ನವದೆಹಲಿ:ನಾನು ಪಕ್ಷದ ಸಣ್ಣ ಕಾರ್ಯಕರ್ತ. ನಾನು ತಮ್ಮ ಕುಟುಂಬದ ಭಾಗವೆಂದು ಜನರು ಭಾವಿಸುತ್ತಾರೆ. ಜನರು ಮೋದಿ ತಮ್ಮಲ್ಲಿ ಒಬ್ಬರೆಂದು ಭಾವಿಸುವುದರಿಂದ ಶ್ರೀ ಅಥವಾ ಆದರಣೀಯ ರೀತಿಯ ವಿಶೇಷಣಗಳನ್ನು ಸೇರಿಸಿ ನನ್ನನ್ನು ಸಂಬೋಧಿಸಬೇಡಿ…
ಹೀಗೆಂದು ಪಕ್ಷದ ಸಂಸದರು ಹಾಗೂ ನಾಯಕರಿಗೆ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿಕೊಂಡಿದ್ದಾರೆ.ವಿಶೇಷಣಗಳನ್ನು ಸೇರಿಸುವುದು ತಮ್ಮನ್ನು ಜನರಿಂದ ದೂರವಿಡುತ್ತದೆ ಎಂದು ಅವರು ಸಲಹೆ ನೀಡಿದ್ದಾರೆ.
ಗುರುವಾರ ಇಲ್ಲಿ ಜರುಗಿದ ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಅಭಿನಂದಿಸಿದರು.
ನಂತರ ಸಭೆಯಲ್ಲಿ ಭಾಷಣ ಮಾಡಿದ ಮೋದಿ, ಛತ್ತೀಸ್‌ಗಢ ಮತ್ತು ರಾಜಸ್ಥಾನದಲ್ಲಿ ಬಿಜೆಪಿಯ ಅದ್ಭುತ ವಿಜಯವನ್ನು “ಟೀಮ್‌ ವರ್ಕ್” ಫಲಿತಾಂಶ ಎಂದು ಶ್ಲಾಘಿಸಿದ್ದಾರೆ. ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆ ಸೇರಿದಂತೆ ಭವಿಷ್ಯದ ಸವಾಲುಗಳನ್ನು ಎದುರಿಸಲು ಪಕ್ಷದ ಸದಸ್ಯರು ಮುಂದುವರಿಯಬೇಕು ಎಂದು ಅವರು ಕರೆ ನೀಡಿದ್ದಾರೆ.
ಆಡಳಿತದ ದಾಖಲೆಯ ಆಧಾರದ ಮೇಲೆಯೇ ಬಿಜೆಪಿಯು ಅಧಿಕಾರಯುತ ಪಕ್ಷವಾಗಿ ಮರು ಆಯ್ಕೆಯಾಗಿದೆ ಎಂದು ವಿಧಾನಸಭೆ ಚುನಾವಣೆ ಫಲಿತಾಂಶಗಳು ತೋರಿಸಿವೆ ಎಂದು ಮೋದಿ ಹೇಳಿದ್ದಾರೆ.
ನವೆಂಬರ್ 15 ರಂದು ಪ್ರಾರಂಭವಾದ ಸರ್ಕಾರದ ಯೋಜನೆಗಳ ಫಲಾನುಭವಿಗಳನ್ನು ತಲುಪುವ ಕಾರ್ಯಕ್ರಮವಾದ ವಿಕಸಿತ ಭಾರತ ಸಂಕಲ್ಪ ಯಾತ್ರೆಯಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಪ್ರಧಾನಿ ಮೋದಿ ಸಂಸದರನ್ನು ಕೋರಿದರು.
ಕೇಶವಾನಂದ ಭಾರತಿ ಪ್ರಕರಣದ ಐತಿಹಾಸಿಕ ತೀರ್ಪಿಗೆ 50 ವರ್ಷ: ಸುಪ್ರೀಂ ವೆಬ್​ಸೈಟ್​ನಲ್ಲಿ ಕನ್ನಡ ಸೇರಿ 10 ಭಾಷೆಗಳಲ್ಲಿ ತೀರ್ಪು ಲಭ್ಯ

ಮದುವೆಯಲ್ಲಿ ಹಲ್ಲೆ ನಡೆಸಿ ವೇಟರ್​ ಕೊಲೆ: ಹೀಗೂ ಇರಬಹುದೇ ಕಾರಣ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − 6 =
Remember me
