ತೆಲಂಗಾಣ:ಮಂಗಗಳಿಗೆ ಹೆದರಿ ವೃದ್ಧೆಯೊಬ್ಬರು ಬಾವಿಗೆ ಹಾರಿದ ಘಟನೆ ಜಿಲ್ಲೆಯ ರಾಜಣ್ಣಸಿರಿಸಿಲ್ಲದಲ್ಲಿ ನಡೆದಿದೆ. ನಂತರ ಸ್ಥಳೀಯ ಯುವಕರು ಕೂಡಲೇ ಬಾವಿಗೆ ಹಗ್ಗ ಹಾಕಿ ಆಕೆಯನ್ನು ರಕ್ಷಿಸಿದ್ದಾರೆ.
ಭೋಪ್ಪಾಪುರ ಗ್ರಾಮದ ವೃದ್ಧೆ ಗಂಭೀರ್ ಪುರ ರಾಜವ್ವ ಮನೆಯಲ್ಲಿ ಒಬ್ಬರೇ ವಾಸವಾಗಿದ್ದಾರೆ. ಪಿಂಚಣಿ ಹಣದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಗ್ರಾಮದಲ್ಲಿ ತರಕಾರಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ ರಾಜವ್ವನ ಪತಿ ಕಳೆದ ವರ್ಷ ಮೃತಪಟ್ಟಿದ್ದರು. ವೃದ್ಧೆಯ ಮನೆಯಲ್ಲಿ ಒಂಟಿಯಾಗಿ ವಾಸವಿದ್ದಾರೆ. ಮಾವಿನ ಮರದ ಮೇಲೆ ಗುಂಪು ಗುಂಪಾಗಿ ಜಮಾಯಿಸಿದ ಮಂಗಗಳು ಮನೆಯಿಂದ ಹೊರ ಬಂದ ರಾಜವ್ವ ಮೇಲೆ ದಾಳಿ ನಡೆಸಿದ್ದು, ವೃದ್ಧೆ ಭಯದಿಂದ ಓಡಿ ಬಾವಿಗೆ ಬಿದ್ದಿದ್ದಾರೆ.
ಇದನ್ನೂ ಓದಿ:ಅಂತರಾಷ್ಟ್ರೀಯ ಬಿಯರ್​ ದಿನ 2023; ಆಚರಣೆ ಹಿಂದಿನ ಉದ್ದೇಶವೇನು?
ರಾಜವ್ವ ಅಡಿ ಆಳದ ಬಾವಿಯ ಮಧ್ಯದಲ್ಲಿ ಸಿಲುಕಿಕೊಂಡಿದ್ದಾರೆ. ತನ್ನನ್ನು ರಕ್ಷಿಸುವಂತೆ ಮನೆಯ ಪಕ್ಕದಲ್ಲಿದ್ದ ಕುಟುಂಬಸ್ಥರಿಗೆ ಕೂಗಿಕೊಂಡಿದ್ದಾಳೆ. ಒಂಟಿಯಾಗಿದ್ದ ರಾಜವ್ವನ ಕಿರುಚಾಟ ಕೇಳಿ ಅಕ್ಕಪಕ್ಕದ ಮನೆಯವರು ಓಡಿ ಬಂದು ಬಾವಿಗೆ ಬಿದ್ದಿರುವುದನ್ನು ಕಂಡು ಹಗ್ಗಗಳನ್ನು ಬಿಟ್ಟು ರಾಜವ್ವಳನ್ನು ರಕ್ಷಣೆ ಮಾಡಿದ್ದಾರೆ.
ವೃದ್ಧೆ ಬಾವಿಯಿಂದ ಮೇಲಕ್ಕೆ ಬಂದಾಗ ಗ್ರಾಮಸ್ಥರು ಆಖೆಯ ಪಕ್ಕದಲ್ಲಿ ನಿಂತು ಧೈರ್ಯ ತುಂಬಿದರು. ಸ್ಥಳೀಯ ಆರ್‌ಎಂಪಿ ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ.
ಮಂಗನ ಕಾಟದಿಂದ ಗ್ರಾಮದ ಜನರು ಸಂಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಕೋತಿಗಳ ಕಾಟದಿಂದ ಜನರನ್ನು ರಕ್ಷಿಸುವಂತೆ ಸಾಮಾಜಿಕ ಕಾರ್ಯಕರ್ತರು ಗ್ರಾಮದ ಸರಪಂಚ್, ಅಧಿಕಾರಿ ವರ್ಗಕ್ಕೆ ಮನವಿ ಮಾಡುತ್ತಿದ್ದಾರೆ. ಗ್ರಾಮದಲ್ಲಿ ಮಂಗಗಳ ಕಾಟ ಹೆಚ್ಚಾಗಿದೆ. ಬಾಗಿಲು ತೆರೆದು.. ಒಳಗೆ ಹೋಗುತ್ತಿದೆ. ಚಿಕ್ಕ ಮಕ್ಕಳ ಮೇಲೆ ದಾಳಿ ಮಾಡುತ್ತಿವೆ.. ಕೋತಿಗಳನ್ನು ಹಿಡಿದು ಅರಣ್ಯ ಪ್ರದೇಶಕ್ಕೆ ಬಿಡಲು ಅಧಿಕಾರಿಗಳು  ಮುಂದಾಗಿದ್ದಾರೆ.
ವಿಮಾನದಲ್ಲಿ ಎಸಿ ಆನ್​ ಮಾಡಲಿಲ್ಲ, ಬೆವರು ಒರೆಸಿಕೊಳ್ಳಲು ಟಿಶ್ಯೂ ಕೊಟ್ಟಿದ್ರು: ಇಂಡಿಗೋ ಪ್ಲೈಟ್​​ನ ಕಹಿ ಅನುಭವ ಬಿಚ್ಚಿಟ್ಟ ಕಾಂಗ್ರೆಸ್ ನಾಯಕ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + twelve =
Remember me
