ನವದೆಹಲಿ:ಭಾನುವಾರ ಅಹಮದಾಬಾದ್​ನಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಏಕದಿನ ವಿಶ್ವಕಪ್​ 2023ರ ಫೈನಲ್​ ಹಣಾಹಣಿಯಲ್ಲಿ ಟೀಮ್​ ಇಂಡಿಯಾ ಕಾಂಗೂರು ಪಡೆ ವಿರುದ್ಧ ಸೋಳೂ ಅನುಭವಿಸಿತು. ಸ್ಟೇಡಿಯಂನಲ್ಲಿ ಸೇರಿದ್ದ 1.3 ಲಕ್ಷ ಜನವನ್ನು ಮೀರಿ ಅದೆಷ್ಟೋ ಸಂಖ್ಯೆಯ ಕ್ರಿಕೆಟ್​ ಅಭಿಮಾನಿಗಳು ಮತ್ತು ಭಾರತೀಯರು ಇಂಡಿಯಾ ಸೋತ ಕೂಡಲೇ ಕಂಬನಿ ಮಿಡಿದರು.
ಇದನ್ನೂ ಓದಿ:Gold, Silver Price; 22 ಕ್ಯಾರಟ್​ನ 10 ಗ್ರಾಂ ಚಿನ್ನದ ಇಂದಿನ ಬೆಲೆ ಎಷ್ಟು ಗೊತ್ತಾ?
ಕೊನೆಯ ಬಾಲ್​ ಮುಗಿಯುವವರೆಗೂ ದುಃಖವನ್ನು ಹಿಡಿದಿಟ್ಟುಕೊಂಡಿದ್ದ ಟೀಮ್​ ಇಂಡಿಯಾ ಆಟಗಾರರು, ಪಂದ್ಯ ಅಂತ್ಯವಾಗಿದ್ದೇ ತಡ ನೋವಿನಿಂದ ಕಣ್ಣೀರಿಟ್ಟರು. ಟೀಮ್​ ಇಂಡಿಯಾ ಅನುಭವಿಸಿದ ಸೋಲು ಭಾರತೀಯರಲ್ಲಿ ಆಗಾಧ ನೋವನ್ನು ತಂದೊಡ್ಡಿತು.
ಫೈನಲ್​ ಪಂದ್ಯವನ್ನು ವೀಕ್ಷಿಸುವ ಮುಖೇನ ತಂಡಕ್ಕೆ ಶುಭಹಾರೈಸಲು ಕ್ರೀಡಾಂಗಣಕ್ಕೆ ಬಂದಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಸಂಪೂರ್ಣ ಮ್ಯಾಚ್​ ಮುಗಿಯುವವರೆಗೂ ಕುಳಿತ್ತಿದ್ದರು. ಪಂದ್ಯ ಮುಗಿದ ಬಳಿಕ ಟೀಮ್​ ಇಂಡಿಯಾದ ಆಟಗಾರರು ಡ್ರೇಸಿಂಗ್​ ರೂಂಗೆ ತೆರಳಿದ ಬಳಿಕ ವೈಯಕ್ತಿಕವಾಗಿ ಆಟಗಾರರನ್ನು ಮಾತನಾಡಿಸಿದ ಪ್ರಧಾನಿ, ವಿರಾಟ್​ ಕೊಹ್ಲಿ ಹಾಗೂ ರೋಹಿತ್​ ಶರ್ಮಾ ಇಬ್ಬರನ್ನು ಎಡ ಮತ್ತು ಬಲದಲ್ಲಿ ನಿಲ್ಲಿಸಿಕೊಂಡು ಸಮಾಧಾನ ಪಡಿಸಿದರು.
ಇದನ್ನೂ ಓದಿ:ಡ್ರೆಸ್ಸಿಂಗ್‌ ರೂಂಗೆ ತೆರಳಿ ಟೀಮ್ ಇಂಡಿಯಾ ಆಟಗಾರರನ್ನು ಸಂತೈಸಿದ ಮೋದಿ
“ಎಷ್ಟೋ ಪಂದ್ಯಗಳನ್ನು ಗೆದ್ದಿದ್ದೀರಿ ಇದೊಂದು ಮ್ಯಾಚ್​ ಸೋತಿದ್ದೀರಿ, ಅದಕ್ಕೆ ಬೇಸರ ಮಾಡಿಕೊಳ್ಳಬೇಡಿ. ಇವೆಲ್ಲವೂ ಕ್ರೀಡೆಯಲ್ಲಿ ಸರ್ವೆ ಸಾಮಾನ್ಯ” ಎಂಬ ಮಾತುಗಳೊಂದಿಗೆ ಆಟಗಾರರಲ್ಲಿ ಧೈರ್ಯ ತುಂಬಿದರು. ವಿರಾಟ್​ ಮತ್ತು ರೋಹಿತ್​ ಬಳಿಕ ಶುಭಮನ್​ ಗಿಲ್​, ರವೀಂದ್ರ ಜಡೇಜಾ, ರಾಹುಲ್​ ದ್ರಾವಿಡ್​ಗೆ ಕೈ ಕೊಟ್ಟು ಸಮಾಧಾನದ ಮಾತುಗಳನ್ನು ತಿಳಿಸಿದರು. ತದನಂತರ ಮೊಹ್ಮಮದ್​ ಶಮಿ ಅವರನ್ನು ಅಪ್ಪಿಕೊಂಡ ಪ್ರಧಾನಿ, “ಉತ್ತಮ ಪ್ರದರ್ಶನ ನೀಡಿದ್ದೀರಿ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಟೀಮ್​ ಇಂಡಿಯಾ ಆಟಗಾರರೊಂದಿಗೆ ಕೆಲ ಸಮಯ ಮಾತನಾಡಿ, ಹೆಗಲ ತಟ್ಟಿ, ಧೈರ್ಯದ ಮಾತುಗಳನ್ನು ತಿಳಿಸಿದ ಪ್ರಧಾನಿ ಮೋದಿಗೆ ಆಟಗಾರರು ವಿಶೇಷವಾಗಿ ಧನ್ಯವಾದ ತಿಳಿಸಿದರು. ಡ್ರೇಸಿಂಗ್​ ರೂಂನಲ್ಲಿ ನಡೆದ ಈ ಒಂದು ಭಾವನಾತ್ಮಕ ದೃಶ್ಯ ಇದೀಗ ಸೋಷಿಯಲ್​ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ನೆಟ್ಟಿಗರು ಹೆಚ್ಚಿನ ಸಂಖ್ಯೆಯಲ್ಲಿ ಲೈಕ್​ ಮಾಡಿ, ಹಂಚಿಕೊಳ್ಳುತ್ತಿದ್ದಾರೆ.
#WATCH| Prime Minister Narendra Modi met Team India in their dressing room after the ICC World Cup Finals at Narendra Modi Stadium in Ahmedabad, Gujarat on 19th November.
The PM spoke to the players and encouraged them for their performance throughout the tournament.
(Video:…pic.twitter.com/ZqYIakoIIj
— ANI (@ANI)November 21, 2023

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + four =
Remember me
