ಬೆಂಗಳೂರು: ಸದ್ಯ ಯಾರಾದರೂ ಟೆಡ್ಡಿ ಬೇರ್ ಹಿಡಿದುಕೊಂಡು ಹೋಗುತ್ತಿದ್ದರೂ ಅನುಮಾನದಿಂದ ನೋಡುವಂತಹ ಸಾಧ್ಯತೆಗಳೂ ಇವೆ. ಏಕೆಂದರೆ ಟೆಡ್ಡಿ ಬೇರ್​ ಮೂಲಕವೂ ಡ್ರಗ್ಸ್​ ಸಾಗಿಸುತ್ತಿದ್ದ ಪೆಡ್ಲರ್ಸ್​ ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡಿದ್ದಾರೆ.
ಅಂದಹಾಗೆ ಈ ಡ್ರಗ್ಸ್​ ಮಾರಾಟ ಮಾಫಿಯಾದವರು ಬರೀ ಟೆಡ್ಡಿ ಬೇರ್ ಮಾತ್ರವಲ್ಲ, ಚಾಕೊಲೇಟ್, ಮೆಡಿಕಲ್ ಕಿಟ್​ಗಳಲ್ಲೂ ಡ್ರಗ್ಸ್​ ತುಂಬಿ ರಾಜಾರೋಷವಾಗಿ ಸಾಗಿಸಲು ಅನುಕೂಲವಾಗುವಂಥ ಟ್ರಿಕ್ಸ್​ ಕಂಡುಕೊಂಡಿದ್ದರು. ಅದಾಗ್ಯೂ ಈಗ ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಂಡಿದ್ದಾರೆ.
ಈ ರೀತಿ ಟೆಡ್ಡಿ ಬೇರ್​, ಚಾಕೊಲೇಟ್​, ಮೆಡಿಕಲ್ ಕಿಟ್​ ಮೂಲಕ ಡ್ರಗ್ಸ್ ಮಾರಾಟ ದಂಧೆ ನಡೆಸುತ್ತಿದ್ದ ಹೊರರಾಜ್ಯದ ಮೂವರನ್ನು ಬೆಂಗಳೂರಿನ ಮೈಕೋ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ಜಾರ್ಖಂಡ್ ರಾಜ್ಯದ ಆಯುಷ್ ಪಾಂಡೆ ಅಲಿಯಾಸ್​ ಪ್ರದೀಪ್ ಪಾಂಡೆ, ರೋಹಿತ್ ರಾಮ್​ ಅಲಿಯಾಸ್​ ಅರುಣ್​ ರಾಮ್​ ಮತ್ತು ಅಸ್ಸಾಮ್​ನ ನೂರ್ ಅಲಿ ಅಲಿಯಾಸ್​ ಮೊಮಿನ್​ ಅಲಿ ಬಂಧಿತರು. ಬಂಧಿತರಿಂದ 23.80 ಲಕ್ಷ ರೂ. ಮೌಲ್ಯದ 8 ಬೇರೆ ಬೇರೆ ಥರದ ಮಾದಕ ವಸ್ತುಗಳು, 2 ದ್ವಿಚಕ್ರ ವಾಹನ ಮತ್ತು ಮೂರು ಮೊಬೈಲ್​ ಫೋನ್​ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳಲ್ಲಿ ರೋಹಿತ್ ಹಾಗೂ ಆಯುಷ್​ ಕೊರಿಯರ್ ಮೂಲಕ ರಾಜಸ್ಥಾನ, ಪಶ್ಚಿಮ ಬಂಗಾಳ, ರಾಜಸ್ಥಾನ, ಡಾರ್ಜಿಲಿಂಗ್​ ಮತ್ತು ಆಂಧ್ರಪ್ರದೇಶಗಳಿಂದ ಸ್ಪೀಕರ್ ಬಾಕ್ಸ್​, ಟೆಡ್ಡಿ ಬೇರ್​, ಮೆಡಿಕಲ್ ಕಿಟ್​ ಬಾಕ್ಸ್​ಗಳಲ್ಲಿ ಡ್ರಗ್ಸ್ ತುಂಬಿ ಕಳುಹಿಸುತ್ತಿದ್ದರು. ಅದನ್ನು ನೂರ್ ಸ್ವೀಕರಿಸಿ ಗ್ರಾಹಕರ ಲೊಕೇಷನ್ ಪಡೆದು ತಲುಪಿಸುತ್ತಿದ್ದ. ಈ ಬಗ್ಗೆ ಸಿಕ್ಕ ಮಾಹಿತಿ ಮೇರೆಗೆ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಲಾಗಿದೆ ಎಂದು ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಮಹದೇವ ಜೋಶಿ ತಿಳಿಸಿದ್ದಾರೆ.
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:five × four =
Remember me
