ಪುಣೆ:ಪಿಂಪ್ರಿ-ಚಿಂಚ್‌ವಾಡ್ ಪೊಲೀಸ್ ಕಮಿಷನರೇಟ್‌ನ ಸಬ್-ಇನ್ಸ್‌ಪೆಕ್ಟರ್ ಆಗಿರುವಸೋಮನಾಥ್ ಝೆಂಡೆ(ಪಿಎಸ್‌ಐ) ಡ್ರೀಮ್ 11ರ ಮೂಲಕ ಒಂದೂವರೆ ಕೋಟಿ ಬಹುಮಾನವನ್ನು ಗೆದ್ದಿದ್ದಾರೆ. ಹೀಗಾಗಿ ಈ ಪೊಲೀಸ್ ಸಬ್-ಇನ್ಸ್‌ಪೆಕ್ಟರ್ ಲಕ್​​ ಬದಲಾಗಿದೆ.
ಕ್ರಿಕೆಟ್ ಎಲ್ಲರಿಗೂ ಅಚ್ಚುಮೆಚ್ಚಿನ ಆಟ, ಕೆಲವರು ಮೈದಾನದಲ್ಲಿ ಆಡುತ್ತಾರೆ ಮತ್ತು ಕೆಲವರು ಮೊಬೈಲ್ ಫೋನ್‌ನಲ್ಲಿ ಆಡುತ್ತಾರೆ.  ಕ್ರಿಕೆಟ್ ಆಟಗಳು ಮೊಬೈಲ್​​​ನಲ್ಲೂ ಲಭ್ಯವಿದೆ ಎನ್ನುವುದು ಗೊತ್ತಿರುವ ವಿಚಾರ.
ಒಂದೆಡೆ ವಿಶ್ವಕಪ್ ನಡೆಯುತ್ತಿದ್ದು, ಹಲವರು ತಂಡಗಳನ್ನು ಕಟ್ಟಿಕೊಂಡು ಡ್ರೀಮ್ 11ರಲ್ಲಿ ಹಣ ವ್ಯಯಿಸಿ ಆಡುತ್ತಿದ್ದಾರೆ. ಪಿಂಪ್ರಿ-ಚಿಂಚ್ವಾಡ್ ಪೊಲೀಸ್ ಹೆಡ್ಕ್ವಾರ್ಟರ್ಸ್ನಲ್ಲಿ ಕೆಲಸ ಮಾಡುವಪಿಎಸ್ಐ ಸೋಮನಾಥ್ ಝೆಂಡೆ ಅವರು ಕ್ರಿಕೆಟ್‌ನಲ್ಲಿ ಒಲವು ಹೊಂದಿರುವ ಕಾರಣ, ಅವರು ಆನ್ಲೈನ್ನಲ್ಲಿ ಗೇಮಿಂಗ್ಸ್ನಲ್ಲಿ ತಮ್ಮ ತಂಡವನ್ನು ಆಯ್ಕೆ ಮಾಡಿಕೊಂಡು ಕ್ರಿಕೆಟ್ ಪಂದ್ಯಗಳಲ್ಲಿ ಭಾಗವಹಿಸಿದ್ದಾರೆ. ಅವರು ಕಳೆದ 2-3 ತಿಂಗಳಿಂದ ಈ ಆಟ ಆಡಲು ಪ್ರಾರಂಭಿಸಿದರು. ಆದರೆ, ಅವರು ಅನೇಕ ಬಾರಿ ತಮ್ಮ ಆಟದಲ್ಲಿ ಸೋಲು ಕಂಡಿದ್ದರು.

ಒಂದೇ ಏಟಿಗೆ ಒಂದೂವರೆ ಕೋಟಿ :ಡ್ರೀಮ್ 11 ನಲ್ಲಿಬಾಂಗ್ಲಾದೇಶ ವರ್ಸಸ್ ಇಂಗ್ಲೆಂಡ್ ಕ್ರಿಕೆಟ್ ಪಂದ್ಯದಲ್ಲಿ ಭಾಗವಹಿಸಿದ್ದರು. ಕೆಲವೇ ಸಮಯದಲ್ಲಿ, ಅವರ ತಂಡವು ನಂಬರ್ ಸ್ಥಾನ ಪಡೆದುಕೊಂಡಿದ್ದರಿಂದ ಬಹುಮಾನ ಪಡೆದಿದ್ದಾರೆ.ಪಿಂಪ್ರಿ ಚಿಂಚ್‌ವಾಡ್ ಪೊಲೀಸ್ ಕಮಿಷನರೇಟ್‌ನ ಪೊಲೀಸ್ ಸಬ್-ಇನ್‌ಸ್ಪೆಕ್ಟರ್ ಕೂಡ ಡ್ರೀಮ್ 11 ನಲ್ಲಿ ತಂಡವನ್ನು ಕಣಕ್ಕಿಳಿಸಿ 1.5 ಕೋಟಿ ರೂ. ಗೆದ್ದಿದ್ದಾರೆ.ಆ ಬಹುಮಾನವನ್ನು ನೋಡಿ ಅವರು ಆಶ್ಚರ್ಯಚಕಿತರಾಗಿದ್ದಾರೆ. ಒಂದೂವರೆ ಕೋಟಿ ರೂಪಾಯಿ ಬಹುಮಾನ ಸಿಕ್ಕಿದ್ದು ಸೋಮನಾಥ್ ಝೆಂಡೆ ಕುಟುಂಬಕ್ಕೆ ತುಂಬಾ ಖುಷಿ ತಂದಿದೆ. ಸಬ್ ಇನ್ಸ್ ಪೆಕ್ಟರ್ ಪಡೆದಿರುವ ಬಹುಮಾನ ಸದ್ಯ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿದೆ.
ಇತರರಂತೆ ತನ್ನ ಅದೃಷ್ಟವನ್ನು ಪರೀಕ್ಷಿಸಲು, ಸಬ್ ಇನ್ಸ್‌ಪೆಕ್ಟರ್ ಸೋಮನಾಥ್ ಝೆಂಡೆ ಬಾಂಗ್ಲಾದೇಶ ಮತ್ತು ಇಂಗ್ಲೆಂಡ್ ಪಂದ್ಯದ ಮೊದಲು ಡ್ರೀಮ್ 11 ನಲ್ಲಿ ತನ್ನ ತಂಡವನ್ನು 49 ರೂ. ಕ್ಕೆ ಖರೀದಿ ಮಾಡುವ ಮೂಲಕ 1.5 ಕೋಟಿ ರೂ. ಗಳಿಸಿದ್ದಾರೆ.  ಬಹುಮಾನವನ್ನು ಗೆದ್ದ ನಂತರ ಸೋಮನಾಥ್ ಝೆಂಡೆ ಮತ್ತು ಅವರ ಕುಟುಂಬ ಸಂತೋಷದಲ್ಲಿದೆ.
ಸೋಮನಾಥ್ ಝೆಂಡೆ ಮಾತನಾಡಿ,ಕಳೆದ ಮೂರ್ನಾಲ್ಕು ತಿಂಗಳಿನಿಂದ ಡ್ರೀಮ್ 11 ರಂದು ಕ್ರಿಕೆಟ್ ಆಡಲು ಪ್ರಾರಂಭಿಸಿದೆ. ಅದರಂತೆ, ಬಾಂಗ್ಲಾದೇಶ ಮತ್ತು ಇಂಗ್ಲೆಂಡ್ ಪಂದ್ಯಕ್ಕೆ ತಂಡವನ್ನು ಹೊಂದಿಸಲಾಯಿತು. ಒಂದೂವರೆ ಕೋಟಿ ಬಹುಮಾನ ಸಿಕ್ಕಿದೆ. ಮೊದಲಿಗೆ ನಾನು ಅದನ್ನು ನಂಬಲಿಲ್ಲ. ಆದರೆ, ಬಳಿಕ  ಹಣ  ಬಂದಿದೆ. ಇದು ನಿಜಕ್ಕೂ  ಸತ್ಯ ಎಂದು ಹೇಳಿದ್ದಾರೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:8 + ten =
Remember me
