ನವದೆಹಲಿ:ಮಣಿಪುರದಲ್ಲಿ ಸಂಭವಿಸಿದ್ದ ಜನಾಂಗೀಯ ಘರ್ಷಣೆ ಕುರಿತು ಪ್ರಧಾನಿ ಮೋದಿ ಉತ್ತರಿಸಬೇಕು ಎಂದು ಆಗ್ರಹಿಸಿ ವಿಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವನ್ನು ಉದ್ದೇಶಿಸಿ ಮಾತನಾಡಿದ ಪಿಎಂ ಕೇಂದ್ರ ಸರ್ಕಾರದ ಮೇಲೆ ಜನತೆಗೆ ವಿಶ್ವಾಸವಿದೆ. ಅವಿಶ್ವಾಸ ನಿರ್ಣಯ ಮಂಡಿಸಿದ್ದಕ್ಕೆ ವಿಪಕ್ಷಗಳಿಗೆ ಧನ್ಯವಾದಗಳು ಎಂದು ಪ್ರಧಾನಿ ಮೋದಿ ಟಾಂಗ್​ ಕೊಟ್ಟಿದ್ದಾರೆ.
ಜನತೆಯ ಆಶೀರ್ವಾದದೊಂದಿಗೆ ಹಿಂದಿನ ಎಲ್ಲಾ ದಾಖಲೆಗಳನ್ನೂ ಮುರಿದು ಬಿಜೆಪಿ ನೇತೃತ್ವದ ಎನ್​ಡಿಎ ಒಕ್ಕೂಟವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಬೇಕೆಂದು ನೀವುಗಳು ನಿರ್ಧರಿಸಿರುವುದನ್ನು ನಾನು ನೋಡುತ್ತಿದ್ದೇನೆ. ಪ್ರತಿಯೊಬ್ಬ ಸಂಸದರ ಮಾತನ್ನು ನಾನು ಕೇಳಿದ್ದೇನೆ. ದೇಶದ ಜನತೆ ನಮ್ಮ ಮೇಲೆ ನಂಬಿಕೆ ಇಟ್ಟಿದ್ದಾರೆ. ವಿಪಕ್ಷಗಳು ಅವಿಶ್ವಾಸ ಮಂಡಿಸಿದ್ದು ನಾನು ದೇವರ ಆಶೀರ್ವಾದ ಎಂದು ಭಾವಿಸುತ್ತೇನೆ.
2018ರಲ್ಲೂ ವಿಪಕ್ಷಗಳು ಈಗೆ ಅವಿಶ್ವಾಸ ನಿರ್ಣಯವನ್ನೂ ಮಂಡಿಸಿದ್ದವು. ನಾನು ಆಗ ಸದನದಲ್ಲಿ ಒಂದು ಮಾತು ಹೇಳಿದ್ದೆ ಈ ಪರೀಕ್ಷೆ ನಮಗಲ್ಲ ಬದಲಾಗಿ ನಿಮಗೆ ಎಂದಿದ್ದೆ. ಅದರ ಪರಿಣಾಮವಾಗಿ ಅವರು ಚುನಾವಣೆಯಲ್ಲಿ ಸೋತರು. ನಿಮಗೆ ಬಡವರ ಹಸಿವಿಗಿಂತ ಅಧಿಕಾರದ ಚಿಂತೆ ಜಾಸ್ತಿಯಾಗಿದೆ. ನೀವು ದೇಶದ ಯುವ ಜನತೆಯ ಬಗ್ಗೆ ಚಿಂತಿಸುತ್ತಿಲ್ಲ ಬದಲಾಗಿ ನಿಮ್ಮ ಭವಿಷ್ಯದ ಬಗ್ಗೆ ಹೆಚ್ಚಾಗಿ ಯೋಚಿಸುತ್ತಿದ್ದೀರಾ ಎಂದು ಚಾಟಿ​ ಬೀಸಿದ್ದಾರೆ.
#WATCH| PM Narendra Modi says, "God is very kind and speaks through some medium…I believe that it's the blessing of God that opposition has brought this motion. I had said during the no-confidence motion in 2018 that it was not a floor test for us but a floor test for them…pic.twitter.com/GHysTGoUP6
ಎದುರಾಳಿ ಎಷ್ಟೇ ಚೆನ್ನಾಗಿ ಫೀಲ್ಡಿಂಗ್​ ಸೆಟ್​ ಮಾಡಿದ್ದರು ಸಹ ಇಲ್ಲಿಂದ ಬೌಂಡರಿ ಹಾಗೂ ಸಿಕ್ಸರ್​ಗಳು ಹೋಗುತ್ತಿದ್ದವು. ಇತ್ತ ನಾವು ಶತಕಗಳನ್ನು ಬಾರಿಸುತ್ತಲೇ ಇದ್ದೆವು ಆದರೆ, ನಿಮ್ಮವರು ನಿರಂತರವಾಗಿ ನೋಬಾಲ್​ಗಳನ್ನು ಹಾಕುತ್ತಿದ್ದರು. ನಾವು ನಿಮಗೆ ಐದು ವರ್ಷಗಳ ಕಾಲ ತಯಾರಾಗಲು ಅವಕಾಶ ಕೊಟ್ಟಿದ್ದರು ಸಹ ನೀವು ಏನು ಮಾಡಲಿಲ್ಲವಲ್ಲ ಯಾಕೆ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ:ನೂತನ ಯೋಜನೆಯಡಿ ಮಹಿಳೆಯರಿಗೆ ಉಚಿತ ಸ್ಮಾರ್ಟ್​ಫೋನ್​ ವಿತರಿಸಿದ ರಾಜಸ್ಥಾನ ಸರ್ಕಾರ
ವಿರೋಧ ಪಕ್ಷದವರು ದೇಶದ ಬಗ್ಗೆ ಒಳ್ಳಯದನ್ನು ಕೇಳಲು ಸಾಧ್ಯವಿಲ್ಲ. ಅವಿಶ್ವಾಸ ನಿರ್ಣಯದ ನೇತೃತ್ವವನ್ನು ವಿರೋಧ ಪಕ್ಷದ ನಾಯಕರು ವಹಿಸುತ್ತಾರೆ. ಆದರೆ, ಇಲ್ಲಿ ಅವರಿಗೆ ಮಾತನಾಡಲು ಅವಕಾಶ ನೀಡಲಾಗಿಲ್ಲ. ಅವರನ್ನು ನೋಡಿ ನನಗೆ ತುಂಬಾ ನೋವಾಗುತ್ತಿದೆ ಎಂದು ಲೋಕಸಭೆ ವಿಪಕ್ಷ ನಾಯಕ ಅಧೀರ್​ ರಂಜನ್​ ಚೌಧರಿ ಕುರಿತು ಪ್ರಧಾನಿ ಮೋದಿ ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್​ ಪಕ್ಷದಲ್ಲಿ ಮೂಲವಾಗಿ ಏನು ಇಲ್ಲ ಚಿಹ್ನೆ ಹಾಗೂ ಸಿದ್ದಾಂತಗಳಿಂದ ಹಿಡಿದು ಎಲ್ಲವನ್ನೂ ಕಳ್ಳತನ ಮಾಡಲಾಗಿದೆ. ಕಾಂಗ್ರೆಸ್​ ಪಕ್ಷಕ್ಕೆ ದೇಶ ಹಾಗೂ ಜನತೆಯ ಬಗ್ಗೆ ವಿಶ್ವಾಸವಿಲ್ಲ. ಅವಿಶ್ವಾಸ ಹಾಗೂ ದುರಹಂಕಾರ ಅವರ ರಕ್ತದ ಕಣಕಣದಲ್ಲೂ ಇದೇ ಎಂದು ಪ್ರಧಾನಿ ಮೋದಿ ವಿಪಕ್ಷಗಳು ಮಂಡಿಸಿದ್ದ ನಿರ್ಣಯವನ್ನು ಉದ್ದೇಶಿಸಿ ಮಾತನಾಡುವ ವೇಳೆ ಚಾಟಿ ಬೀಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 20 =
Remember me
