ತಿರುವನಂತಪುರ: ಕೇರಳದಲ್ಲಿ ಇದುವರೆಗಿನ ವರದಿ ಪ್ರಕಾರ, ಪತ್ತೆಯಾದ 502 COVID19 ಕೇಸ್​ಗಳ ಪೈಕಿ ಈಗ ಆ್ಯಕ್ಟಿವ್ ಆಗಿರುವ ಕೇಸ್​ಗಳ ಸಂಖ್ಯೆ ಕೇವಲ 30. ಬುಧವಾರ ಯಾವುದೇ ಪಾಸಿಟಿವ್​ ಕೇಸ್​ಗಳು ದಾಖಲಾಗಿಲ್ಲ. ಆದರೆ ಏಳು ಜನರ ಮಾದರಿಗಳು ನೆಗೆಟಿವ್ ಬಂದಿದೆ. ಅಲ್ಲದೆ, ಪತ್ತನಂತಿಟ್ಟದಲ್ಲಿ ಆಸ್ಪತ್ರೆಯಿಂದ ಡಿಸ್​​ಚಾರ್ಜ್​ ಆಗಿ 42 ದಿನಗಳ ಬಳಿಕ ಆ್ಯಕ್ಟಿವ್ ಕೇಸ್ ದೃಢಪಟ್ಟಿರುವುದೇ ಕೊನೆಯ ಆ್ಯಕ್ಟಿವ್ ಕೇಸ್​ ಆಗಿ ದಾಖಲಾಗಿದೆ.
ಇದನ್ನೂ ಓದಿ:VIDEO: ವಿದ್ಯಾರ್ಥಿಗಳೇ ಚಿಂತೆ ಬಿಟ್ಟು ಓದಿನೆಡೆಗೆ ಗಮನಹರಿಸಿ: ವಿಜಯವಾಣಿ ಫೋನ್​ ಇನ್​ ಕಾರ್ಯಕ್ರಮದಲ್ಲಿ ಪ್ರೊ.ಸಿದ್ದು ಅಲಗೂರು
ಈ ಸಂಬಂಧ ಮಾತನಾಡಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್​, ರಾಜ್ಯದಲ್ಲಿ ಎಂಟು ಜಿಲ್ಲೆಗಳು ಈಗಾಗಲೇ ಕೋವಿಡ್ 19 ಮುಕ್ತವಾಗಿವೆ. ಒಟ್ಟು 14,670 ಜನರನ್ನು ಕ್ವಾರಂಟೈನ್​​ನಲ್ಲಿ ಇರಿಸಿದ್ದು, ಈ ಪೈಕಿ 14,402 ಜನ ಮನೆಯಲ್ಲೇ ನಿಗಾದಲ್ಲಿದ್ದಾರೆ. 268 ಜನ ಸೂಚಿತ ಐಸೋಲೇಷನ್​ ಸೌಲಭ್ಯ ಇರುವಲ್ಲಿ ಇದ್ದಾರೆ. ಇದುವರೆಗೆ 34,599 ಸ್ಯಾಂಪಲ್​ಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಇದರಲ್ಲಿ 34,063 ನೆಗೆಟಿವ್ ಬಂದಿದೆ. ಹೆಚ್ಚುವರಿಯಾಗಿ 2,947 ಸ್ಯಾಂಪಲ್ಸ್​ಗಳನ್ನು ಹೆಲ್ತ್​ ಕೇರ್​ ಸಿಬ್ಬಂದಿಯಿಂದ ಸಂಗ್ರಹಿಸಲಾಗಿದೆ. ಇದಲ್ಲದೆ, ಚಿಕಿತ್ಸೆ ಪಡೆಯುತ್ತಿರುವ ಏಳು ಕೋವಿಡ್​ 19 ರೋಗಿಗಳ ಫಲಿತಾಂಶ ನೆಗೆಟಿವ್ ಬಂದಿದೆ. ಇವರಲ್ಲಿ ಆರು ಜನ ಕೊಟ್ಟಾಯಂ ಮತ್ತು ಒಬ್ಬರು ಇಡುಕ್ಕಿಯವರು. ಪ್ರಸ್ತುತ 30 ಕೋವಿಡ್​ 19 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ:PHOTOS: ಕಾಂಗೋ ಗೊರಿಲ್ಲಾಗಳ 12 ರಕ್ಷಕರನ್ನೇ ಕೊಂದು ಹಾಕಿದ್ರು ಬಂಡುಕೋರರು!
ಬೇರೆ ಬೇರೆ ರಾಜ್ಯಗಳಲ್ಲಿ ಬಾಕಿಯಾಗಿರುವ ಕೇರಳೀಯರನ್ನು ವಾಪಸ್​ ಕೇರಳಕ್ಕೆ ಕರೆತರಲು ಆಯಾ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ದೆಹಲಿ, ಪಂಜಾಬ್​, ಹಿಮಾಚಲ ಪ್ರದೇಶ, ಹರಿಯಾಣಗಳಲ್ಲಿ ಕೇರಳದ 723 ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದಾರೆ. ಅವರನ್ನು ಕಳುಹಿಸಲು ಆಯಾ ರಾಜ್ಯ ಸರ್ಕಾರಗಳಿಗೆ ವಾಹನದ ವ್ಯವಸ್ಥೆ ಮಾಡಿ ಕೊಡುವಂತೆ ಕೇಳಲಾಗಿದೆ. ವಿಶೇಷ ರೈಲು ಒದಗಿಸಿದರೆ ಉತ್ತಮ ಎಂದು ಹೇಳಿರುವುದಾಗಿ ಸಿಎಂ ಪಿಣರಾಯಿ ಹೇಳಿದರು.
ಇದನ್ನೂ ಓದಿ:ಎಚ್ಚರಿಕೆಯಿಂದ ಇರಿ – ಮೊಟ್ಟೆಗಳನ್ನು ನೋಡಿ ಬೆಚ್ಚಿ ಬಿದ್ದ ಜುವೆಲ್ಲರಿ ಶಾಪ್ ಮಾಲೀಕ !
ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ ಸೇರಿ ವಿವಿಧ ರಾಜ್ಯಗಳಲ್ಲಿ 6,802 ಕೇರಳೀಯರು ಸಿಲುಕಿಕೊಂಡಿದ್ದರು. ಅವರೆಲ್ಲರೂ ಈಗ ಕೇರಳ ತಲುಪಿದ್ದು ಈ ಪೈಕಿ 66 ಗರ್ಭಿಣಿಯರೂ ಇದ್ದಾರೆ. ವಯಲಾರ್​ ಗಡಿಯಲ್ಲಿ ಹೆಚ್ಚಿನ ಜನದಟ್ಟಣೆ ಕಾಣಿಸಿದ್ದು, ಮರಳಿ ಊರಿಗೆ ತಲುಪುವ ಸಂಭ್ರಮ ಅಲ್ಲಿ ಕಾಣಿಸಿಕೊಂಡಿದೆ ಎಂದು ಪಿಣರಾಯಿ ವಿಜಯ್​ ಸ್ಪಷ್ಟಪಡಿಸಿದ್ದಾರೆ. (ಏಜೆನ್ಸೀಸ್​​)
ವಿಷಾನಿಲ ದುರಂತ; ಮೃತರ ಕುಟುಂಬಗಳಿಗೆ ಒಂದು ಕೋಟಿ ರೂ. ಪರಿಹಾರ ಘೋಷಣೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × one =
Remember me
