ಅಯೋಧ್ಯಾ: ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್​ನ ವಿಶ್ವಸ್ಥರ ಮಂಡಳಿಗೆ ತಮ್ಮನ್ನು ಸೇರಿಸಿಲ್ಲ ಎಂದು ರಾಮ ಜನ್ಮಭೂಮಿ ನ್ಯಾಸದ ಅಧ್ಯಕ್ಷ ಮಹಾಂತ ನೃತ್ಯ ಗೋಪಾಲ ದಾಸ್ ತೀವ್ರವಾಗಿ ಅಸಮಾಧಾನಗೊಂಡಿದ್ದಾರೆ.
ಪರಿಣಾಮ, ರಾಜ್ಯ ಬಿಜೆಪಿ ವರಿಷ್ಠರ ಆದೇಶದ ಮೇರೆಗೆ ಅಯೋಧ್ಯೆಯ ಶಾಸಕ ಬಿಜೆಪಿಯ ವೇದ ಪ್ರಕಾಶ್ ಗುಪ್ತಾ, ಮೇಯರ್ ರಿಷಿಕೇಶ್ ಉಪಾಧ್ಯಾಯ್, ಅಯೋಧ್ಯೆ ಮಹಾನಗರ ಅಧ್ಯಕ್ಷ ಅಭಿಷೇಕ್ ಮಿಶ್ರಾ ಅವರು ಅಯೋಧ್ಯೆಯ ಮಣಿರಾಮದಾಸ್ ದೇವಸ್ಥಾನಕ್ಕೆ ಆಗಮಿಸಿ, ಮಹಾಂತರ ಜತೆಗೆ ಮಾತುಕತೆ ನಡೆಸಲು ತೆರಳಿದ್ದರು. ಆದರೆ ಅವರ ಪ್ರಯತ್ನ ವಿಫಲವಾಗಿದೆ.
ದೇವಸ್ಥಾನ ಪ್ರವೇಶಿಸದಂತೆ ಈ ನಿಯೋಗವನ್ನು ತಡೆದ ಮಹಾಂತರು, ಅವರಿಗೆ ಸ್ಥಳಬಿಟ್ಟು ಹಿಂದಿರುಗುವಂತೆ ಸೂಚಿಸಿದ್ದಾರೆ. ಅಲ್ಲದೆ,ಅಪರಾಹ್ನ 3 ಗಂಟೆಗೆ ಸಂತರ ಸಭೆ ಕರೆದಿರುವ ಮಹಾಂತರು, ಸಂಜೆ 5 ಗಂಟೆಗೆ ಪತ್ರಿಕಾಗೋಷ್ಠಿ ನಡೆಸಲು ಚಿಂತನೆ ನಡೆಸಿದ್ದರು. ಆದೆ, ಮಹಾಂತರ ಉತ್ತರಾಧಿಕಾರಿ ಕಮಲ್ ನಯನ್ ದಾಸ್ ಅವರಿಗೆ ಗೃಹ ಸಚಿವಾಲಯದಿಂದ ಕರೆ ಬಂದ ಹಿನ್ನೆಲೆಯಲ್ಲಿ ಈ ಸಭೆ, ಪತ್ರಿಕಾಗೋಷ್ಠಿಗಳು ಕ್ಯಾನ್ಸಲ್ ಆಗಿವೆ ಎಂದು ಮಿಶ್ರಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ವೇದ ಪ್ರಕಾಶ್ ಗುಪ್ತಾ ನೀಡಿರುವ ಮಾಹಿತಿ ಪ್ರಕಾರ, ಟ್ರಸ್ಟ್​ನಲ್ಲಿ ಇನ್ನೂ ಮೂರು ಸ್ಥಾನಗಳು ಬಾಕಿ ಇವೆ.ಅದರಲ್ಲಿ ಮಹಾಂತ ಅವರನ್ನೂ ಸೇರಿಸಬಹುದೆಂಬ ಆಶ್ವಾಸನೆ ನೀಡಲಾಗಿದೆ. ಈ ಬಗ್ಗೆ ಅಮಿತ್ ಷಾ ಮತ್ತು ಮಹಾಂತರ ನಡುವೆ ದೂರವಾಣಿ ಸಂಭಾಷಣೆ ನಡೆದಿತ್ತು. ಲಖನೌನಿಂದಲೂ ಮಹಾಂತ ಅವರಿಗೆ ದೂರವಾಣಿ ಕರೆ ಬಂದಿತ್ತು. (ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × one =
Remember me
