ಸಬರಮತಿ:ಭಾರತದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಅಂಗವಾಗಿ ದೇಶಾದ್ಯಂತ ನಡೆಯುತ್ತಿರುವ ಆಜಾದ್ ಕಾ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಚಾಲನೆ ನೀಡಿದರು.
ಗುಜರಾತ್‍ನ ಸಬರಮತಿ ಆಶ್ರಮದಲ್ಲಿ ವರ್ಚುವಲ್ ವೇದಿಕೆ ಮೂಲಕ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಚಾಲನೆ ನೀಡಿದರು. ಬಳಿಕ ಮಾತನಾಡಿ, ದೇಶದ ಪಾಲಿಗೆ ಈ ವರ್ಷ ಐತಿಹಾಸಿಕವಾದದ್ದು, ಗಾಂಧಿ ಅವರ ದಂಡಯಾತ್ರೆ ಹೊಸ ಚರಿತ್ರೆಯನ್ನೇ ಸೃಷ್ಟಿ ಮಾಡಿತು. ಇಂದಿನಿಂದ ಚರಕ ಅಭಿಯಾನವನ್ನು ಆರಂಭಿಸಲಾಗಿದೆ. ಉಪ್ಪು ನಮ್ಮ ಶ್ರಮದ ಪ್ರತೀಕ ಎಂದು ಹೇಳಿದರು.
ಸ್ವಾತಂತ್ರ್ಯ ಹೋರಾಟ, 75ರ ಐಡಿಯಾಗಳು, 75ರ ಸಾಧನೆಗಳು, 75ರ ಕ್ರಿಯೆ ಮತ್ತು ದೃಢಸಂಕಲ್ಪ ಎಂಬ ಈ ಐದು ಆಧಾರಸ್ತಂಭಗಳು ದೇಶದ ಏಳಿಗೆಗೆ ಸದಾ ಸ್ಪೂರ್ತಿಯಾಗಲಿದೆ ಎಂದು ಹೇಳಿದರು.
ಇಂದು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಮೊದಲ ದಿನ. ಈ ಮಹೋತ್ಸವವನ್ನು 75 ವಾರಗಳ ಮುಂಚಿತವಾಗಿಯೇ ಆರಂಭವಾಗಿದೆ. ಈ ಮಹೋತ್ಸವ 2022ರ ಆಗಸ್ಟ್ 15ಕ್ಕೂ 75 ವಾರಗಳ ಮೊದಲು ಪ್ರಾರಂಭವಾಗಿದೆ ಮತ್ತು 2023ರ ಆಗಸ್ಟ್ 15ರವರೆಗೆ ನಡೆಯಲಿದೆ ಎಂದು ತಿಳಿಸಿದರು.
ಇದೇ ವೇಳೆ ಕ್ವಿಟ್​ ಇಂಡಿಯಾ ಚಳುವಳಿ ಬಗ್ಗೆ ಪ್ರಸ್ತಾಪಿಸಿ, ನಾವು ಮಂಗಲ್ ಪಾಂಡೆ, ತಾತ್ಯಾ ತೋಪೆ, ರಾಣಿ ಲಕ್ಷ್ಮಿ ಬಾಯಿ, ಚಂದ್ರಶೇಖರ್ ಆಜಾದ್, ಭಗತ್ ಸಿಂಗ್, ಪಂ. ನೆಹರು, ಸರ್ದಾರ್ ಪಟೇಲ್ ಹಾಗೂ ಅಂಬೇಡ್ಕರ್ ಅವರಿಂದ ಸ್ಫೂರ್ತಿ ಪಡೆಯುತ್ತೇವೆ ಎಂದರು.(ಏಜೆನ್ಸೀಸ್​)
Today, is the first day of the Amrit Mahotsav of independence. This Mahotsav has started 75 weeks before 15th August 2022 and will run till 15th August 2023: PM Modi in Ahmedabadpic.twitter.com/wdr3VmJ7de— ANI (@ANI)March 12, 2021
Today, is the first day of the Amrit Mahotsav of independence. This Mahotsav has started 75 weeks before 15th August 2022 and will run till 15th August 2023: PM Modi in Ahmedabadpic.twitter.com/wdr3VmJ7de

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + 10 =
Remember me
