ನವದೆಹಲಿ: ಕೋವಿಡ್ 19 ಸಂಕಷ್ಟದ ಸನ್ನಿವೇಶದಲ್ಲಿ ಸಂಸತ್ತಿನ ಮುಂಗಾರು ಅಧಿವೇಶನ ನಡೆಯಲಿದ್ದು, ಈ ಸಲ ಪ್ರಶ್ನೋತ್ತರ ಅವಧಿ ಮತ್ತು ಪ್ರೈವೇಟ್ ಮೆಂಬರ್ಸ್ ಬಿಜಿನೆಸ್ ಇರುವುದಿಲ್ಲ ಎಂದು ರಾಜ್ಯಸಭಾ ಸಚಿಲಾಯದ ಅಧಿಸೂಚನೆ ತಿಳಿಸಿದೆ. ಆದಾಗ್ಯೂ, ಶೂನ್ಯವೇಳೆ ಮತ್ತು ಇತರೆ ಕಲಾಪಗಳು ವೇಳಾಪಟ್ಟಿಯಂತೆಯೇ ನಡೆಯಲಿದೆ ಎಂದು ಅದು ಸ್ಪಷ್ಟಪಡಿಸಿದೆ.
ಈ ಸಲದ ಮುಂಗಾರು ಅಧಿವೇಶನ ಸಂಸತ್ತಿನಲ್ಲಿ ಸೆಪ್ಟೆಂಬರ್ 14ರಿಂದ ಅಕ್ಟೋಬರ್ 1 ರ ತನಕ ನಡೆಯಲಿದೆ. ಕಲಾಪಕ್ಕೆ ಹಾಜರಾಗುವವರೆಲ್ಲರೂ ಕೋವಿಡ್ ಟೆಸ್ಟ್​ಗೆ ಒಳಗಾಗುವುದು ಸೇರಿ ಕರೊನಾ ವೈರಸ್​ ನಿಯಮಗಳನ್ನು ಪಾಲಿಸಬೇಕು.
ಇದನ್ನೂ ಓದಿ:ಯುಎನ್​ಎಸ್​ಸಿಯಲ್ಲಿ ಜಮ್ಮು-ಕಾಶ್ಮೀರದ ವಿಚಾರ ಔಟ್​ಡೇಟ್​
ಎಎನ್​ಐ ವರದಿ ಪ್ರಕಾರ, ವಾರಂತ್ಯವೂ ರಜೆ ಇರಲ್ಲ. ಉಭಯ ಸದನಗಳ ಕಲಾಪ ನಿತ್ಯವೂ ನಡೆಯಲಿದೆ. ಮೊದಲ ದಿನ (ಸೆಪ್ಟೆಂಬರ್ 14) ಲೋಕಸಭೆಯ ಕಲಾಪ ಬೆಳಗ್ಗೆ 9ರಿಂದ ಅಪರಾಹ್ನ 1 ಗಂಟೆ ತನಕ, ರಾಜ್ಯಸಭೆಯ ಕಲಾಪ ಅಪರಾಹ್ನ 3 ರಿಂದ ರಾತ್ರಿ 7ರ ತನಕ ನಡೆಯಲಿದೆ. ಆನಂತರದ ದಿನಗಳಲ್ಲಿ ರಾಜ್ಯಸಭೆಯ ಕಲಾಪ ಬೆಳಗ್ಗೆಯೂ, ಲೋಕಸಭೆಯ ಕಲಾಪ ಅಪರಾಹ್ನವೂ ನಡೆಯಲಿದೆ. ಉಭಯ ಸದನಗಳು ನಿತ್ಯವೂ ನಾಲ್ಕು ಗಂಟೆ ಕಲಾಪ ನಡೆಸಲಿವೆ. (ಏಜೆನ್ಸೀಸ್)
ತವರಿನ ಆಸ್ತಿ ಪಾಲು ಕೇಳೆಂದು ಕಿರುಕುಳ ನೀಡ್ತಿದ್ದಾರೆನ್ನುತ್ತ ಸಾವಿಗೆ ಶರಣಾದ್ಳು- ಪ್ರೇಮವಿವಾಹದ ದುರಂತಕಥೆ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:5 × four =
Remember me
