ನವದೆಹಲಿ:ವೋಕಲ್​ ಫಾರ್​ ಲೋಕಲ್​ ಅಭಿಯಾನದಡಿ ದೇಶದ ಜನತೆ ಸ್ವದೇಶಿ ಉತ್ಪನ್ನಗಳನ್ನೂ ಪೂರ್ಣ ಹೃದಯದಿಂದ ಖರೀದಿಸುತ್ತಿದ್ದಾರೆ. ಆತ್ಮನಿರ್ಭರ ಭಾರತದ ಕನಸುಗಳನ್ನೂ ಹೆಣೆಯುವವರು ಮತ್ತು ಮೇಕ್​ ಇನ್​ ಇಂಡಿಯಾಗೆ ಶಕ್ತಿಯನ್ನೂ ನೀಡುವವರು ಖಾದಿಯನ್ನೂ ಬಟ್ಟೆಯಾಗಿ ಅಲ್ಲ ಆಯುಧವನ್ನಾಗಿ ನೋಡುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದ್ಧಾರೆ.
ದೆಹಲಿಯ ಭಾರತ್​ ಮಂಟಪ​(ಪ್ರಗತಿ ಮೈದಾನ)ದಲ್ಲಿ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯ ಅಂಗವಾಗಿ ಭಾರತೀಯ ವಸ್ತ್ರ ಏವಂ ಶಿಲ್ಪಾ ಕೋಶ್​ ಜವಳಿ ಮತ್ತು ಕರಕುಶಲಗಳ ಭಂಡಾರ ಇ ಪೋರರ್ಟಲ್​ ಉದ್ಘಾಟಿಸಿದ ಪ್ರಧಾನಿ ಮೋದಿ ನೇಕಾರರೊಂದಿಗೆ ಸಂವಾದ ನಡೆಸಿದ್ದಾರೆ.
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ದೇಶದ ಬೆಳವಣಿಗೆಯಲ್ಲಿ ಕೈಮಗ್ಗ ಉದ್ಯಮದ ಕೊಡುಗೆ, ಹಳೆಯ ಹಾಗೂ ಹೊಸದರ ಸಂಗಮವೇ ಇಂದಿನ ಭಾರತವನ್ನೂ ವ್ಯಾಖ್ಯಾನಿಸುತ್ತದೆ. ಆಧುನಿಕ ಭಾರತದಲ್ಲಿ ವೋಕಲ್​ ಫಾರ್​ ಲೋಕಲ್​ ಅಭಿಯಾನವನ್ನೂ ಜಾಗತಿಕ ಮಟ್ಟದಲ್ಲಿ ಖ್ಯಾತಿಗೊಳಿಸಲಾಗುತ್ತಿದೆ.
ಆಗಸ್ಟ್​ ತಿಂಗಳನ್ನೂ ನಾನು ಕ್ರಾಂತಿಕಾರಿ ಎಂದು ಬಣ್ಣಿಸಲು ಇಷ್ಟಪಡುತ್ತೇನೆ. ಏಕೆಂದರೆ ಸ್ವದೇಶಿ ಅಂದೋಲನ ಹಾಗೂ ಸ್ವಾತಂತ್ರ್ಯಕ್ಕಾಗಿ ಮಾಡಿದ ಪ್ರತಿ ಒಂದು ತ್ಯಾಗವನ್ನೂ ನಾವು ನೆನಪಿಸಿಕೊಳ್ಳಬೇಕಾಗಿದೆ. ಸ್ವದೇಶಿ ಅಂದೋಲನವು ಕೇವಲ ವಿದೇಶಿ ಬಟ್ಟೆಗಳನ್ನೂ ಬಹಿಷ್ಕರಿಸಲು ಸೀಮಿತವಾಗಿರಲಿಲ್ಲ. ಭಾರತದ ಸ್ವತಂತ್ರ ಆರ್ಥಿಕತೆಗೆ ಸ್ಫೂರ್ತಿದಾಯಕವಾಗಿತ್ತು ಎಂದು ಬಣ್ಣಿಸಿದ್ದಾರೆ.
ಸ್ವದೇಶಿ ಅಂದೋಲನವು ಭಾರತದ ನೇಕಾರರನ್ನೂ ದೇಶದ ಜನತೆಯೊಂದಿಗೆ ಬೆಸೆಯುವ ದೊಡ್ಡ ಕಾರ್ಯಕ್ರಮವಾಗಿತ್ತು. ಆಗಸ್ಟ್​ 7ರಂದು ಸರ್ಕಾರ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯನ್ನಾಗಿ ಆಯ್ಕೆ ಮಾಡಲು ಸ್ವದೇಶಿ ಅಂದೋಲನ ದೊಡ್ಡ ಸ್ಪೂರ್ತಿ ನೀಡಿದೆ. ಸ್ವದೇಶಿ ಉಡುಪುಗಳ ಬಗ್ಗೆ ದೇಶದಲ್ಲಿ ಹೊಸ ಕ್ರಾಂತಿಯಾಗಿದ್ದು, ಈ ನಿಟ್ಟಿನಲ್ಲಿ ಸರ್ಕಾರ ನೇಕಾರರ ಹಾಗೂ ಕೈಮಗ್ಗದ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ.
ಇದನ್ನೂ ಓದಿ:ಗಂಡನ ಅನೈತಿಕ ಸಂಬಂಧಕ್ಕೆ ಬೇಸತ್ತು ಪ್ರಾಣಬಿಟ್ಟ ಗೃಹಿಣಿ
ಖಾದಿ ಬಟ್ಟೆಗಳಿಗೆ ದೇಶ ಹಾಗೂ ವಿದೇಶಗಳಲ್ಲಿ ಬೇಡಿಕೆ ಹೆಚ್ಚುತ್ತಿದ್ದು, ಕಳೆದ 9 ವರ್ಷಗಳ ಅವಧಿಯಲ್ಲಿ 30 ಸಾವಿರ ಕೋಟಿ ರೂಪಾಯಿಯಿಂದ 1 ಲಕ್ಷ 30 ಸಾವಿರ ಕೋಟಿ ರೂಪಾಯಿಗೆ ವ್ಯಾಪಾರ ಮಹಿವಾಟು ಹೆಚ್ಚಳವಾಗಿದೆ. ಭಾರತದ ಕೈಮಗ್ಗ ಹಾಗೂ ಜವಳಿ ಉದ್ಯಮವನ್ನೂ ವಿಶ್ವಚಾಂಪಿಯನ್​ಶಿಪ್​ ಆಗಿಸುವ ನಿಟ್ಟಿನಲ್ಲಿ ನಾವೆಲ್ಲರೂ ಕೆಲಸ ಮಾಡಬೇಕಿದೆ.
India's vibrant handlooms exemplify the country's diversity. On National Handloom Day, let us reaffirm our commitment to popularise local products.https://t.co/DOl4mo9Eki
ನಾವು ನಿಯೋ ಮಿಡಲ್​ ಕ್ಲಾಸ್​ ಯುಗವನ್ನು ನೋಡುತ್ತಿದ್ದೇವೆ. ಇದು ಜವಳಿ ಉದ್ಯಮಗಳಿಗೆ ಉತ್ತಮ ಅವಕಾಶವನ್ನೂ ಒದಗಿಸುತ್ತದೆ. ಒಂದು ಜಿಲ್ಲೆ ಒಂದು ಉತ್ಪನ್ನ ಅಭಿಯಾನದಡಿ ವಿವಿಧೆಡೆ ತಯಾರಿಸಿದ ಉತ್ಪನ್ನಗಳನ್ನೂ ಪ್ರಚಾರ ಮಾಡಲಾಗುತ್ತಿದೆ. ಏಕತಾ ಪ್ರತಿಮೆ ನಿರ್ಮಿಸಿದ ಮಾದರಿಯಲ್ಲೇ ದೇಶಾದ್ಯಂತ ಏಕತಾ ಮಾಲ್​ಗಳನ್ನೂ ಸ್ಥಾಪಿಸಲಾಗುವುದು ಎಂದು ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ಘೋಷಿಸಿದ್ದಾರೆ.
ಜವಳಿ ಮತ್ತು ಫ್ಯಾಶನ್​ ಉದ್ಯಮವೂ ತಮ್ಮ ವ್ಯಾಪ್ತಿಯನ್ನೂ ವಿಸ್ತರಿಸಿ ಭಾರತವನ್ನೂ ವಿಶ್ವದ ಮೂರು ಅಗ್ರಮಾನ್ಯ ಆರ್ಥಿಕ ದೇಶಗಳಲ್ಲಿ ಒಂದಾಗಿಸಲು ಕೆಲಸ ಮಾಡಬೇಕಿದೆ ಎಂದು ರಾಷ್ಟ್ರೀಯ ಕೈಮಗ್ಗ ದಿನಾಚರಣೆಯಲ್ಲಿ ಪ್ರಧಾನಿ ಮೋದಿ ಕರೆ ನೀಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − two =
Remember me
