ಅಹಮದಾಬಾದ್​:ಗುಜರಾತಿನ ಪೊಲೀಸ್​ ಅಧಿಕಾರಿಯೊಬ್ಬರು ಮಾಡಿದ ಕೆಲಸಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕೊನೇ ಸಮಯದಲ್ಲಿ ಪರೀಕ್ಷೆಯಿಂದ ವಂಚಿತಳಾಗುತ್ತಿದ್ದ ವಿದ್ಯಾರ್ಥಿನಿಗೆ ನೆರವಾಗುವ ಮೂಲಕ ಪೊಲೀಸ್​ ಅಧಿಕಾರಿ ನಿಜವಾದ ಹೀರೋ ಎನಿಸಿಕೊಂಡಿದ್ದಾರೆ.
ವಿವರಣೆಗೆ ಬರುವುದಾದರೆ, ವಿದ್ಯಾರ್ಥಿನಿಯು ಬೋರ್ಡ್​ ಪರೀಕ್ಷೆ ಎದುರಿಸಬೇಕಿತ್ತು. ಆದರೆ, ಪರೀಕ್ಷೆಯ ದಿನ ಆಕೆಯ ತಂದೆ ಆತುರದಲ್ಲಿ ತಪ್ಪಾದ ಪರೀಕ್ಷಾ ಕೇಂದ್ರಕ್ಕೆ ಬಿಟ್ಟು ಹೋಗಿದ್ದರು. ಇದಾದ ಬಳಿಕ ವಿದ್ಯಾರ್ಥಿನಿ ತನ್ನ ರೋಲ್​ ನಂಬರ್​ಗಾಗಿ ಹುಡುಕಾಡಿದ್ದಾಳೆ. ನಾನು ತಪ್ಪಾದ ಪರೀಕ್ಷಾ ಕೇಂದ್ರದಲ್ಲಿದ್ದೇನೆ ಎಂಬುದು ಸಹ ಆ ವಿದ್ಯಾರ್ಥಿನಿಗೆ ಗೊತ್ತಿರಲಿಲ್ಲ. ಎಷ್ಟೇ ಹುಡುಕಾಡಿದರೂ ನಂಬರ್​ ಸಿಗದೇ ಅಸಹಾಯಕಳಾಗಿದ್ದ ಆಕೆಯನ್ನು ಹತ್ತಿರದಲ್ಲೇ ಇದ್ದ ಪೊಲೀಸ್​ ಅಧಿಕಾರಿ ನೋಡುತ್ತಾರೆ. ಸಮೀಪ ಹೋಗಿ ಪರಿಶೀಲಿಸಿದಾಗ ಆಕೆ ತಪ್ಪಾದ ಪರೀಕ್ಷಾ ಕೇಂದ್ರಕ್ಕೆ ಬಂದಿರುವುದು ತಿಳಿಯುತ್ತದೆ ಮತ್ತು ಆಕೆ ಪರೀಕ್ಷೆಯಿಂದ ವಂಚಿತಳಾಗಬಹುದು ಎಂದು ಭಾವಿಸುತ್ತಾರೆ.
ವಿದ್ಯಾರ್ಥಿನಿಯನ್ನು ಹಾಲ್​ ಟಿಕೆಟ್​ ತೋರಿಸುವಂತೆ ಪೊಲೀಸ್​ ಅಧಿಕಾರಿ ಕೇಳುತ್ತಾರೆ. ಹಾಲ್​ ಟಿಕೆಟ್​ ನೋಡಿದಾಗ ಪರೀಕ್ಷಾ ಕೇಂದ್ರ 20 ಕಿ.ಮೀ ದೂರದಲ್ಲಿರುವುದು ಗೊತ್ತಾಗುತ್ತದೆ. ತಕ್ಷಣ ವಿದ್ಯಾರ್ಥಿನಿಯ ನೆರವಿಗೆ ಬಂದ ಪೊಲೀಸ್​ ಅಧಿಕಾರಿ ಆಕೆಯನ್ನು ತನ್ನ ಸರ್ಕಾರಿ ವಾಹನದಲ್ಲಿ ಪರೀಕ್ಷಾ ಕೇಂದ್ರಕ್ಕೆ ಬಿಡುಲು ನಿರ್ಧರಿಸುತ್ತಾರೆ.
ಇದನ್ನೂ ಓದಿ:ಈ ರಾಶಿಯವರಿಗಿಂದು ಕೀರ್ತಿ ಸಂಪಾದನೆ, ಮಾನಸಿಕ ನೆಮ್ಮದಿ, ನಿರೀಕ್ಷಿತ ಧನಾಗಮನ: ನಿತ್ಯಭವಿಷ್ಯ
ಬಳಿಕ ಸೈರನ್​ ಆನ್​ ಮಾಡುವ ಪೊಲೀಸ್​ ಅಧಿಕಾರಿ ವೇಗವಾಗಿ ವಾಹನ ಚಲಾಯಿಸಿಕೊಂಡು ಹೋಗಿ ವಿದ್ಯಾರ್ಥಿನಿಯನ್ನು ಪರೀಕ್ಷಾ ಕೇಂದ್ರಕ್ಕೆ ಸರಿಯಾದ ಸಮಯಕ್ಕೆ ಬಿಡುತ್ತಾರೆ.
ಇದಿಷ್ಟು ಘಟನೆ ಗುಜರಾತ್​ನಲ್ಲಿ ನಡೆದಿದೆ. ಪೊಲೀಸ್​ ಅಧಿಕಾರಿ ಹಾಗೂ ವಿದ್ಯಾರ್ಥಿನಿಯ ಫೋಟೋವನ್ನು ಆದರ್ಶ್​ ಹೆಗ್ಡೆ ಎಂಬುವರು ರಮ್ಮ ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿದ್ದು, ಸಿಕ್ಕಾಪಟ್ಟೆ ವೈರಲ್​ ಆಗಿದೆ. ಪೊಲೀಸ್​ ಅಧಿಕಾರಿಯ ಮಾನವೀಯ ಕಾರ್ಯವನ್ನು ವಿವರಿಸಿದ ಬಳಿಕ ಹೆಗ್ಡೆ ಅವರು ಅಧಿಕಾರಿಗೆ ಧನ್ಯವಾದ ತಿಳಿಸಿದ್ದಾರೆ. ನಮ್ಮ ಸಮಾಜದಲ್ಲಿ ಅನೇಕ ಒಳ್ಳೆಯ ಪೊಲೀಸ್​ ಅಧಿಕಾರಿಗಳಿದ್ದಾರೆ ಎಂದು ತಿಳಿಸಿದ್ದಾರೆ.
A incident in Gujrath 👍🙏This girl was about to write her Board exams. But in a hurry her father dropped her to a another school exam centre. Girl searched her roll number but it was not there in the list. So realized she was at a wrong examination centre.Thread….pic.twitter.com/mRtwjylHbK
— Adarsh Hegde (@adarshahgd)March 16, 2023

ಈ ಘಟನೆ ಯಾವಾಗ ನಡೆಯಿತು ಎಂಬುದರ ಸುಳಿವು ಇಲ್ಲ. ಆದರೆ, ಜಾಲತಾಣದಲ್ಲಿ ಮಾತ್ರ ವೈರಲ್​ ಆಗಿದ್ದು, ಪೊಲೀಸ್​ ಅಧಿಕಾರಿಯ ಸಮಯ ಪ್ರಜ್ಞೆಗೆ ನೆಟ್ಟಿಗರು ಅಭಿನಂದನೆಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ. ಈ ಫೋಟೋ ನೋಡಿ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿ.(ಏಜೆನ್ಸೀಸ್​)
ಭೋಜ್​ಪುರಿಯಲ್ಲೂ ಬೆಸ್ಟ್; ಪರಭಾಷೆಯಲ್ಲೂ ಅತ್ಯುತ್ತಮ ಡೆಬ್ಯೂ ನಟಿ ಪ್ರಶಸ್ತಿ ಪಡೆದ ಹರ್ಷಿಕಾ

ಇಂದು ಪುನೀತ್ ಹುಟ್ಟುಹಬ್ಬ; ಅಮೇಜಾನ್ ಪ್ರೖೆಮ್​ಗೆ ಬಂತು ಗಂಧದ ಗುಡಿ

ಅನಗತ್ಯ ಕ್ಯಾತೆ; ರಾಜ್ಯದ ಎಲ್ಲೆಯಲ್ಲಿ ಮಹಾರಾಷ್ಟ್ರ ಯೋಜನೆ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:sixteen − fourteen =
Remember me
