ಹರಿಯಾಣ: ದೀಪಾವಳಿ ಹಬ್ಬದಂದು ಪ್ರತಿಯೊಂದು ಕಂಪನಿಯು ತಮ್ಮ ಉದ್ಯೋಗಿಗಳಿಗೆ ಸಿಹಿ ತಿಂಡಿ ಹಾಗೂ ಕೆಲವು ಗಿಫ್ಟ್​​ಗಳನ್ನು ಉಡುಗೊರೆಗಳನ್ನು ನೀಡುತ್ತದೆ. ಆದರೆ ಫಾರ್ಮಾ ಕಂಪನಿಯೊಂದು ಬೆಳಕಿನ ಹಬ್ಬ ದೀಪಾವಳಿಗೆ ಉದ್ಯೋಗಿಗಳಿಗೆ ಈ ಬಾರಿ ಹೆಚ್ಚು ವಿಶೇಷವಾದ ಉಡುಗೊರೆ ನೀಡುವ ಮೂಲಕ ಸುದ್ದಿಯಾಗಿದೆ.
ಹರಿಯಾಣ ಪಂಚಕುಲದಲ್ಲಿರುವ (Pharma company) ಫಾರ್ಮಾ ಕಂಪನಿಯೊಂದು ನೌಕರರ ಕಠಿಣ ಪರಿಶ್ರಮ, ಪ್ರಾಮಾಣಿಕತೆ ಮತ್ತು ಬದ್ಧತೆಯಿಂದ ಇರುವ ಉದ್ಯೋಗಿಗಳಿಗೆ ದೀಪಾವಳಿ ಉಡುಗೊರೆಯಾಗಿ 12 ವಾಹನಗಳನ್ನು ಉಡುಗೊರೆಯಾಗಿ ನೀಡಿದರು. ಫಾರ್ಮಾ ಕಂಪನಿ ಮಾಲೀಕರು ಕಂಪನಿಯು ತನ್ನ 12 ಅತ್ಯುತ್ತಮ ಉದ್ಯೋಗಿಗಳ ಕಾರ್ಯಕ್ಷಮತೆಗಾಗಿ 7 ಲಕ್ಷ ರೂಪಾಯಿ ಮೌಲ್ಯದ ಟಾಟಾ ಪಂಚ್ ಕಾರನ್ನು ದೀಪಾವಳಿ ಉಡುಗೊರೆಯಾಗಿ ನೀಡಿದೆ.
#WATCH| Panchkula, Haryana: A pharma company owner, M. K. Bhatia, gifts cars to his employees ahead of Diwali.pic.twitter.com/SVrDbAWlc1
— ANI (@ANI)November 4, 2023

ಕಂಪನಿಯ ಮಾಲೀಕರಾದ ಎಂ.ಕೆ.ಭಾಟಿಯಾ ಮಾತನಾಡಿ, ‘ಹಲವು ವರ್ಷಗಳಿಂದ ನೌಕರರ ಶ್ರಮದಿಂದ ನಾನು ಇಂದು ಉನ್ನತ ಸ್ಥಾನಕ್ಕೆ ತಲುಪಿದ್ದೇನೆ. ಕೆಲ ಸಮಯದ ಹಿಂದೆ ನಾನು ನನ್ನ ಉದ್ಯೋಗಿಗಳಿಗೆ ಕಾರನ್ನು ಉಡುಗೊರೆಯಾಗಿ ನೀಡುವುದಾಗಿ ಹೇಳಿದ್ದೆ. ನನ್ನ ಭರವಸೆಯನ್ನು ಈಡೇರಿಸಿದ್ದೇನೆ. ಈ ಮೈಲುಗಲ್ಲು ತಲುಪಲು ಸಂಸ್ಥೆ ಆರಂಭವಾದಾಗಿನಿಂದ ಹಗಲಿರುಳು ದುಡಿದ ನೌಕರರನ್ನು ಶ್ಲಾಘಿಸಿದರು.
#WATCH| Shilpa, an employee, says, "I have completed eight years here… I am very happy… When I joined eight years ago, he used to say that he wanted to gift cars to his team…That dream was fulfilled today…."pic.twitter.com/UEXPnQmKIe
— ANI (@ANI)November 4, 2023

ತಮ್ಮ ಯಜಮಾನನ ಮಹಾನ್ ಔದಾರ್ಯದಿಂದ ಅವರೆಲ್ಲರೂ ಕಣ್ಣೀರು ಹಾಕಿದರು. ಇಲ್ಲಿಯವರೆಗೆ ಕಾರು ಓಡಿಸಲು ಗೊತ್ತಿರಲಿಲ್ಲ, ಈಗ ಕಾರು ಓಡಿಸಲು ಕಲಿಯುತ್ತೇವೆ ಎನ್ನುತ್ತಾರೆ ಮಹಿಳಾ ಉದ್ಯೋಗಿಗಳು.
#WATCH| M. K. Bhatia, owner of Pharma Company, says, "Some time ago when our team was growing, I said you are our star… Then we made growth… We wanted to make them feel like celebrities. Everyone is a celebrity…I have not always grown… I faced failures but jumped back……pic.twitter.com/X7w8poLklQ
— ANI (@ANI)November 4, 2023

ತಮ್ಮ ಕಂಪನಿಯ ಆಡಳಿತ ಮಂಡಳಿ ಉದ್ಯೋಗಿಗಳೊಂದಿಗೆ ಸಂತಸ ಹಂಚಿಕೊಂಡಿದ್ದು, ಅವರ ಕುಟುಂಬ ಸದಸ್ಯರೂ ಸಂತಸ ವ್ಯಕ್ತಪಡಿಸಿದ್ದಾರೆ. ಕಾರು ಬಂದ ಖುಷಿ ಹೇಳತೀರದು ಎಂದರು. ಇದೆಲ್ಲಾ ನಿಜಕ್ಕೂ ಸಂತಸ ತಂದಿದೆ ಎಂದು ಉದ್ಯೋಗಿಗಳಿಗೂ ಹೇಳಿದ್ದಾರೆ. ನೌಕರರು ಕಾರುಗಳನ್ನು ಉಡುಗೊರೆಯಾಗಿ ಸ್ವೀಕರಿಸುತ್ತಿರುವ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಹಳ್ಳಕ್ಕೆ ಉರುಳಿ ಬಿದ್ದ ಬಸ್​; ಮಹಿಳೆ ಸಾವು…5 ಮಂದಿ ಸ್ಥಿತಿ ಗಂಭೀರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + three =
Remember me
