ಆಗ್ರಾ:ಒಂದೆಡೆ ಸರ್ಕಾರ ದೇಶಾದ್ಯಂತ ಹಡಿರುವ ಕರೊನಾ ಸೋಂಕು ತಡೆಗಟ್ಟುವ ಜತೆಗೆ ಆರ್ಥಿಕ ಚಟುವಟಿಕೆಯ ಪುನರಾರಂಭಕ್ಕೆ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇನ್ನೊಂದೆಡೆ ಕೋವಿಡ್​ 19ನಂಥ ಮಹಾಮಾರಿಯ ಚಿಕಿತ್ಸೆಯಲ್ಲಿ ಬಳಸಿದ ವೈಯಕ್ತಿಕ ರಕ್ಷಾ ಕವಚಗಳ (ಪಿಪಿಇ) ಸುರಕ್ಷಿತ ಹಾಗೂ ವೈಜ್ಞಾನಿಕ ವಿಲೇವಾರಿಯಲ್ಲಿ ಸಾಕಷ್ಟು ನ್ಯೂನತೆಗಳು ಕಂಡಬರಲಾರಂಭಿಸಿವೆ. ಇದರಿಂದಾಗಿ ದೇಶದಲ್ಲಿ ಸೋಂಕಿನ ಪ್ರಮಾಣ ಕಡಿಮೆಯಾಗುವ ಬದಲು ಹೆಚ್ಚಾಗುವ ಭೀತಿ ಎದುರಾಗಿದೆ.
ಆಗ್ರಾದ ಕಂಟೋನ್ಮೆಂಟ್​ ಪ್ರದೇಶದ ಸುತ್ತಮುತ್ತಲ ನಿವಾಸಿಗಳು ಹತ್ತಿರದಲ್ಲಿರುವ ಕಸದ ತೊಟ್ಟಿಯಲ್ಲಿ ಬಿಸಾಡಿರುವ ಪಿಪಿಇ ಕಿಟ್​ಗಳನ್ನು ತೆಗೆದುಕೊಂಡು, ಒಣಗಿದ ಸೌದೆ ಸಾಗಿಸಲು ಬಳಸುತ್ತಿರುವುದು ಕಂಡುಬಂದಿದೆ. ಈ ವಿಡಿಯೋ ತುಣುಕು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.
ಇದನ್ನೂ ಓದಿ:ನಿಯಮಿತ ರೈಲು ಸಂಚಾರ ಜೂನ್​ 30ವರೆಗೂ ಆರಂಭವಾಗಲ್ಲ
ಆಗ್ರಾ ಕಂಟೋನ್ಮೆಂಟ್​ ಪ್ರದೇಶದಲ್ಲಿ ಸ್ಮಶಾನವಿದೆ. ಇದರ ಬಳಿ ಒಂದು ಕಸದ ತೊಟ್ಟಿ ಇದ್ದು, ಅದರಲ್ಲಿ ಪಿಪಿಇಗಳನ್ನು ಅವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗಿತ್ತು ಎಂದು ಹೇಳಲಾಗುತ್ತಿದೆ. ಆ ಕಸದ ತೊಟ್ಟಿಯಲ್ಲಿದ್ದ ಪಿಪಿಇಯನ್ನು ತೆಗೆದುಕೊಂಡಿರುವ ಇಬ್ಬರು ಬಾಲಕರು ಅದರ ಮೇಲೆ ಒಣಗಿದ ಸೌದೆ ಇರಿಸಿ, ಎಳೆದುಕೊಂಡು ಹೋಗುತ್ತಿರುವುದು ವಿಡಿಯೋ ದೃಶ್ಯದಲ್ಲಿ ಕಾಣಬಹುದಾಗಿದೆ.
ಈ ರುದ್ರಭೂಮಿಯಿಂದ ಒಂದು ಕಿ.ಮೀ. ಅಂತರದಲ್ಲಿ ರೈಲ್ವೆ ಆಸ್ಪತ್ರೆ ಇದೆ. ಈ ಆಸ್ಪತ್ರೆ ಇದೀಗ ಕೋವಿಡ್​ 19 ಐಸೋಲೇಷನ್​ ಕೇಂದ್ರವಾಗಿ ಬಳಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕರೊನಾ ಸೋಂಕಿತರ ಚಿಕಿತ್ಸೆಯಲ್ಲಿ ಬಳಸಲಾಗಿದ್ದ ಪಿಪಿಇಯನ್ನು ಈ ಕಸದ ತೊಟ್ಟಿಯಲ್ಲಿ ಅವೈಜ್ಞಾನಿಕವಾಗಿ ವಿಲೇವಾರಿ ಮಾಡಿರುವ ಬಗ್ಗೆ ಶಂಕೆ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ:ಕರೊನಾ ಯಾವಾಗ ನಿಯಂತ್ರಣಕ್ಕೆ ಬರಬಹುದೆಂದು ಊಹಿಸೋಕೆ ಸಾಧ್ಯವೇ ಇಲ್ಲ ಎಂದ ಡಬ್ಲ್ಯುಎಚ್​ಒ
ಈ ಬಗ್ಗೆ ಸ್ಪಷ್ಟನೆ ನೀಡಿರುವ ಆಗ್ರಾದ ಮುಖ್ಯ ವೈದ್ಯಾಧಿಕಾರಿ (ಸಿಎಂಒ) ಡಾ. ಆರ್​.ಸಿ. ಪಾಂಡೆ, ವೈರಲ್​ ಆಗಿರುವ ವಿಡಿಯೋ ತುಣುಕನ್ನು ತಾವು ನೋಡಿರುವುದಾಗಿಯೂ, ಈ ಪಿಪಿಇ ಕಿಟ್​ ಸರ್ಕಾರಿ ಆಸ್ಪತ್ರೆಗಳಲ್ಲಿ ಬಳಸಲು ಖರೀದಿಸಿರುವುದು ಅಲ್ಲವೆಂದೂ ಸ್ಪಷ್ಟಪಡಿಸಿದ್ದಾರೆ.
ಪಿಪಿಇನ ಬಣ್ಣ ನೋಡಿದರೆ ಇದು ಸರ್ಕಾರಿ ಆಸ್ಪತ್ರೆಗಳಲ್ಲಿ ಬಳಸಲು ಖರೀದಿಸಲಾಗಿರುವ ಪಿಪಿಇಯಂತೆ ತೋರುತ್ತಿಲ್ಲ. ಬಹುಶಃ ಖಾಸಗಿ ಆಸ್ಪತ್ರೆಯವರು ತಮ್ಮಲ್ಲಿನ ಬಳಕೆಗೆ ಇದನ್ನು ಖರೀದಿಸಿದ್ದು, ಬಳಕೆಯಾದ ನಂತರದಲ್ಲಿ ಆಗ್ರಾ ಕಂಟೋನ್ಮೆಂಟ್​ ಬಳಿ ರುದ್ರಭೂಮಿಯ ಕಸದ ತೊಟ್ಟಿಯಲ್ಲಿ ವಿಲೇವಾರಿ ಮಾಡಿರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:77 ಸಾವಿರ ದಾಟಿದ ಕರೊನಾ ಸೋಂಕಿತರ ಸಂಖ್ಯೆ
ಅಲ್ಲದೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಬಳಸಲಾಗುವ ಪಿಪಿಇಗಳ ಸುರಕ್ಷಿತ ಹಾಗೂ ವೈಜ್ಞಾನಿಕ ವಿಲೇವಾರಿಗಾಗಿ ಕ್ರಮ ಕೈಗೊಳ್ಳಲಾಗಿದೆ. ಅವನ್ನು ಬಳಸಿದ ಬಳಿಕ ಡಿಸ್​ಇನ್​ಫೆಕ್ಟ್​ಗೊಳಿಸಿ, ಪ್ರತ್ಯೇಕ ಕಂಟೇನರ್​ನಲ್ಲಿ ಸಂಗ್ರಹಿಸಲಾಗುತ್ತದೆ. ಬಳಿಕ ಅವನ್ನು ವಿಲೇವಾರಿ ಕೇಂದ್ರಕ್ಕೆ ರವಾನಿಸಲಾಗುತ್ತದೆ. ವಿಲೇವಾರಿ ಕೇಂದ್ರದಲ್ಲಿ ಅವನ್ನು ವಿದ್ಯುತ್​ ಕುಲುಮೆಗೆ (ಫರ್ನೇಸ್​) ಹಾಕಿ ಸುಡಲಾಗುತ್ತದೆ ಎಂದು ವಿವರಿಸಿದ್ದಾರೆ.
ಅಮಿತಾಭ್​ ಬಚ್ಚನ್​ ನಟನೆಯ ಗುಲಾಬೋ ಸಿತಾಬೋ ಅಮೆಜಾನ್​ ಪ್ರೈಮ್​ನಲ್ಲಿ ಬಿಡುಗಡೆಗೆ ಸಿದ್ಧತೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 1 =
Remember me
