ಕೊಯಿಲಾಂಡಿ​: ಕಳೆದು ಒಂದು ವಾರದಿಂದ ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬ ಸುಟ್ಟುಕರಕಲಾಗಿರುವ ಘಟನೆ ಕೇರಳದ ಕೊಯಿಲಾಂಡಿ ಬಳಿ ನಡೆದಿದೆ.ಇದನ್ನೂ ಓದಿ:ಕ್ಷುಲ್ಲಕ ಕಾರಣಕ್ಕೆ ಮಗನ ಎರಡೂ ಕೈಗಳಿಗೆ ಬಿಸಿ ಕಬ್ಬಿಣದಿಂದ ಬರೆ ಹಾಕಿದ ತಂದೆ..!ಅರಿಕ್ಕುಳಂ ಗ್ರಾಮದ ನಿವಾಸಿಯಾಗಿರುವ ರಾಜೀವನ್(60) ಸುಟ್ಟು ಕರಕಲಾಗಿ ಪತ್ತೆಯಾಗಿದ್ದು, ಮೃತದೇಹವನ್ನು ಆತನ ಪತ್ನಿ ಗುರುತಿಸಿದ್ದಾರೆ. ಮೊಬೈಲ್ ಫೋನ್​​ನಲ್ಲಿ ಸಿಗುತ್ತಿಲ್ಲ ಎಂದು ಪತ್ನಿ ದೂರಿ ನೀಡಿದ ಹಿನ್ನೆಲೆಯಲ್ಲಿ ಈತನಿಗಾಗಿ ಪೊಲೀಸರು ತೀವ್ರ ಹುಡುಕಾಟವನ್ನು ನಡೆಸಿದ್ದರು.
ಘಟನೆ ಹಿನ್ನೆಲೆ:ಪೇಂಟರ್ ಆಗಿದ್ದ ಈತ ಕಳೆದ ಒಂದು ವಾರದಿಂದ ನಾಪತ್ತೆಯಾಗಿದ್ದ ರಾಜೀವನ್, ಕೊಯಿಲಾಂಡಿ ಬಳಿಯ ಉರಲ್ಲೂರು-ನಡುವನೂರು ರಸ್ತೆಯ ಜಮೀನೊಂದರ ಬಳಿಯ ನಿರ್ಜನ ಸ್ಥಳದಲ್ಲಿ ಆತನ ಸುಟ್ಟ ಶವ ಪತ್ತೆಯಾಗಿದ್ದ. ಆದರೆ ಮೃತದೇಹಕ್ಕೆ ಮೂರು ದಿನ ಹಳೆಯದಾಗಿದ್ದು, ದೇಹವನ್ನು ಸುಡಲಾಗಿತ್ತು. ಆತನ ಎರಡು ಕೈಕಾಲುಗಳು ಮೊದಲು ಪತ್ತೆಯಾದ ನಂತರ ಪೊಲೀಸರು ಡ್ರೋನ್ ಬಳಸಿ ನಡೆಸಿದ ಹುಡುಕಾಟದಲ್ಲಿ, ಸೊಂಟದ ಮೇಲಿನ ಭಾಗವು ಹತ್ತಿರದಲ್ಲಿಯೇ ಪತ್ತೆಯಾಗಿತ್ತು. ಕೊನೆಗೆ ಕುರಿತು ಹುಡುಕಾಟ ನಡೆಸಿದಾಗ ದೇಹದ ಸಂಪೂರ್ಣ ಭಾಗಗಳು ಪತ್ತೆಯಾಗಿದ್ದವು.ಇದನ್ನೂ ಓದಿ:ರುಂಡವಿಲ್ಲದ ಅಪರಿಚಿತ ಮಹಿಳೆಯ ಮೃತದೇಹ ಪತ್ತೆ..!ಈ ಕುರಿತು ಮಾತನಾಡಿರುವ ಪೊಲೀಸರು, ಮೃತದೇಹವನ್ನು ಸುಟ್ಟಿದ್ದಕ್ಕೆ ಪುರಾವೆಗಳು ಸಿಕ್ಕಿವೆ. ಮರಣೋತ್ತರ ಪರೀಕ್ಷೆಯ ನಂತರವಷ್ಟೇ ಸಾವಿಗೆ ಕಾರಣ ತಿಳಿಯಬಹುದಾಗಿದ್ದು, ಇದು ಕೊಲೆಯೇ ಎಂದು ಈಗಲೇ ಹೇಳಲು ಸಾಧ್ಯವಿಲ್ಲ. ಆತನ ಉಡುಪಿನ ಅವಶೇಷಗಳು ಸಿಕ್ಕಿದ್ದು, ಸುಟ್ಟು ಹೋಗಿರುವ ಫೋನ್ ಕೂಡ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವೈದ್ಯಕೀಯ ಕಾಲೇಜಿಗೆ ರವಾನಿಸಲಾಗಿದ್ದು, ಈ ಬಗ್ಗೆ ತನಿಖೆ ಆರಂಭಿಸಿದ್ದ ಪೊಲೀಸರು ಘಟನೆಗೆ ಸಂಬಂಧಿಸಿದಂತೆ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + six =
Remember me
