ಭೋಪಾಲ್​:ವರ್ಷಾಂತ್ಯದಲ್ಲಿ ಚುನಾವಣೆ ನಡೆಯಲಿರುವ ಮಧ್ಯಪ್ರದೇಶದಲ್ಲಿ ರಾಜಕೀಯ ಚಟುವಟಿಕೆ ರಂಗೇರಿದ್ದು, ಆಡಳಿತರೂಢ ಬಿಜೆಪಿ ಹಾಗೂ ವಿಪಕ್ಷ ಕಾಂಗ್ರೆಸ್​ ನಡುವೆ ಆರೋಪ-ಪ್ರತ್ಯಾರೋಪಗಳು ಜೋರಾಗಿ ನಡೆಯುತ್ತಿವೆ.
ಆಡಳಿತರೂಢ ಬಿಜೆಪಿಯನ್ನು ಟೀಕಿಸುವ ಭರದಲ್ಲಿ ಕಾಂಗ್ರೆಸ್​ ಪಕ್ಷ ಪೇಚಿಗೆ ಸಿಲುಕಿದ್ದು, ಕಾನೂನು ಕ್ರಮವನ್ನು ಎದುರಿಸುವ ಭೀತಿಯಲ್ಲಿದೆ. ಕರ್ನಾಟಕದಲ್ಲಿ ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್​ ಪೇಸಿಎಂ ಅಭಿಯಾನ ಮಾಡಿದಂತೆ ಮಧ್ಯಪ್ರದೇಶದಲ್ಲಿ ಪೋನ್ ಪೇನಲ್ಲಿ ಹೆಸರಿನಲ್ಲಿ ಬಿಜೆಪಿ ವಿರುದ್ಧ ಸಮರ ಸಾರಿದೆ.
कटनी रेलवे स्टेशन पर शिवराज का भ्रष्टाचार50% लाओ, फ़ोन पे काम कराओमध्यप्रदेश की जनता जानती है,50% कमीशनखोरों को पहचानती है।pic.twitter.com/N3vXwqtY4A
ರಾಜ್ಯ ವಿಧಾನಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್​ ಹಾಗೂ ಬಿಜೆಪಿ ನಡುವೆ ಪೋಸ್ಟರ್​ ಸಮರ ಜೋರಾಗಿ ನಡೆಯುತ್ತಿದ್ದು, ಮುಖ್ಯಮಂತ್ರಿ ಶಿವರಾಜ್​ ಸಿಂಗ್​ ಚೌಹಾಣ್​ರನ್ನು ಗುರಿಯಾಗಿಸಿ ಪೋನ್​ಪೇ ಲೋಗೋ(ಚಿಹ್ನೆ) ಇರುವ ಭಿತ್ತಿಪತ್ರಗಳನ್ನು ರಾಜ್ಯದಾದ್ಯಂತ ಅಂಟಿಸಿದೆ. ಇದರ ಬೆನ್ನಲ್ಲೇ ಕಾಂಗ್ರೆಸ್​ ಪಕ್ಷಕ್ಕೆ ಕಾನೂನು ಕ್ರಮದ ಎಚಚ್ರಿಕೆಯನ್ನು ನೀಡಲಾಗಿದೆ.
ಪೋಸ್ಟರ್​ನಲ್ಲಿ ಪೋನ್​ಪೇ ಲೋಗೋ ಬಳಸಿರುವುದನ್ನು ಖಂಡಿಸಿರುವ ಕಂಪನಿಯೂ ರಾಜಕೀಯ ಅಥವಾ ರಜಕೀಯೇತರಕ್ಕೆ ಸಂಬಂಧಿಸಿದ ಮೂರನೇ ವ್ಯಕ್ತಿಯಿಂದ ಬ್ರ್ಯಾಂಟ್​ನ ಚಿಹ್ನೆಯನ್ನು ಬಳುಸುವುದನ್ನು ಆಕ್ಷೇಪಿಸಲಾಗಿದೆ. ನಿಗದಿತ ಅವಧಿಯೊಳಗೆ ಪೋಸ್ಟರ್​ಗಳನ್ನು ತೆರವುಗೊಳಿಸದಿದ್ದರೆ ಕಾನೂನು ಕ್ರಮವನ್ನು ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.
ಪೋನಗ್​ಪೇ ಚಿಹ್ನೆಯೂ ಕಂಪನಿಯ ನೋಂದಾಯಿತ ಟ್ರೇಡ್​ ಮಾರ್ಕ್​ ಆಗಿದ್ದು, ಅನಧಿಕೃತವಾಗಿ ಬಳಸಿದ್ದಲ್ಲಿ ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ. ನಾವು ಮಧ್ಯಪ್ರದೇಶ ಕಾಂಗ್ರೆಸ್​ಅನ್ನು ಈ ಮೂಲಕ ಕೇಳುವುದೇನೆಂದರೆ ನಿಗದಿತ ಅವಧಿಯೊಳಗೆ ಪೋಸ್ಟರ್​ಗಳನ್ನು ತೆಗೆದು ಹಾಕಿ ಎಂದು ಟ್ವೀಟ್​ ಮಾಡಿ ಪ್ರತಿಕ್ರಿಯಿಸಿದೆ.
PhonePe objects to the unauthorized usage of its brand logo, by any third party, be it political or non-political. We are not associated with any political campaign or party.
ಇದನ್ನೂ ಓದಿ:ಇಂದಿರಾ ಕ್ಯಾಂಟೀನ್​ ಟೆಂಡರ್​ನಲ್ಲಿ ಆಗಲಿದೆ ಬದಲಾವಣೆ?
ಪೋನ್​ಪೇ ಅಭಿಯಾನದ ಕುರಿತು ಪ್ರತಿಕ್ರಿಯಿಸಿರುವ ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್​ ಮಿಶ್ರಾ ಕಾಂಗ್ರೆಸ್​ ಈ ರೀತಿಯ ಹೊಲಸು ರಾಜಕೀಯ ಮಾಡುತ್ತದೆ ಎಂದುಕೊಂಡಿರಲಿಲ್ಲ. ಜನತೆಗೆ ಗೊತ್ತಿದೆ ಅವರ ಭ್ರಷ್ಟಾಚಾರವನ್ನು ಮುಚ್ಚಿಕೊಳ್ಳಲು ಕಾಂಗ್ರೆಸ್​ನವರು ಬಿಜೆಪಿ ಮೇಲೆ ಗೂಬೆ ಕೂರಿಸುತ್ತಿದ್ದಾರೆಂದು.
ಈ ಸಂಬಂಧ FIR ದಾಖಲಾಗಿದ್ದು, ಕಾಂಗ್ರೆಸ್​ ನಾಯಕರ ವಿರುದ್ಧ ಕಠಿಣ ಕ್ರಮವನ್ನು ಜರುಗಿಸಲಾಗುವುದು ಎಂದು ಗೃಹ ಸಚಿವ ನರೋತ್ತಮ್​ ಮಿಶ್ರಾ ತಿಳಿಸಿದ್ಧಾರೆ.
#WATCH| The dirty politics of Congress has come to the fore. Nothing to say after the 'Phonepe' tweet. The public knows that you are blaming others to hide your corruption. FIR has been registered in Burhanpur, Chhindwara and will take action against it: Madhya Pradesh Home…https://t.co/ILXUFhjpELpic.twitter.com/Eo6blo7C1G
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + 7 =
Remember me
