ನವದೆಹಲಿ:ರಷ್ಯಾ-ಯೂಕ್ರೇನ್ ಯುದ್ಧದ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತ ಸರ್ಕಾರದ ಶಾಂತಿ ಪ್ರಯತ್ನಗಳು ಈಗ ನಾರ್ವೆಯ ನೊಬೆಲ್ ಸಮಿತಿಯ ಉಪ ನಾಯಕ ಅಸ್ಲೆ ತೋಜ್ ಅವರಿಂದ ಪ್ರಶಂಸೆಗೆ ಒಳವಾಗಿವೆ. ಯುದ್ಧದ ಪರಿಸ್ಥಿತಿಯನ್ನು ತಟಸ್ಥಗೊಳಿಸಲು ಪ್ರಧಾನಿ ಮೋದಿ ಪಾತ್ರ ಮತ್ತು ಕ್ರಮಗಳನ್ನು ನೋಡಿದರೆ, ಅವರು ವಿಶ್ವದ ಶಾಂತಿಯ ಅತ್ಯಂತ ವಿಶ್ವಾಸಾರ್ಹ ಮುಖ ಎಂದು ಅವರು ಹೇಳಿದ್ದಾರೆ.
ಯೂಕ್ರೇನ್ ಯುದ್ಧವನ್ನು ಅಂತ್ಯಗೊಳಿಸಲು ತೆಗೆದುಕೊಂಡ ಪ್ರಯತ್ನಗಳಿಗಾಗಿ ಭಾರತ ಸರ್ಕಾರ ಮತ್ತು ಪ್ರಧಾನಿ ಮೋದಿಯನ್ನು ಶ್ಲಾಘಿಸಿದ ನೊಬೆಲ್ ಸಮಿತಿಯ ಉಪ ನಾಯಕ, “ಅಣ್ವಸ್ತ್ರಗಳ ಬಳಕೆಯ ಪರಿಣಾಮಗಳನ್ನು ರಷ್ಯಾಕ್ಕೆ ನೆನಪಿಸಲು ಭಾರತದ ಮಧ್ಯಸ್ಥಿಕೆ ತುಂಬಾ ಸಹಾಯಕವಾಗಿದೆ. ಭಾರತವು ದೊಡ್ಡ ಧ್ವನಿಯಲ್ಲಿ ಮಾತನಾಡಲಿಲ್ಲ. ಯಾರಿಗೂ ಬೆದರಿಕೆ ಹಾಕಿಲ್ಲ.
ಬಿಕ್ಕಟ್ಟಿನ ಸಂದರ್ಭದಲ್ಲಿ ಪ್ರಧಾನಿ ಮೋದಿಯವರ ಕಾಮೆಂಟ್‌ಗಳು ವಾಸ್ತವಕ್ಕಿಂತ ಹೆಚ್ಚು ಅಭಿವ್ಯಕ್ತಿಪೂರ್ಣವಾಗಿದ್ದವು. ದುರದೃಷ್ಟವಶಾತ್, ಅಮೆರಿಕ ಮತ್ತು ರಷ್ಯಾ ನಡುವಿನ ಯುದ್ಧ ಬಹಳ ಹತ್ತಿರದಲ್ಲಿದೆ. ಪ್ರಪಂಚದಾದ್ಯಂತ ವಿವಾದವನ್ನು ಪರಿಹರಿಸಲು ಇದು (ಹಿಂಸಾಚಾರ) ಮಾರ್ಗವಲ್ಲ ಎಂದು ಭಾರತದಿಂದ ಬಂದ ಸಿಗ್ನಲ್ ಸಮರ್ಥಿಸಿತು. ವಿಶ್ವದ ಜನಸಂಖ್ಯೆಯ ಬಹುಪಾಲು ಜನರು ಅವರ ಈ ಹೇಳಿಕೆ ಹಿಂದೆ ಇದ್ದಾರೆ. .”
ಈ ಹಿಂದೆ, ಹಲವಾರು ಅಂತಾರಾಷ್ಟ್ರೀಯ ನಾಯಕರು ಕೂಡ ಪ್ರಧಾನಿ ಮೋದಿಯವರನ್ನು ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಲು, ಅಂತರಾಷ್ಟ್ರೀಯ ಸಂಬಂಧಗಳನ್ನು ಬಲಪಡಿಸಲು ಮತ್ತು ಹಸಿವು ಮತ್ತು ಬಡತನವನ್ನು ಕಡಿಮೆ ಮಾಡಿರುವ ಬಗ್ಗೆ ಹೊಗಳಿದ್ದಾರೆ. 2018ರಲ್ಲಿ, ಪ್ರಧಾನಿ ಮೋದಿ, ಅಂತರಾಷ್ಟ್ರೀಯ ಆರ್ಥಿಕ ಬೆಳವಣಿಗೆ ಮತ್ತು ಸಹಕಾರವನ್ನು ಉತ್ತೇಜಿಸಲು ನೀಡಿದ ಕೊಡುಗೆಗಾಗಿ ಪ್ರತಿಷ್ಠಿತ ಸಿಯೋಲ್ ಶಾಂತಿ ಪ್ರಶಸ್ತಿಯನ್ನು ಪಡೆಯುವ ಮೂಲಕ ದಾಖಲೆಯ ಸಾಧನೆಯನ್ನು ಮಾಡಿದರು.
ಈ ಮೂಲಕ ಕಳೆದ ಮೂರು ದಶಕಗಳಲ್ಲಿ ಈ ಪ್ರಶಸ್ತಿಯನ್ನು ಪಡೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಏತನ್ಮಧ್ಯೆ, ನೋಬಲ್ ಪ್ಯಾನೆಲ್ ಸದಸ್ಯರು ಪ್ರಧಾನಿ ಮೋದಿಯವರ ಹೊಗಳಿಕೆಯ ಮಳೆಯು ಅನೇಕ ರಾಜತಾಂತ್ರಿಕರ ಹುಬ್ಬುಗಳನ್ನು ಏರಿಸಿದೆ. 2023ರ ನೊಬೆಲ್ ಪ್ರಶಸ್ತಿ ಘೋಷಣೆಗಳು ಅಕ್ಟೋಬರ್ 2ರಿಂದ 9ರವರೆಗೆ ನಡೆಯಲಿದೆ ಎಂದು ಅಧಿಕೃತ ವೆಬ್‌ಸೈಟ್ ತಿಳಿಸಿದೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + nineteen =
Remember me
