ಪ್ರತಿ ವಾರ ಹೊಸ ಚಲನಚಿತ್ರಗಳು ಮತ್ತು ವೆಬ್ ಸರಣಿಗಳು OTT ಪ್ಲಾಟ್‌ಫಾರ್ಮ್‌ಗಳಲ್ಲಿ ಬಿಡುಗಡೆಯಾಗುತ್ತವೆ. ಅವರಿಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿರುತ್ತಾರೆ. ಈ ವಾರದ ಕೊನೆಯಲ್ಲಿ ಹಲವು ಚಲನಚಿತ್ರಗಳು ಮತ್ತು ವೆಬ್ ಸರಣಿಗಳು ಬಿಡುಗಡೆಗೆ ಸಿದ್ಧವಾಗಿವೆ. ಇದುವರೆಗೂ ಪಂಚಾಯತ್ ಸೀಸನ್ 3 ಬಿಡುಗಡೆಯ ಹ್ಯಾಂಗೊವರ್‌ನಿಂದ ಪ್ರೇಕ್ಷಕರು ಹೊರಬಂದಿಲ್ಲ, ಈ ನಡುವೆ ಟಿವಿಎಫ್ ಮತ್ತೊಂದು ಜನಪ್ರಿಯ ವೆಬ್ ಸರಣಿ ಗುಲ್ಲಕ್ ಸೀಸನ್ 4 OTT ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ.
ಇದನ್ನು ಓದಿ:ಮೋದಿ ಜಿ ರೂಪದಲ್ಲಿ ಭಾರತವು ಸರಿಯಾದ ಸಮಯದಲ್ಲಿ ಸರಿಯಾದ ನಾಯಕನನ್ನು ಹೊಂದಿದೆ: ಚಂದ್ರಬಾಬು ನಾಯ್ಡು
‘ಗುಲ್ಲಕ್ 4’ ವೆಬ್ ಸರಣಿಯು ಈ ವಾರಾಂತ್ಯದಲ್ಲಿ ನಿಮ್ಮನ್ನು ರಂಜಿಸಲು ಬಿಡುಗಡೆಯಾಗುತ್ತಿದೆ. ಇದರೊಂದಿಗೆ, ಇನ್ನೂ ಅನೇಕ ದೊಡ್ಡ ಬಿಡುಗಡೆಗಳು ಸಹ ಸಿದ್ಧವಾಗಿವೆ. ಜತೆಗೆ ನಟ ವಿಕ್ರಾಂತ್ ಮಾಸ್ಸೆ ಅವರು ನಟಿಸಿರು ಚಿತ್ರ “ಬ್ಲಾಕೌಟ್” ಕೂಡ ಬಿಡುಗಡೆಯಾಗುತ್ತಿದೆ. ದೇವಾಂಗ್ ಶಶಿನ್ ಭಾವಸರ್ ನಿರ್ದೇಶಿಸಿರುವ ಈ ಚಿತ್ರದಲ್ಲಿ ವಿಕ್ರಾಂತ್ ಕ್ರೈಂ ವರದಿಗಾರನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಕಾಮಿಡಿ-ಥ್ರಿಲ್ಲರ್ ಜಾನರ್​ ಸಿನಿಮಾ ನಿಮ್ಮನ್ನು ರಂಜಿಸಲು ಈ ವಾರ ಒಟಿಟಿಯಲ್ಲಿ ಬರಲಿದೆ. ಕಾರಣಾಂತರಗಳಿಂದ ಥಿಯೇಟರ್​​ನಲ್ಲಿ ಸಿನಿಮಾ ನೋಡಲು ಸಾಧ್ಯವಾಗದೇ ಇದ್ದರೆ ಮನೆಯಲ್ಲೇ ಕುಳಿತು ಎಂಜಾಯ್ ಮಾಡಬಹುದು.
ನೀವು ಕೊರಿಯನ್ ಸರಣಿಗಳನ್ನು ನೋಡಿ ಅಭಿಮಾನಿಯಾಗಿದ್ದರೆ, ಬೇ ಹ್ಯುನ್ ಜಿನ್ ನಿರ್ದೇಶನದ ದಕ್ಷಿಣ ಕೊರಿಯಾದ ಸರಣಿಯ “ಹೈರಾರ್ಕಿ” ನಿಮ್ಮ ಮುಂದೆ ಬರಲಿದೆ. ಜುಶಿನ್ ಹೈಸ್ಕೂಲ್ ವಿದ್ಯಾರ್ಥಿಗಳ ಸುತ್ತ ಸುತ್ತುವ ಈ ಕಥೆಯು ಈ ವಾರ ಬಿಡುಗಡೆಯಾಗಲಿದೆ. ಸಾಕ್ಷ್ಯಚಿತ್ರಗಳಲ್ಲಿ ಆಸಕ್ತಿ ಹೊಂದಿದ್ದರೆ ಅದನ್ನು ಹೆಚ್ಚಿಸಲು ಈ ವಾರ ಒಟಿಟಿಯಲ್ಲಿ ಬಿಡುಗಡೆಗೊಳ್ಳಲು ಸಜ್ಜಾಗಿರುವ ಹಿಟ್ಲರ್ ಮತ್ತು ನಾಜಿ ಕಥೆಯು ಇನ್ನಷ್ಟು ಆಸಕ್ತಿ ಹೆಚ್ಚಿಸುತ್ತವೆ. ಕಥೆಯು ಅಡಾಲ್ಫ್ ಹಿಟ್ಲರ್ ಮತ್ತು ನಾಜಿಗಳ ಉದಯ, ಆಳ್ವಿಕೆ ಮತ್ತು ಎರಡನೆಯ ಮಹಾಯುದ್ಧದ ಪೂರ್ವದಿಂದ ಹತ್ಯಾಕಾಂಡದಿಂದ ನ್ಯೂರೆಂಬರ್ಗ್ ಪ್ರಯೋಗಗಳವರೆಗಿನ ಘಟನೆಯನ್ನು ಒಳಗೊಂಡಿದೆ.
ಇನ್ನು ಅಜಯ್ ದೇವಗನ್ ಅವರ ಚಿತ್ರ ಮೈದಾನ್​​ ಏಪ್ರಿಲ್ 10 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಈ ಚಿತ್ರವು ಭಾರತೀಯ ಫುಟ್ಬಾಲ್ ಕೋಚ್ ಸೈಯದ್ ಅಬ್ದುಲ್ ರಹೀಮ್ ಅವರ ಜೀವನವನ್ನು ಆಧರಿಸಿದೆ. ಚಿತ್ರದಲ್ಲಿ ಪ್ರಿಯಾಮಣಿ ಕೂಡ ಅಜಯ್ ಪತ್ನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದಲ್ಲದೆ, ಇದರಲ್ಲಿ ಗಜರಾಜ್ ರಾವ್ ಮತ್ತು ರುದ್ರನೀಲ್ ಘೋಷ್ ಕೂಡ ನಟಿಸಿದ್ದಾರೆ. ಮೈದಾನ್​​ ಸಿನಿಮಾ ಬುಧವಾರದಂದು(ಜೂನ್​​ 5) ಹಾಗೂ ಅಕ್ಷಯ್ ಕುಮಾರ್ ಮತ್ತು ಟೈಗರ್ ಶ್ರಾಫ್ ಅವರ “ಬಡೆ ಮಿಯಾನ್ ಛೋಟೆ ಮಿಯಾನ್” ಸಿನಿಮಾ ಗುರುವಾರ (ಜೂನ್​​ 6) ಒಟಿಟಿಯಲ್ಲಿ ಬಿಡುಗಡೆಯಾಗಿವೆ.(ಏಜೆನ್ಸೀಸ್​​)
ಬಿಗ್​ ಬಾಸ್​ ಒಟಿಟಿ ಪ್ರಸಾರಕ್ಕೆ ಮುಹೂರ್ತ ಫಿಕ್ಸ್​: ಇಲ್ಲಿದೆ ಕಂಪ್ಲೀಟ್​ ಮಾಹಿತಿ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:14 + fourteen =
Remember me
