ಬೆಂಗಳೂರು:ಜಯನಗರದ ಎನ್​ಎಂಕೆಆರ್​ವಿ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಸಮಾರಂಭದಲ್ಲಿ ಆರ್. ಬಾಲಸುಬ್ರಮಣ್ಯಂ ರಚನೆಯ ‘ಪವರ್ ವಿದಿನ್- ದಿ ಲೀಡರ್​ಶಿಪ್ ಲೆಗಸಿ ಆಫ್ ನರೇಂದ್ರ ಮೋದಿ’ ಕೃತಿಯನ್ನು ಸದ್ಗುರು ಮಧುಸೂದನ್ ಸಾಯಿ ಬಿಡುಗಡೆಗೊಳಿಸಿದರು. ಪತ್ರಕರ್ತ ಅನಂದ್ ನರಸಿಂಹನ್ ಹಾಜರಿದ್ದರು.
ದೇಶವನ್ನು ಜಾಗತಿಕ ವೇದಿಕೆಗೆ ಕೊಂಡೊಯ್ದಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಂತಹ ಕಾಯಕಯೋಗಿ ಮತ್ತೊಬ್ಬರಿಲ್ಲ ಎಂದು ಅಧ್ಯಾತ್ಮ ಚಿಂತಕ ಸದ್ಗುರು ಮಧುಸೂದನ್ ಸಾಯಿ ಹೇಳಿದ್ದಾರೆ. ಜಯನಗರದ ಎನ್​ಎಂಕೆಆರ್​ವಿ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆರ್. ಬಾಲಸುಬ್ರಹ್ಮಮಣ್ಯಂ ರಚನೆಯ ‘ಪವರ್ ವಿದಿನ್- ದಿ ಲೀಡರ್​ಶಿಪ್ ಲೆಗಸಿ ಆಫ್ ನರೇಂದ್ರ ಮೋದಿ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ತ್ಯಾಗ, ಸೇವೆ ಮೂಲಕ ನಾಯಕತ್ವ ಗುಣ ಬೆಳೆಸಿಕೊಂಡಿರುವ ಮೋದಿ, ವಿಶ್ವಮಟ್ಟದ ನಾಯಕ ರಾಗಿ ಬೆಳೆದಿದ್ದಾರೆ. ದೇಶದ ಅಭಿವೃದ್ಧಿಗೆ ತನ್ನದೆ ಕನಸುಗಳನ್ನು ಹೊತ್ತಿದ್ದಾರೆ. 10 ವರ್ಷಗಳಲ್ಲಿ ಹಲವು ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದಾರೆ ಎಂದು ತಿಳಿಸಿದರು.
ನಾಯಕತ್ವವೇ ದೊಡ್ಡ ಗುಣ: ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್.. ಸಬ್ ಕಾ ವಿಶ್ವಾಸ್ ಸಬ್ ಕಾ ಪ್ರಯಾಸ್’ ಪರಿಕಲ್ಪನೆಯಡಿ ದೇಶಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಅಭಿವೃದ್ಧಿ ಪಥದಲ್ಲಿ ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವ ಗುಣ ಅವರಲ್ಲಿದೆ. ಎಲ್ಲರ ಮಾತನ್ನು ಶಾಂತವಾಗಿ ಆಲಿಸಿ ನಂತರ ನಿರ್ಧಾರ ತೆಗೆದುಕೊಳ್ಳುತ್ತಾರೆ. ಮಹಾನ್ ನಾಯಕ ಪರರಿಗಾಗಿ ಬದುಕುತ್ತಾನೆ, ಈ ಗುಣ ಮೋದಿ ಅವರಲ್ಲಿದೆ. ಈ ಪುಸ್ತಕದಲ್ಲಿ ಅವರ ಕುರಿತು ಕುತೂಹಲಕಾರಿ ಅಂಶಗಳಿವೆ. ಅಲ್ಲದೆ, ದೇಶದ ಇತಿಹಾಸ, ಪರಂಪರೆ, ಸಂಸ್ಕೃತಿ ಬಗ್ಗೆ ಅಂಶಗಳಿವೆ ಎಂದು ಮಧುಸೂದನ್ ಸಾಯಿ ತಿಳಿಸಿದರು.
ಮೋದಿಯವರಲ್ಲಿ ಕಲಿಯುವಂತಹ ಗುಣ ಇದೆ. ಲೇಖಕ ಬಾಲಸುಬ್ರಮಣ್ಯಂ ಅವರು ಮೋದಿ ಅವರ 50 ವರ್ಷಗಳ ಸಾರ್ವಜನಿಕ ಜೀವನವನ್ನು ಪುಸ್ತಕ ರೂಪದಲ್ಲಿ ತಂದಿದ್ದಾರೆ. ಪ್ರಧಾನಿ ಅವರ ಪಟ್ಟುಬಿಡದ ಪ್ರಯತ್ನ, ಕಠಿಣ ಪರಿಶ್ರಮ, ಸಂವಹನ ವಿಧಾನದ ಮೂಲಕ ಬೆಳಕು ಚೆಲ್ಲುತ್ತದೆ. ಹೀಗಾಗಿ, ಸಾರ್ವಜನಿಕ ಸೇವೆಯ ಜೀವನವನ್ನು ಬಯಸುವವರಿಗೆ ಪುಸ್ತಕ ಪ್ರೇರಣೆ ನೀಡುತ್ತದೆ ಎಂದು ಅವರು ವಿವರಿಸಿದರು. ಆಧ್ಯಾತ್ಮಿಕ ಟೀಮ್​ಸ್​ ಸರ್ವೀಸ್ ಕಂಪನಿ ಉಪಾಧ್ಯಕ್ಷ ಮನೀಶ್ ಸಬರ್ವಾಲ್, ಹಿರಿಯ ಪತ್ರಕರ್ತ ಅನಂದ್ ನರಸಿಂಹನ್ ಮತ್ತಿತರರಿದ್ದರು.
ಪುಸ್ತಕ ಬರೆಯಲು ಎರಡು ವರ್ಷ ತೆಗೆದುಕೊಂಡೆ. ಆನೇಕ ಸಂಶೋಧನೆ ನಡೆಸಿ ಪುಸ್ತಕವನ್ನು ರಚಿಸಿದ್ದೇನೆ. ಬರೀ ಪ್ರಕಟಣೆಗಾಗಿ ಪುಸ್ತಕ ಬರೆಯಬಾರದು, ಓದುಗರಿಗಾಗಿ ಬರೆಯಬೇಕು. ಪ್ರಧಾನಿ ನರೇಂದ್ರ ಮೋದಿ ತರಹದವರ ನಾಯಕತ್ವ ದೇಶಕ್ಕೆ ಅತ್ಯಗತ್ಯ. ಪುಸ್ತಕ ಕುರಿತು ಬರುವ ಟೀಕೆ, ಟಿಪ್ಪಣೆಯನ್ನು ಮುಕ್ತವಾಗಿ ಸ್ವೀಕರಿಸುವೆ.
| ಡಾ. ಆರ್. ಬಾಲಸುಬ್ರಮಣ್ಯಂ, ಕೃತಿಯ ಲೇಖಕ
ವಿರಾಟ್​ ಕೊಹ್ಲಿ ಫೋನ್​ ವಾಲ್​ಪೇಪರ್​ನಲ್ಲಿರುವ ಈ ವ್ಯಕ್ತಿ ಯಾರು ಗೊತ್ತೇ? ಇವರ ಹಿನ್ನಲೆ ತಿಳಿದ್ರೆ ಅಚ್ಚರಿಪಡ್ತೀರಾ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 14 =
Remember me
