ಜೈಪುರ: ರಾಜಸ್ಥಾನದಲ್ಲಿ ರಾಜಕೀಯ ಬಿಕ್ಕಟ್ಟು ತಾರಕಕ್ಕೇರಿದ್ದು, ಬಣಗಳ ಬಲ ಪ್ರದರ್ಶನಕ್ಕೆ ಪೈಪೋಟಿ ಶುರುವಾಗಿದೆ. ಈ ನಡುವೆ, ಗೆಹ್ಲೋಟ್​ ಸರ್ಕಾರ ವಿಶ್ವಾಸ ಮತ ಯಾಚಿಸಬೇಕು ಎಂದು ಸಚಿನ್ ಪೈಲಟ್​ ಬೆಂಬಲಿಗರು ಆಗ್ರಹಿಸಿದ್ದಾರೆ. ಇದರೊಂದಿಗೆ ಆಡಳಿತಾರೂಢ ಪಕ್ಷದೊಳಗಿನ ಭಿನ್ನಮತದ ಬಿಕ್ಕಟ್ಟು ಇನ್ನಷ್ಟು ಬಲವಾಗಿದೆ.
ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ರಮೇಶ್​ ಮೀನಾ ವಿಶ್ವಾಸ ಮತ ಯಾಚನೆಯ ಆಗ್ರಹ ಮಾಡಿದ್ದು, ಗೆಹ್ಲೋಟ್ ಸರ್ಕಾರದ ಬೆಂಬಲಕ್ಕೆ ಎಷ್ಟು ಶಾಸಕರಿದ್ದಾರೆ ಎಂಬುದು ಸಾಬೀತಾಗಿ ಬಿಡಲಿ. ಗೆಹ್ಲೋಟ್ ಅವರು ಹೇಳುವಂತೆ 109 ಶಾಸಕರು ಅವರ ಬೆಂಬಲಕ್ಕೆ ಇದ್ದಾರೆ ಎಂದಾದರೆ ಅದೂ ಬಹಿರಂಗವಾಗಿಬಿಡಲಿ ಎಂದು ಹೇಳಿದ್ದಾರೆ. ಪೈಲಟ್​ ಬೆಂಬಲಿಗರ ಶಾಸಕರು ಸೋಮವಾರ ಮತ್ತು ಮಂಗಳವಾರ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಗೈರಾಗಿದ್ದಾರೆ.
ಇದನ್ನೂ ಓದಿ:ರಾಜಸ್ಥಾನ ರಾಜಕೀಯ ನಾಟಕದಲ್ಲಿ ಕ್ಷಣಕ್ಕೊಂದು ತಿರುವು; ಪತನದ ಅಂಚಿನಲ್ಲಿ ಗೆಹ್ಲೋಟ್​ ಸರ್ಕಾರ
ಈ ನಡುವೆ, ಸೋಮವಾರವೇ ಕಾಂಗ್ರೆಸ್ ಶಾಸಕ ದೀಪೇಂದ್ರ ಸಿಂಗ್ ಶೇಖಾವತ್​ ಕೂಡ ವಿಶ್ವಾಸ ಮತ ಯಾಚಿಸುವಂತೆ ಗೆಹ್ಲೋಟ್ ಅವರನ್ನು ಆಗ್ರಹಿಸಿದ್ದರು. ಇದರೊಂದಿಗೆ ಗೆಹ್ಲೋಟ್​ ಸರ್ಕಾರ ವಿಶ್ವಾಸ ಮತಯಾಚಿಸಬೇಕೆಂಬ ಕೂಗಿಗೆ ಕೋರಸ್​ ಸೇರತೊಡಗಿದೆ. (ಏಜೆನ್ಸೀಸ್)
ರಾಜಸ್ಥಾನ ರಾಜಕೀಯ: ಬಲ ಪ್ರದರ್ಶನಕ್ಕೆ ಸಜ್ಜಾಯಿತು ಸಚಿನ್ ಪೈಲಟ್​ ಬಣ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − 6 =
Remember me
