ನವದೆಹಲಿ: ಆದಾಯ ತೆರಿಗೆ ಮತ್ತು ಅಕ್ರಮ ಹಣಕಾಸು ತಡೆ ಕಾನೂನಿನ (ಪಿಎಂಎಲ್​ಎ) ವ್ಯಾಪ್ತಿಯಲ್ಲಿ ಬರುವ ಅಪರಾಧಗಳನ್ನು ಕ್ರಿಮಿನಲ್ ಸ್ವರೂಪದಿಂದ ಹೊರಗಿಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ. ಫೆಬ್ರವರಿ 1ರಂದು ಮಂಡಿಸುವ ಆಯವ್ಯಯ ಪತ್ರದಲ್ಲೇ ಹಣಕಾಸು ಸಚಿವೆ ಈ ಕುರಿತು ಕ್ರಮಗಳನ್ನು ಪ್ರಕಟಿಸುವ ನಿರೀಕ್ಷೆ ಇದೆ. ಉದ್ಯಮ ವಲಯದಲ್ಲಿ ವಿಶ್ವಾಸ ವೃದ್ಧಿಸಲು ಈ ಸುಧಾರಣೆ ತರಲಾಗುತ್ತಿದೆ ಎಂದು ವಿಶ್ಲೇಷಿಸಲಾಗಿದೆ.
ಆರ್ಥಿಕ ಅಪರಾಧ ಎಸಗುವವರಿಗೆ ಕ್ರಿಮಿನಲ್ ಪ್ರಕರಣಗಳಂತೆ ಶಿಕ್ಷೆ ನೀಡದೆ ಕೇವಲ ದಂಡ ವಿಧಿಸಲು ಐಟಿ ಹಾಗೂ ಪಿಎಂಎಲ್​ಎ ಕಾನೂನಿಗೆ ತಿದ್ದುಪಡಿ ತರುವ ಉದ್ದೇಶವಾಗಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ದೇಶವನ್ನು ಐದು ಟ್ರಿಲಿಯನ್ ಡಾಲರ್ ಆರ್ಥಿಕತೆಯ ಗುರಿಯತ್ತ ಕೊಂಡೊಯ್ಯಲು ಇದೊಂದು ಮಹತ್ವದ ಹೆಜ್ಜೆ ಎಂದವರು ಅಭಿಪ್ರಾಯಪಟ್ಟಿದ್ದಾರೆ.
ಕಾರ್ಪೆರೇಟ್ ಕಾನೂನುಗಳನ್ನು ಕ್ರಿಮಿನಲ್ ಸ್ವರೂಪದಿಂದ ಹೊರಗಿಡುವುದು, ತೆರಿಗೆ ವಿವಾದಗಳನ್ನು ಬಗೆಹರಿಸುವುದು ಮತ್ತು ಸರ್ಕಾರಿ ಉದ್ದಿಮೆಗಳನ್ನು ಅತಿ ವೇಗದಲ್ಲಿ ಖಾಸಗೀಕರಣಗೊಳಿಸುವುದು ಗುರಿ ಸಾಧನೆಗೆ ತೆಗೆದುಕೊಳ್ಳುವ ಕ್ರಮಗಳಲ್ಲಿ ಸೇರಿವೆ ಎಂದು ವಿಚಾರ ಸಂಕಿರಣವೊಂದರಲ್ಲಿ ನಿರ್ಮಲಾ ವಿವರಿಸಿದ್ದಾರೆ.
ಕಂಪನಿಗಳ ಕಾನೂನಿನ ಕೆಲವು ನಿಯಮಗಳಲ್ಲಿನ ಕ್ರಿಮಿನಲ್ ಸ್ವರೂಪ ತೆಗೆದುಹಾಕಲಾಗುತ್ತದೆ. ನಂತರ ಅದನ್ನು ಆದಾಯ ತೆರಿಗೆ ಮತ್ತು ಪಿಎಂಎಲ್​ಎ ಕಾನೂನಿಗೂ ವಿಸ್ತರಿಸಲಾಗುವುದು ಎಂದು ಹೇಳಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 4 =
Remember me
