ನವದೆಹಲಿ:ಮಾಜಿ ಆರ್​ಬಿಐ ಗವರ್ನರ್​ ಆಗಿದ್ದ ರಘುರಾಮ್ ರಾಜನ್ ಅವರಿಗೆ ಪಾಠ ಹೇಳಿಕೊಟ್ಟ ಹೆಸರಾಂತ ಐಐಟಿ ಪ್ರೋಫೆಸರ್​ ಇಂದು ಮಧ್ಯಪ್ರದೇಶದ ಬುಡಕಟ್ಟು ಜನಾಂಗದವರೊಂದಿಗೆ ಕೆಲಸ ಮಾಡಿಕೊಂಡು, ತಮ್ಮೆಲ್ಲಾ ಆಸ್ತಿ-ಅಂತಸ್ತು ತ್ಯಜಿಸಿ, ರಸ್ತೆ-ವಿದ್ಯುತ್​​ ಇಲ್ಲದ ಊರಿನಲ್ಲಿ ಜೀವನ ಮಾಡುತ್ತಿದ್ದಾರೆ. ತಮ್ಮ ಜೀವನವನ್ನು ಬುಡಕಟ್ಟು ಜನಗಳಿಗೆಂದೇ ಮಿಸಲಿಟ್ಟಿರುವ ಇವರ ಕೆಲಸ ಕೇಳಿದ್ರೆ ಹೃದಯ ಹಿಂಡುವಂತಿದೆ. ಈ ಕುರಿತು ಭಾರತದ ಕ್ರಿಕೆಟ್ ತಂಡದ ಮಾಜಿ ಆಟಗಾರ ವಿವಿಎಸ್​ ಲಕ್ಷಣ್​ ಒಂದಷ್ಟು ವಿಷಯ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:ಯಶವಂತಪುರದಲ್ಲಿ ಯಾವ ಅಭ್ಯರ್ಥಿ ಗೆಲ್ಲಬೇಕು? ಜನಾಭಿಪ್ರಾಯವೇನು?
ಐಐಟಿ ದೆಹಲಿಯ ಮಾಜಿ ಪ್ರಾಧ್ಯಾಪಕರಾದ ಅಲೋಕ್ ಸಾಗರ್ 1982ರಲ್ಲಿ ಉತ್ತಮ ಆದಾಯವನ್ನು ತಂದುಕೊಡುತ್ತಿದ್ದ ಕೆಲಸವನ್ನು ತೊರೆದು ಆದಿವಾಸಿಗಳ ಬದುಕು ರೂಪಿಸಲು, ಮಹಿಳೆಯರ ಉನ್ನತಿಗಾಗಿ ಕೆಲಸ ಮಾಡಲು ಮತ್ತು ಪ್ರಕೃತಿಯೊಂದಿಗೆ ಸಂಪರ್ಕದಲ್ಲಿರಲು ನಿರ್ಧರಿಸಿ ಬೇರೆ ರೀತಿಯ ಜೀವನ ಶೈಲಿಯಲ್ಲಿ ಜೀವಿಸುತ್ತಿದ್ದಾರೆ. ಇಂದು ಅನೇಕರಿಗೆ ಸ್ಫೂರ್ತಿದಾಯಕ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ.
ಐಐಟಿ ದೆಹಲಿಯಿಂದ ಪದವೀಧರರಾದ ಇವರು, ಸ್ನಾತಕೋತ್ತರ ಪದವಿಗಳ ಜತೆಗೆ, ಅಮೆರಿಕಾದ ಟೆಕ್ಸಾಸ್‌ನಲ್ಲಿರುವ ಹೂಸ್ಟನ್ ವಿಶ್ವವಿದ್ಯಾಲಯದಿಂದ ಪಿ.ಎಚ್​ಡಿ ಹೊಂದಿದ್ದಾರೆ. ವಿಶೇಷ ಎಂದರೆ ಆರ್‌ಬಿಐನ ಮಾಜಿ ಗವರ್ನರ್ ಆದ ರಘುರಾಮ್ ರಾಜನ್ ಅವರಿಗೂ ಇವರು ಪಾಠ ಹೇಳಿಕೊಟ್ಟಿದ್ದಾರೆ. ಈಗ ಇವರಿಗೆ ಈ ಎಲ್ಲಾ ಪದವಿಗಳು ಅರ್ಥಹೀನವಾಗಿವೆ. ಇದ್ಯಾವುದು ಅವರಿಗೆ ತೃಪ್ತಿ ನೀಡಿಲ್ಲ. ಹೀಗಾಗಿ ಬದುಕಿನ ದಿಕ್ಕನ್ನು ಬದಲಾಯಿಸಿದ ಅಲೋಕ್​, ಕಳೆದ 26 ವರ್ಷಗಳಿಂದ ಮಧ್ಯಪ್ರದೇಶದ ಕೊಚಾಮುದಲ್ಲಿ ವಾಸಿಸುತ್ತಿದ್ದಾರೆ. ಇದು ವಿದ್ಯುತ್ ಮತ್ತು ರಸ್ತೆಯಿಲ್ಲದ ಊರಾಗಿದೆ.
ಇದನ್ನೂ ಓದಿ:ಮುಂಬೈ ಪರ ಬುಮ್ರಾಗೆ 5 ವಿಕೆಟ್, ತಲೆಬಾಗಿದ ಆರ್​ಸಿಬಿ ವೇಗಿ ಮೊಹಮ್ಮದ್ ಸಿರಾಜ್!​
ಪ್ರಕೃತಿ ಮತ್ತು ಮರಗಳ ರಕ್ಷಣೆಗೆ ಮುಂದಾಗಿರುವ ಅವರು, ಇಲ್ಲಿಯವರೆಗೆ 50,000ಕ್ಕೂ ಅಧಿಕ ಮರಗಳನ್ನು ಬೆಳೆಸಿ, ಪೋಷಿಸುತ್ತಿದ್ದಾರೆ. ಪರಿಸರ ಕಾಳಜಿ ವಹಿಸಲು ಜನರಿಗೆ ಶಿಕ್ಷಣ ನೀಡುವುದರ ಜತೆಗೆ ಬುಡಕಟ್ಟು ಜನಾಂಗದವರ ಅಭಿವೃದ್ಧಿಗೆ ಹೆಚ್ಚು ಶ್ರಮಿಸುತ್ತಿದ್ದಾರೆ ಎಂದು ಅಲೋಕ್​ ಅವರೊಂದಿಗೆ ನಿಕಟ ಸಂಬಂಧ ಹೊಂದಿರುವ ಶ್ರಮಿಕ್ ಆದಿವಾಸಿ ಸಂಘಟನೆಯ ಅನುರಾಗ್ ಮೋದಿ ತಿಳಿಸಿದ್ದಾರೆ.
24 ವರ್ಷಗಳಿಂದ ಅಲೋಕ್ ಬುಡಕಟ್ಟು ಜನಾಂಗದವರಿಗೆ ಮರಗಳನ್ನು ನೆಡುವಂತೆ ಜಾಗೃತಿ ಮೂಡಿಸಲು ಪ್ರಯತ್ನಿಸುತ್ತಿದ್ದು, ಅಲ್ಲಿನ ಸ್ಥಳೀಯ ಭಾಷೆಯನ್ನು ಕಲಿತು, ಅವರಂತೆಯೇ ಜೀವನಶೈಲಿ ನಡೆಸುವುದನ್ನು ಅಳವಡಿಸಿಕೊಂಡಿದ್ದಾರೆ. ಏಳೆಂಟು ಭಾಷೆಗಳ ಮೇಲೆ ಹಿಡಿತ ಹೊಂದಿರುವ ವಿದ್ಯಾವಂತ ವ್ಯಕ್ತಿಯನ್ನು, ಇಲ್ಲಿನ ಬುಡಕಟ್ಟು ಜನರು ನಿಧಾನವಾಗಿ ನಂಬಲು ಪ್ರಾರಂಭಿಸಿದರು ಎಂದು ಮೋದಿ ಹೇಳಿದ್ದಾರೆ.
ಇದನ್ನೂ ಓದಿ:ಮುರುಗೇಶ್​​ ನಿರಾಣಿಗೆ ಬಸವಜಯ ಮೃತ್ಯುಂಜಯ ಸ್ವಾಮೀಜಿ ತಿರುಗೇಟು
ಇನ್ನು ಇವರ ನಿಸ್ವಾರ್ಥ ಸೇವೆ, ಬುಡಕಟ್ಟು ಜನರಿಗಾಗಿ, ಪಕೃತಿಗಾಗಿ ಇಡೀ ಜೀವನವನ್ನೇ ಮುಡಿಪಾಗಿಟ್ಟ ಕಾರಣ ಮೆಚ್ಚಿದ ವಿವಿಎಸ್​ ಲಕ್ಷಣ್​, “ಇದುವರೆಗೆ ಕಾಣುವ ಅತ್ಯಂತ ಸ್ಪೂರ್ತಿದಾಯಕ ವ್ಯಕ್ತಿಗಳಲ್ಲಿ ಇವರು ಸಹ ಒಬ್ಬರು. ಮಧ್ಯಪ್ರದೇಶದ ದೂರದ ಬುಡಕಟ್ಟು ಗ್ರಾಮ ಕೊಚಮುದಲ್ಲಿ ವಾಸಿಸುತ್ತಿದ್ದಾರೆ ಮತ್ತು ಇಲ್ಲಿ ವಿದ್ಯುತ್ ಹಾಗೂ ರಸ್ತೆಗಳ ಕೊರತೆಯಿದೆ. ಈ ಪ್ರದೇಶದಲ್ಲಿ 50,000ಕ್ಕೂ ಹೆಚ್ಚು ಮರಗಳನ್ನು ನೆಟ್ಟಿದ್ದಾರೆ” ಎಂದರು.
One of the most inspirational man one will ever come across.Prof Alok Sagar ji is an IIT Delhi graduate, masters & Phd from Houston & an ex IIT professor.However, these esteemed credentials held no meaning for him, as he discovered his true calling in one of the most remote…pic.twitter.com/OiRknPcjc7
— VVS Laxman (@VVSLaxman281)April 12, 2024

“ಗ್ರಾಮೀಣ ಅಭಿವೃದ್ಧಿ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಸಾಗರ್​ ಅವರು ನೆರೆಯ ಹಳ್ಳಿಗಳಿಗೆ ಬೀಜಗಳನ್ನು ವಿತರಿಸಲು ಸೈಕಲ್ ತುಳಿದು 60 ಕಿಲೋಮೀಟರ್ ಪ್ರಯಾಣಿಸುತ್ತಾರೆ. ಪ್ರೊಫೆಸರ್ ಅಲೋಕ್ ಸಾಗರ್ ಅವರ ಜೀವನವು ಒಂದು ಪ್ರಬಲ ಉದಾಹರಣೆಯಾಗಿದೆ. ಒಂದು ಒಳ್ಳೆಯ ಕೆಲಸಕ್ಕೆ ನಾವು ಬದ್ಧರಾದರೆ, ಯಾವುದೇ ಕಾರಣಗಳು ಅಡಿಯಾಗುವುದಿಲ್ಲ” ಎಂದು ಬರೆದು ಹಂಚಿಕೊಂಡಿದ್ದಾರೆ,(ಏಜೆನ್ಸೀಸ್).
4 ಗಂಟೆಗಳ ಕಾಲ ಅವರಿಬ್ಬರು ಹೀಗೆ ಇದ್ರು! ಅದನ್ನು ನೋಡಿ… ಪ್ರಯಾಣಿಕ ಹರಿಬಿಟ್ಟ ದೃಶ್ಯ ನೋಡಿ ದಂಗಾದ ನೆಟ್ಟಿಗರು

ಎಕ್ಕೆ ಎಲೆ ನೋಡಿ ರೈತರು ಹೇಳ್ತಾರೆ ಭವಿಷ್ಯ! ಇದು ಯುಗಾದಿ ಹಬ್ಬದಂದು ಮಾತ್ರ ಸಾಧ್ಯ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + 11 =
Remember me
