ಕೋಲ್ಕತ್ತಾ: ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಭಾರತದ ಮೊದಲ “ಅಂಡರ್​ವಾಟರ್​ ಮೆಟ್ರೋ” ವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ ನಂತರ ಪ್ರಯಾಣಿಸಿದ್ದಾರೆ. ಈ ವೇಳೆ ಶಾಲಾ ವಿದ್ಯಾರ್ಥಿಗಳೊಂದಿಗೆ ಮೋದಿ ಅವರು ಸಂವಾದ ನಡೆದಿದ್ದಾರೆ.
“ಅಂಡರ್​ವಾಟರ್​ ಮೆಟ್ರೋ”ವನ್ನು ಉದ್ಘಾಟಿಸಿದ ಪ್ರಧಾನಿ ಮೋದಿ ಅವರು ಮೆಟ್ರೋದಲ್ಲಿ ಪ್ರಯಾಣ ಮಾಡುವ ವೇಳೆ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ದಾರೆ. ಮೊದಲು ವಿದ್ಯಾರ್ಥಿಗಳನ್ನು ತಮ್ಮ ಬಳಿಗೆ ಕರೆದು ಜತೆಯಲ್ಲಿ ಕುಳಿತುಕೊಳ್ಳಲು ಹೇಳಿದ್ದಾರೆ. ನಂತರ ಮಕ್ಕಳ ಜತೆ ಕೆಲವು ಸಮಯ ಮಾತನಾಡಿದ್ದಾರೆ. ಯೋಜನೆಯ ನಿರ್ಮಾಣದಲ್ಲಿ ತೊಡಗಿರುವ ಕಾರ್ಮಿಕರನ್ನುದ್ದೇಶಿಸಿ ಮಾತನಾಡಿದರು.
ಪ್ರಧಾನಿಯವರೊಂದಿಗೆ ನೀರೊಳಗಿನ ಮೆಟ್ರೋದಲ್ಲಿ ಪ್ರಯಾಣವನ್ನು ಪ್ರಾರಂಭಿಸುವ ಮೊದಲು ಶಾಲಾ ವಿದ್ಯಾರ್ಥಿನಿ ಪ್ರಜ್ಞಾ ಮಾತನಾಡಿ, “ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಲು ಮತ್ತು ಅವರೊಂದಿಗೆ ನೀರೊಳಗಿನ ಮೆಟ್ರೋದಲ್ಲಿ ಪ್ರಯಾಣಿಸಲು ನಾನು ತುಂಬಾ ಉತ್ಸುಕನಾಗಿದ್ದೇನೆ” ಎಂದು ಹೇಳಿದರು. ಮತ್ತೊಬ್ಬ ಶಾಲಾ ಬಾಲಕಿ ಇಶಿಕಾ ಮಹತೋ ಅವರು ಪ್ರಧಾನಿ ಮೋದಿಯನ್ನು ಭೇಟಿ ಮಾಡುವ ಅವಕಾಶ ಸಿಕ್ಕಿದ್ದಕ್ಕೆ ತುಂಬಾ ಸಂತೋಷವಾಗಿದೆ ಎಂದು ಹೇಳಿದ್ದಾರೆ.
ಹೂಗ್ಲಿ ನದಿಯ ಅಡಿಯಲ್ಲಿ ಸುರಂಗ:ಈ ನೀರಿನ ಸುರಂಗವನ್ನು ಹೂಗ್ಲಿ ನದಿಯ ಅಡಿಯಲ್ಲಿ ನಿರ್ಮಿಸಲಾಗಿದೆ. ಇಲ್ಲಿ, 520 ಮೀಟರ್ ಉದ್ದದ ಸುರಂಗದಲ್ಲಿ ಎರಡು ಟ್ರ್ಯಾಕ್‌ಗಳಲ್ಲಿ ನೆಲದಿಂದ 33 ಮೀಟರ್ ಮತ್ತು ಹೂಗ್ಲಿ ನದಿಯ ಮೇಲ್ಮೈಯಿಂದ 13 ಮೀಟರ್ ಕೆಳಗೆ ಹಾಕಲಾಗಿದೆ. ಈ ಸುರಂಗವು ಕೋಲ್ಕತ್ತಾದ ಜನರಿಗೆ ಸಮಯವನ್ನು ಉಳಿಸುವುದಲ್ಲದೆ, ಅವರಿಗೆ ಆರಾಮದಾಯಕ ಪ್ರಯಾಣವನ್ನು ಒದಗಿಸುತ್ತದೆ. ಕೋಲ್ಕತ್ತಾದ ಈ ಮೆಟ್ರೋ ಲಕ್ಷಾಂತರ ಜನರಿಗೆ ನೇರವಾಗಿ ಪ್ರಯೋಜನವನ್ನು ನೀಡುತ್ತದೆ.
ನೀರೊಳಗಿನ ಮೆಟ್ರೋ ವಿಶೇಷತೆ ಏನು?:ವಿಶೇಷವೆಂದರೆ ಈ ಮೆಟ್ರೋ ಹೂಗ್ಲಿ ನದಿಯೊಳಗಿನ 520 ಮೀಟರ್ ದೂರವನ್ನು ಕೇವಲ ನಲವತ್ತೈದು ಸೆಕೆಂಡುಗಳಲ್ಲಿ ಕ್ರಮಿಸಲಿದೆ. ಈ ಮೆಟ್ರೋದ ಕೆಲಸವು 13 ವರ್ಷಗಳಿಂದ ನಡೆಯುತ್ತಿತ್ತು ಆದರೆ 2015 ರ ನಂತರ ಇದು ವೇಗವನ್ನು ಪಡೆದುಕೊಂಡಿತು.  ಇದು 4 ನಿಲ್ದಾಣಗಳನ್ನು ಹೊಂದಿದೆ.
ನೀರಡಿಯಲ್ಲಿ ಈ ರೀತಿ ಓಡಲಿದೆ ರೈಲು… ಭಾರತದ ಮೊದಲ ಅಂಡರ್ ವಾಟರ್ ಮೆಟ್ರೋ ರೈಲು ವಿಡಿಯೋ ಔಟ್

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:fourteen − ten =
Remember me
