೇಡಿ ಎಂದು ಮಾಧ್ಯಮಗಳಿಗೆ ಅವರು ಸಲಹೆ ನೀಡಿದರು, ಏಕೆಂದರೆ ಇದು ತಪ್ಪು ಗ್ರಹಿಕೆಯನ್ನು ಉಂಟುಮಾಡುತ್ತದೆ. ಇದು ಕಷ್ಟಕರ ಮತ್ತು ಸವಾಲಿನ ಕಾರ್ಯಾಚರಣೆಯಾಗಿದೆ ಎಂದು ಅವರು ಹೇಳಿದರು.
ಎಲ್ಲಾ ಕಾರ್ಮಿಕರು ಸುರಕ್ಷಿತವಾಗಿದ್ದಾರೆ ಮತ್ತು ಅವರ ಸಂಬಂಧಿಕರು ಕೇಂದ್ರ ಸಚಿವ ವಿಕೆ ಸಿಂಗ್ ಮತ್ತು ಉತ್ತರಾಖಂಡ್ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರೊಂದಿಗೆ ಮಾತನಾಡಿದ್ದಾರೆ ಎಂದು ತಿಳಿಸಿದರು.
ಕೇಂದ್ರ ಏಜೆನ್ಸಿಗಳು ಮತ್ತು ಹಲವಾರು ರಾಜ್ಯ ಸರ್ಕಾರಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿವೆ ಎಂದು ಹಸ್ನೈನ್ ಹೇಳಿದರು.
ಬ್ಯಾಂಕಾಕ್​ನಲ್ಲಿ ಮೂರನೇ ವಿಶ್ವ ಹಿಂದೂ ಕಾಂಗ್ರೆಸ್/ಜಾಗತಿಕ ಸಂತೋಷಕ್ಕೆ ಭಾರತವೇ ಮಾರ್ಗದರ್ಶಿ ಎಂದ ಆರ್‌ಎಸ್‌ಎಸ್ ಮುಖ್ಯಸ್ಥರು
ಚೀನಾದಲ್ಲಿ ಈ ಬಾರಿ ಕೋವಿಡ್ ಬದಲು ಇನ್‌ಫ್ಲುಯೆಂಜಾ/ ಭಾರತದಲ್ಲಿ ಸದ್ಯಕ್ಕಿಲ್ಲ ಆತಂಕ
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
Sign in to your account
Please enter an answer in digits:nineteen − nineteen =
Remember me
