ನೋಯ್ಡಾ:ಕರೊನಾ ವೈರಸ್ ಇಡೀ ಜಗತ್ತಿಗೇ ಅಪಾಯವನ್ನು ತಂದೊಡ್ಡಿದೆ. ಮಹಾಮಾರಿಯ ನಿಯಂತ್ರಣಕ್ಕಾಗಿ ಭಾರತ ಸೇರಿ ಬಹುತೇಕ ಎಲ್ಲ ರಾಷ್ಟ್ರಗಳಲ್ಲೂ ಲಾಕ್​ಡೌನ್​ನಂತಹ ಕ್ರಮ ಅನುಸರಿಸಲಾಗುತ್ತಿದೆ.
ಗುಂಪುಸೇರಬೇಡಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಹೇಳಲಾಗುತ್ತಿದೆ. ಕರೊನಾ ಭಯದಿಂದ ದೇವಸ್ಥಾನ, ಚರ್ಚ್​, ಕೆಲವು ಮಸೀದಿಗಳನ್ನು ಮುಚ್ಚಲಾಗಿದೆ. ಆದರೆ ದುರಂತವೆಂದರೆ ಇನ್ನೂ ಹಲವರು ಕರೊನಾ ಗಂಭೀರತೆಯನ್ನು ಅರ್ಥ ಮಾಡಿಕೊಳ್ಳದೆ ಇರುವುದು.
ಇತ್ತೀಚೆಗೆ ದೆಹಲಿಯ ನಿಜಾಮುದ್ದೀನ್​ ಮರ್ಖಜ್​ನಲ್ಲಿ ತಬ್ಲಿಘಿ ಜಮಾತ್​ ಆಯೋಜಿಸಿದ್ದ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡ ಸಾವಿರಾರು ಮಂದಿಗೆ ಕರೊನಾ ವೈರಸ್ ತಗುಲಿದೆ. ಅಷ್ಟಾದರೂ ಆ ಸಮುದಾಯ ಮಾತ್ರ ಗುಂಪು ಸೇರುವುದನ್ನು, ಎಲ್ಲರೂ ಒಟ್ಟಾಗಿ ನಮಾಜ್ ಮಾಡುವುದನ್ನು ಬಿಡುತ್ತಿಲ್ಲ.
ಉತ್ತರಪ್ರದೇಶದ ನೊಯ್ಡಾದಲ್ಲಿ ಮಸೀದಿಯೊಂದರಲ್ಲಿ ಶುಕ್ರವಾರ ಗುಂಪಾಗಿ ಸೇರಿ ನಮಾಜ್​ ಮಾಡುತ್ತಿದ್ದವರನ್ನು ಪೊಲೀಸರು ಬಂಧಿಸಿದ್ದಾರೆ. ಲಾಕ್​ಡೌನ್​ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಕ್ಕೆ ಪ್ರಕರಣ ದಾಖಲಿಸಿದ್ದಾರೆ.
ನೊಯ್ಡಾದ ಕರೌಂದಾ ಗ್ರಾಮದಲ್ಲಿ ಘಟನೆ ನಡೆದಿದೆ. ಇಲ್ಲಿನ ಮಸೀದಿಯೊಂದರಲ್ಲಿ ಶುಕ್ರವಾರದ ಪ್ರಾರ್ಥನೆಗಾಗಿ ಸುಮಾರು 20-25 ಜನರು ಸೇರಿದ್ದರು. ಈ ಬಗ್ಗೆ ನಿಖರ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ತೆರಳಿದ್ದಾರೆ. ಖಾಕಿ ನೋಡುತ್ತಲೇ ನಮಾಜ್ ಮಾಡುತ್ತಿದ್ದವರು ಅಲ್ಲಿಂದ ಓಡಿ ಹೋಗಲು ಪ್ರಯತ್ನಿಸಿದ್ದಾರೆ. ಅವರಲ್ಲಿ 10 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕರೊನಾ ಸೋಂಕು ಪ್ರಸರಣ ಪ್ರಮಾಣ ಅತ್ಯಂತ ವೇಗವಾಗಿದೆ. ಓರ್ವ ಸೋಂಕಿತ 400 ಆರೋಗ್ಯವಂತರಿಗೆ ವೈರಸ್​ ಹಬ್ಬಿಸಬಲ್ಲ. ಹೀಗಿರುವಾಗ ಸಾಮಾಜಿಕ ಅಂತರವೊಂದೇ ಪಾರಾಗಲು ಮಾರ್ಗ. ಎಷ್ಟೇ ಅರಿವು ಮೂಡಿಸಿದರೂ ಕೆಲವರು ಹೀಗೆ ಕಣ್ಣುತಪ್ಪಿಸಿ ಗುಂಪು ಸೇರುತ್ತಿರುವುದರ ಬಗ್ಗೆ ಪೊಲೀಸರೇ ಆತಂಕ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)

ರಿಲಯನ್ಸ್ ಪವರ್​ನ ಕಲ್ಲಿದ್ದಲು ವಿದ್ಯುತ್​ ಸ್ಥಾವರದಲ್ಲಿ ಅವಘಡ; ವಿಷಕಾರಿ ತ್ಯಾಜ್ಯ ಸೋರಿಕೆ, ಮನೆಯಲ್ಲಿ ಇದ್ದ ಐವರು ನಾಪತ್ತೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + thirteen =
Remember me
