ನವದೆಹಲಿ:ಜವಾಹರ ಲಾಲ್ ನೆಹರು ಯೂನಿವರ್ಸಿಟಿ ಕ್ಯಾಂಪಸ್​​ನಲ್ಲಿ ಹಿಂಸಾಚಾರ ನಡೆದ ಸಂದರ್ಭದಲ್ಲಿ ಸ್ಥಳಕ್ಕೆ ಪೊಲೀಸರು ತಲುಪುವಾಗ ತಡವಾಗಿತ್ತು ಎಂಬ ಆರೋಪವನ್ನು ದೆಹಲಿ ಪೊಲೀಸರು ನಿರಾಕರಿಸಿದ್ದಾರೆ.
ಕ್ಯಾಂಪಸ್​ನಲ್ಲಿ ಹಿಂಸಾಚಾರ ಭುಗಿಲೇಳುತ್ತಿದ್ದಂತೆ ವಿದ್ಯಾರ್ಥಿ ಸಂಘಟನೆಗಳು, ಅನೇಕ ವಿದ್ಯಾರ್ಥಿಗಳು ಪೊಲೀಸರಿಗೆ ಕರೆ ಮಾಡಿದ್ದರು.ಆದರೆ ಪೊಲೀಸರು ನಿರ್ಲಕ್ಷಿಸಿದ್ದಲ್ಲದೆ, ಸ್ಥಳಕ್ಕೆ ತಲುಪುವಲ್ಲಿ ವಿಳಂಬ ಮಾಡಿದರು ಎಂಬ ಆರೋಪ ವ್ಯಾಪಕವಾಗಿ ಕೇಳುತ್ತಿರುವ ಕಾರಣ ದೆಹಲಿ ಪೊಲೀಶರು ಸೋಮವಾರ ಸ್ಪಷ್ಟೀಕರಣ ನೀಡಿದ್ದಾರೆ.
ಈ ಸಂಬಂಧ ದೆಹಲಿ ಪೊಲೀಸ್​ ವಕ್ತಾರ ಮನ್​ದೀಪ್​ ಸಿಂಗ್ ರಾಂಧವ ಸುದ್ದಿಗೋಷ್ಠಿ ನಡೆಸಿದ್ದು, ಜೆಎನ್​ಯುನ ಆಂತರಿಕ ಸುರಕ್ಷತೆ ವಿವಿಯ ಆಡಳಿತದ ಹಿಡಿತದಲ್ಲಿಯೇ ಇರುತ್ತದೆ. ನಾವು ಪಿಸಿಆರ್ ಕರೆಗೆ ಸ್ಪಂದಿಸಿದ್ದು, ತಕ್ಷಣವೇ ಅಲ್ಲಿಗೆ ಹೋಗಿ ವೃತ್ತಿಪರ ಮಾದರಿಯಲ್ಲಿ ಕ್ಯಾಂಪಸ್​ನಲ್ಲಿ ನಡೆಯುತ್ತಿದ್ದ ಹಿಂಸಾಚಾರವನ್ನು ಹತೋಟಿಗೆ ತಂದಿದ್ದೇವೆ ಎಂದು ಸಮಜಾಯಿಷಿ ನೀಡಿದ್ದಾರೆ.
ಅದೇ ರೀತಿ, ಭಾನುವಾರ ಕ್ಯಾಂಪಸ್​ನಲ್ಲಿ ಮುಖಮರೆಮಾಚಿಕೊಂಡು ಹಲ್ಲೆ ನಡೆಸಿದವರ ಗುರುತು ಪತ್ತೆಗೆ ಕ್ರಮ ತೆಗೆದುಕೊಳ್ಳಲಾಗಿದೆ. ತನಿಖೆಯೂ ಮುಂದುವರಿದಿದೆ ಎಂದು ರಾಂಧವ ಸ್ಪಷ್ಟಪಡಿಸಿದ್ದಾರೆ.

Delhi Police PRO, MS Randhawa: The case is with Crime Branch now. Delhi Police's Joint CP Western range, Shalini Singh is the head of fact finding committee.https://t.co/NUv10OQivQ— ANI (@ANI)January 6, 2020
Delhi Police PRO, MS Randhawa: The case is with Crime Branch now. Delhi Police's Joint CP Western range, Shalini Singh is the head of fact finding committee.https://t.co/NUv10OQivQ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + 1 =
Remember me
