ನವದೆಹಲಿ :ಮುಂಗಾರು ಅಧಿವೇಶನದ ಮೊದಲ ದಿನ ಉಭಯಸದನಗಳಲ್ಲಿ ಗದ್ದಲ ಉಂಟುಮಾಡಿ ಕಲಾಪಗಳು ಮುಂದೂಡಲ್ಪಡುವಂತೆ ಮಾಡಿದ ವಿರೋಧಪಕ್ಷಗಳ ನಡವಳಿಕೆಯನ್ನು ರಾಜ್ಯಸಭೆಯ ಬಿಜೆಪಿ ನಾಯಕ ಪಿಯೂಶ್​ ಗೋಯಲ್ ಖಂಡಿಸಿದ್ದಾರೆ. ವಿಪಕ್ಷಗಳ ವಿರೋಧದಿಂದಾಗಿ ಇಂದಿನ ಲೋಕಸಭಾ ಕಲಾಪವನ್ನು ಎರಡು ಬಾರಿ ಮುಂದೂಡಲಾಯಿತಾದರೆ, ರಾಜ್ಯಸಭಾ ಕಲಾಪವನ್ನು ಮೂರು ಬಾರಿ ಮುಂದೂಡಲಾಯಿತು.
“ಲೋಕಸಭೆ ಮತ್ತು ರಾಜ್ಯಸಭೆ ಎರಡೂ ಕಡೆಗಳಲ್ಲಿ ದುರದೃಷ್ಟಕರ ಪರಿಸ್ಥಿತಿ ನೋಡಿದೆವು. ರಾಜ್ಯಸಭೆಯಲ್ಲಂತೂ, ಅಧ್ಯಕ್ಷರ ಭಾಷಣಕ್ಕೂ ಅಡ್ಡಿಪಡಿಸಲಾಯಿತು” ಎಂದಿರುವ ಗೋಯಲ್​, “ಸಚಿವ ಸಂಪುಟ ಸೇರಿರುವ ದಲಿತರು, ಒಬಿಸಿ, ಎಸ್​ಸಿ-ಎಸ್​ಟಿ, ಈಶಾನ್ಯ ರಾಜ್ಯಗಳ ಪ್ರತಿನಿಧಿಗಳು ಮತ್ತು ಮಹಿಳೆಯರನ್ನು ಪರಿಚಯಿಸುವ ಕಾರ್ಯಕ್ಕೆ ಅಡಚಣೆ ಉಂಟುಮಾಡಿದ್ದಾರೆ. ಪ್ರತಿಪಕ್ಷದ ಸಂಸದರು ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ನಿಲ್ಲಿಸಿದರು. ಇದು ಪ್ರಜಾಪ್ರಭುತ್ವ ಮತ್ತು ಭಾರತದ ಜನರಿಗೆ ಮಾಡಿದ ಅವಮಾನ. ಇದನ್ನು ನಾವು ಖಂಡಿಸುತ್ತೇವೆ” ಎಂದು ಗೋಯಲ್​ ಸುದ್ದಿಗಾರರಿಗೆ ಹೇಳಿದರು.
ಇದನ್ನೂ ಓದಿ:ಮುಂಗಾರು ಅಧಿವೇಶನ: ಸದನದ ಆರಂಭದಲ್ಲೇ ವಿಪಕ್ಷಗಳ ಗದ್ದಲ! ಮುಂದೂಡಲ್ಪಟ್ಟಿತು ಕಲಾಪ
ವಿರೋಧಪಕ್ಷಗಳ ಸಂಸದರು ರೈತ ಪ್ರತಿಭಟನೆ, ಬೆಲೆ ಏರಿಕೆ, ಇಂಧನ ಬೆಲೆ ಏರಿಕೆ ಮತ್ತು ಕೋವಿಡ್​ 19 ನಿರ್ವಹಣೆ ಮುಂತಾದ ವಿಚಾರಗಳ ಕುರಿತು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ರಾಜ್ಯಸಭೆಯಲ್ಲಿ ಕಾಂಗ್ರೆಸ್​ ಬೆಲೆ ಏರಿಕೆ ಬಗ್ಗೆ ಸಸ್ಪೆಂಷನ್ ಆಫ್ ಬಿಸಿನೆಸ್ ನೋಟೀಸನ್ನು ನೀಡಿದೆ ಮತ್ತು ಇತರ ಪಕ್ಷಗಳು ರೈತರ ವಿಚಾರದಲ್ಲಿ ನೋಟೀಸು ನೀಡಿವೆ. ಸರ್ಕಾರದ ಪರವಾಗಿ ಆರಂಭವಾಗುವ ಕಲಾಪಗಳನ್ನು ಬಿಟ್ಟು ತಾವು ಎತ್ತಿರುವ ವಿಚಾರಗಳ ಬಗ್ಗೆ ಕಲಾಪದಲ್ಲಿ ಚರ್ಚೆಯಾಗಬೇಕು ಎಂಬುದು ಅವರ ವಾದವಾಗಿದೆ.(ಏಜೆನ್ಸೀಸ್)
ಟೋಕಿಯೋ ಒಲಂಪಿಕ್ಸ್: ಕುದುರೆ ಸವಾರಿಯ ವಿಶಿಷ್ಟ ಸ್ಪರ್ಧೆಗೆ ಬೆಂಗಳೂರಿಗ

VIDEO | ಡ್ರಗ್ಸ್​ ಮೇಲೆ ಬುಲ್ಡೋಜರ್​ ಓಡಿಸಿದರು ಈ ಮುಖ್ಯಮಂತ್ರಿ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:fourteen − 10 =
Remember me
