ನವದೆಹಲಿ: ‘ಏನೇ ಆಗಲಿ.. ನಾನು ಹತ್ರಾಸ್​ಗೆ ಭೇಟಿ ಕೊಟ್ಟು, ಸಂತ್ರಸ್ತೆಯ ಕುಟುಂಬದ ಜತೆ ಮಾತನಾಡಿಯೇ ಬಿಡುತ್ತೇನೆ. ಪೊಲೀಸರು ತಡೆದರೂ ಸಂತ್ರಸ್ತೆಯ ಕುಟುಂಬವನ್ನು ನಾನು ಭೇಟಿಯಾಗುವುದು ಖಚಿತ’ ಎಂಬುದಾಗಿ ಕಾಂಗ್ರೆಸ್​ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಸವಾಲೆಸೆದಿದ್ದಾರೆ.
ಗುರುವಾರ ರಾಹುಲ್​ ಗಾಂಧಿ ಜತೆ ಹತ್ರಾಸ್​ಗೆ ಭೇಟಿ ಕೊಡುವ ಯತ್ನವನ್ನು ಉತ್ತರ ಪ್ರದೇಶದ ಪೊಲೀಸರು ವಿಫಲಗೊಳಿಸಿದ್ದರೂ, ಪ್ರಿಯಾಂಕಾ ಇದೀಗ ಮತ್ತೊಮ್ಮೆ ರಾಹುಲ್​ ಜತೆ ಅಲ್ಲಿಗೆ ಹೊರಟಿದ್ದಾರೆ. ಅವರೊಂದಿಗೆ ಸಂಸದ ಶಶಿ ತರೂರ್​ ಸೇರಿ ಹತ್ತಾರು ನಾಯಕರೂ ಜತೆಯಾಗಿದ್ದಾರೆ.
ಅದೊಂದು ಭೀಕರ ಘಟನೆ. ಇಂಥ ಸಂದರ್ಭದಲ್ಲಿ ನಾವು ಆ ಯುವತಿಗೆ ಗೌರವ ಸಲ್ಲಿಸಬೇಕಾಗಿದೆ. ಈಗ ಸಂಭವಿಸಿದ್ದಕ್ಕಿಂತ ಕೆಟ್ಟದ್ದು ಇನ್ನೇನೂ ಸಂಭವಿಸಲು ಸಾಧ್ಯವಿಲ್ಲ. ಅಷ್ಟೊಂದು ಬರ್ಬರ ಘಟನೆ ಅದು ಎಂಬುದಾಗಿ ಶಶಿ ತರೂರ್​ ಅಭಿಪ್ರಾಯ ಪಟ್ಟಿದ್ದಾರೆ.
ಕಾಂಗ್ರೆಸ್​ ನಾಯಕರ ಪ್ರಯಾಣದ ಹಿನ್ನೆಲೆಯಲ್ಲಿ ಉತ್ತರಪ್ರದೇಶದ ಪೊಲೀಸರು ಚುರುಕಾಗಿದ್ದು, ದೆಹಲಿ-ನೋಯ್ಡಾ-ಡೈರೆಕ್ಟ್​ವೇನಲ್ಲಿ ಸೂಕ್ತ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಕಾಂಗ್ರೆಸ್​ ನಾಯಕರನ್ನು ತಡೆಯಲು ಬೆಳಗಿನಿಂದಲೇ ಪೊಲೀಸ್​ ಬಂದೋಬಸ್ತ್​ ಏರ್ಪಡಿಸಲಾಗಿದೆ. ಕಳೆದೆರಡು ದಿನಗಳಿಂದ ಮಾಧ್ಯಮದವರು ಹತ್ರಾಸ್​​ಗೆ ಪ್ರವೇಶಿಸದಂತೆ ಉತ್ತರ ಪ್ರದೇಶ ಸರ್ಕಾರ ನಿರ್ಬಂಧ ಹೇರಿದ್ದು, ಈಗ ಪ್ರಿಯಾಂಕಾ-ರಾಹುಲ್​ ಅಲ್ಲಿಗೆ ಭೇಟಿ ಕೊಡಲಿರುವ ಕಾರಣ ಮತ್ತಷ್ಟು ಕುತೂಹಲ ಮೂಡಿದೆ. (ಏಜೆನ್ಸೀಸ್​)
https://www.facebook.com/VVani4U/posts/3828316337196336?__cft__[0]=AZUTToqFxVJW5EwIe11kB1PqwjS5ayJy101ugdwyVhBoc8PsHCszgkrc4mwScyqMVa27NhepDWKz4v6daSzaOK-qKKFK8epwrusZVObcQH_rE–RMYjXLt5YVsc0WWlrYAsDVr7UbpuDJ_zVp3glplAA91MQFLeDNdw6KjMADnDLgz742oKUOMC0WZ7vgagQ0UsR3-LZ4QipFLmJ05Nc_r5P&__tn__=%2CO%2CP-R
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − one =
Remember me
