ಗುಜರಾತ್:ಪ್ರಧಾನಿಯಾಗುವ ಮೊದಲು ನರೇಂದ್ರ ಮೋದಿ ಅವರು ಭಾರತದ ಉಕ್ಕಿನ ಮನುಷ್ಯ ಸರ್ದಾರ್ ಪಟೇಲ್‌ ಅವರ ಅತಿದೊಡ್ಡ ಪ್ರತಿಮೆಯನ್ನು ನಿರ್ಮಿಸುವ ಕನನು ಕಂಡಿದ್ದರು. ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ, ನರೇಂದ್ರ ಮೋದಿ ಅವರು 2013 ರಲ್ಲಿ ಇದರ ಅಡಿಗಲ್ಲು ಹಾಕಿದ್ದರು. ಪ್ರಧಾನಿಯಾದ ನಂತರ, 2018 ರಲ್ಲಿ ಅವರು ವಿಶ್ವದ ಅತಿ ಎತ್ತರದ ಪ್ರತಿಮೆ ಎಂದು ದೇಶಕ್ಕೆ ಏಕತಾ ಪ್ರತಿಮೆಯನ್ನು ಅರ್ಪಿಸಿದರು.
ವಿಶ್ವದ ಅತಿ ಎತ್ತರದ ಪ್ರತಿಮೆಯನ್ನು ಸುಮಾರು 2989 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಇದುವರೆಗೆ 1.53 ಕೋಟಿ ಪ್ರವಾಸಿಗರು ಭೇಟಿ ನೀಡಿದ್ದಾರೆ. ಈ ಪ್ರತಿಮೆಯ ಸ್ಥಾಪನೆಯ ನಂತರ, ಸ್ಥಳೀಯ ಜನರಿಗೆ ಉದ್ಯೋಗಾವಕಾಶಗಳು ದೊರೆತಿದ್ದು, ಗುಜರಾತ್ ಮತ್ತು ದೇಶದ ಪ್ರವಾಸಿಗರಿಗೆ ಸಹ ಹೊಸ ಪ್ರವಾಸಿ ತಾಣವೊಂದು ಸಿಕ್ಕಂತಾಗಿದೆ.
ಯಾವಾಗ ಎಷ್ಟು ಪ್ರವಾಸಿಗರು ಬಂದರು?2018-4.53 ಲಕ್ಷ2019-27.45 ಲಕ್ಷ2020-12.81 ಲಕ್ಷ (ಕೋವಿಡ್​​​ ಸಮಯ)2021-34.29 ಲಕ್ಷ2022-41.32 ಲಕ್ಷ
ಗುಜರಾತ್‌ನ ಅಂದಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರು 2010 ರಲ್ಲಿ ನರ್ಮದಾ ಜಿಲ್ಲೆಯ ಕೆವಾಡಿಯಾದಲ್ಲಿ ಏಕತೆಯ ಪ್ರತಿಮೆಯನ್ನು ನಿರ್ಮಿಸುವುದಾಗಿ ಘೋಷಿಸಿದ್ದರು. ನಂತರ ಈ ಪ್ರತಿಮೆಯನ್ನು 2018 ರಲ್ಲಿ ದೇಶಕ್ಕೆ ಸಮರ್ಪಿಸಲಾಯಿತು. ಏಕತಾ ಪ್ರತಿಮೆಯ ನಿರ್ಮಾಣದ ನಂತರ, 26 ಹೊಸ ಯೋಜನೆಗಳನ್ನು ಒಂದರ ನಂತರ ಒಂದರಂತೆ ನಿರ್ಮಿಸಲಾಯಿತು. ಈಗ ಕೆವಾಡಿಯಾ ಏಕತಾ ನಗರವಾಗಿ ಮಾರ್ಪಟ್ಟಿದೆ.
ಪ್ರಾರಂಭವಾಗಿರುವ, ಪ್ರಾರಂಭವಾಗಬೇಕಾದ ಯೋಜನೆಗಳುವಿಶ್ವ ವ್ಯಾನ್, ಏಕ್ತಾ ನರ್ಸರಿ, ಬಟರ್​​​​ಫ್ಲೈ ಗಾರ್ಡನ್, ಏಕ್ತಾ ಆಡಿಟೋರಿಯಂ ರಿವರ್ ರಾಫ್ಟಿಂಗ್ ಸೇರಿಂದತೆ ಇನ್ನು ಅನೇಕ ಯೋಜನೆಗಳು ಈಗಾಗಲೇ ಪ್ರಾರಂಭವಾಗಿದೆ. ಗಾಲ್ಫ್ ಕಾರ್ಟ್ಸ್, ಪ್ರವಾಸಿ ಕೇಂದ್ರ, ಕಮಲಂ ಪಾರ್ಕ್, ವಾಕ್​​​​ ವೇ, ಸಹಕಾರ ಭವನ ಇತ್ಯಾದಿ ಯೋಜನೆಗಳು ಪ್ರಾರಂಭವಾಗುವ ಹಂತದಲ್ಲಿವೆ.
ಗೌರವ ನಮನಪ್ರಧಾನಿ ಮೋದಿಯವರ ಕನಸಿನ ಯೋಜನೆಗಳಲ್ಲಿ ಒಂದಾದ ಏಕತಾ ಪ್ರತಿಮೆಯ 5 ವರ್ಷಗಳನ್ನು ಪೂರ್ಣಗೊಳಿಸಿದ ಸಂದರ್ಭದಲ್ಲಿ, ಪ್ರಧಾನಿ ಮೋದಿ ಅವರೇ ಅಲ್ಲಿ ಹಾಜರಿದ್ದಾರೆ. ಪ್ರತಿ ವರ್ಷದಂತೆ ಅವರು ದೇಶದ ಮೊದಲ ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಗೆ ಗೌರವ ಸಲ್ಲಿಸಲಿದ್ದಾರೆ.
ಸರ್ದಾರ್ ವಲ್ಲಭಭಾಯಿ ಪಟೇಲ್ ಜನ್ಮ ದಿನಾಚರಣೆ: ಏಕತಾ ಪ್ರತಿಮೆಗೆ ಗೌರವ ಸಲ್ಲಿಸಿದ ಪ್ರಧಾನಿ ಮೋದಿ





ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 3 =
Remember me
