ಚೆನ್ನೈ:ಇಲ್ಲಿನ ರಾಮಾಪುರಂ, ವಾಲಸರವಕ್ಕಮ್​, ತಾರಾಮಣಿ ಹಾಗೂ ವೇಲಚೇರಿ ಏರಿಯಾಗಳಲ್ಲಿನ ಸ್ಟೇಟ್​ ಬ್ಯಾಂಕ್​ ಇಂಡಿಯಾದ ಎಟಿಎಂಗಳಲ್ಲಿ ದರೋಡೆ ನಡೆಯುತ್ತಿರುವುದಾಗಿ ಅನೇಕ ಬಾರಿ ಗ್ರೇಟರ್​ ಚೆನ್ನೈ ಪೊಲೀಸರಿಗೆ ದೂರುಗಳು ಬರುತ್ತಿವೆ. ಆದಾಗ್ಯೂ, ಯಾವುದೇ ಎಟಿಎಂ ತಿರುಚುವಿಕೆ ಮತ್ತು ಎಚ್ಚರಿಕೆಗಳಿಲ್ಲದೆ ದರೋಡೆ ನಡೆಯುತ್ತಿರುವುದು ಬ್ಯಾಂಕ್​ ಅಧಿಕಾರಿಗಳು ಮತ್ತು ಪೊಲೀಸರನ್ನು ಗೊಂದಲಕ್ಕೀಡುಮಾಡಿದೆ.
ಬ್ಯಾಂಕ್​ ಅಧಿಕಾರಿಗಳು ದಿನನಿತ್ಯದ ಲೆಕ್ಕಾಚಾರ ಮಾಡುವಾಗ ಎಟಿಎಂನಲ್ಲಿನ ಕ್ಯಾಶ್​ ಡೆಪಾಸಿಟ್​ ಮತ್ತು ಕ್ಯಾಶ್​ ವಿಥ್​ಡ್ರಾ ಮೊತ್ತದಲ್ಲಿ ಹೊಂದಾಣಿಕೆ ಇಲ್ಲದಿರುವುದು ಕಂಡುಬಂದಿದೆ. ಲಕ್ಷಗಳಲ್ಲಿ ವ್ಯತ್ಯಾಸ ಕಂಡುಬರುತ್ತಿದ್ದು, ದರೋಡೆ ನಡೆದಿರುವ ಸಾಧ್ಯತೆ ಹಿನ್ನೆಲೆಯಲ್ಲಿ ಅಧಿಕಾರಿಗಳು ದೂರು ನೀಡಿದ್ದಾರೆ. ಈ ರೀತಿ ಚೆನ್ನೈ ಅನೇಕ ಶಾಖೆಗಳಲ್ಲಿ ಕಂಡುಬಂದಿದೆ.
ಸದ್ಯ ಪ್ರಕರಣ ದಾಖಲಿಸಿಕೊಂಡು ಚೆನ್ನೈ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಅದರಲ್ಲೂ ದರೋಡೆ ನಡೆಯುವಾಗ ಯಾವುದೇ ಎಚ್ಚರಿಕೆ ಗಂಟೆ ಬಾರಿಸದೇ ಇರುವುದು ಕುತೂಹಲಕ್ಕೆ ಕಾರಣವಾಗಿದೆ. ಎಲ್ಲಾ ಎಸ್‌ಬಿಐ ನಗದು ಠೇವಣಿ ಯಂತ್ರಗಳ ನಡುವಿನ ಸಾಮಾನ್ಯ ಅಂಶವನ್ನು ಜಪಾನಿನ ಸಂಸ್ಥೆಯೊಂದು ತಯಾರಿಸಿದೆ.
ನಗದು ಠೇವಣಿ ಯಂತ್ರಗಳಲ್ಲಿನ ತಾಂತ್ರಿಕ ಅಡಚಣೆಯಿಂದ ಸಮಸ್ಯೆ ಉಂಟಾಗಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿತ್ತು. ಎಟಿಎಂ ನಂಬರ್​ ಒತ್ತಿದ ಕೆಲವೇ ಸಮಯದಲ್ಲಿ ಅಂದರೆ 20 ಸೆಕೆಂಡ್​ ಒಳಗೆ ಹಣವನ್ನು ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ಹಣ ಮತ್ತೆ ಯಂತ್ರದ ಒಳಗೆ ಸೇರುತ್ತದೆ.
ಕೈಯಲ್ಲಿ ಹಣವನ್ನು ಹಿಡಿದುಕೊಂಡು ಹಣವನ್ನು ತೆಗೆಯುವಾಗ ಸೆನ್ಸಾರ್ ಅನ್ನು ನಿಲ್ಲಿಸುವ ತಂತ್ರವನ್ನು ದರೋಡೆಕೋರರು ಬಳಸಿದ್ದಾರೆಂದು ಆರೋಪಿಸಲಾಗಿದೆ. ಸೆನ್ಸಾರ್​ ನಿಲ್ಲಿಸುವ ತಂತ್ರದಿಂದಾಗಿ ಯಂತ್ರವು ಯಾವುದೇ ಹಣವನ್ನು ತೆಗೆದುಹಾಕಿಲ್ಲ ಎಂದು ನೋಂದಾಯಿಸುತ್ತದೆ.
ಪೊಲೀಸರು ಅನೇಕ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದ್ದು, ಇಬ್ಬರು ಅನುಮಾನಾಸ್ಪದವಾಗಿ ಓಡಾಡುತ್ತಿರುವ ದೃಶ್ಯ ದಾಖಲಾಗಿದೆ. ಆದರೆ, ಈವರೆಗೂ ಪ್ರಕರಣ ಸಂಬಂಧ ಯಾರೊಬ್ಬರನ್ನು ಬಂಧಿಸಿಲ್ಲ. ಇನ್ನು ಜಪಾನ್​ ಸಂಸ್ಥೆ ತಯಾರಿಸಿದ ಎಟಿಎಂ ಠೇವಣಿ ಯಂತ್ರಗಳನ್ನು ಹೊಂದಿರುವ ಬ್ಯಾಂಕುಗಳು ಈ ದೋಷದ ಬಗ್ಗೆ ಜಾಗರೂಕರಾಗಿರಲು ಸೂಚಿಸಲಾಗಿದೆ. ದರೋಡೆಕೋರರಿಗೆ ಈ ದೋಷದ ಬಗ್ಗೆ ಹೇಗೆ ತಿಳಿದಿದೆಯೇ ಎಂದು ಕಂಡುಹಿಡಿಯಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.(ಏಜೆನ್ಸೀಸ್​)
ಶೌಚಗೃಹಕ್ಕೆ ಹೋದ ಇನ್ಸ್​ಪೆಕ್ಟರ್​ ಪತ್ನಿ ತುಂಬಾ ಹೊತ್ತು ಬರಲೇ ಇಲ್ಲ: ಬಾಗಿಲು ತೆರೆದ ಪತಿಗೆ ಕಾದಿತ್ತು ಶಾಕ್​!

ಸರ್ಕಾರಕ್ಕೆ ಡಾ. ದೇವಿಶೆಟ್ಟಿ‌ ವರದಿ ಸಲ್ಲಿಕೆ: ಶಾಲೆ ಆರಂಭಕ್ಕೆ ಸೂಚನೆ ನೀಡಿದ್ರೂ ಒಪ್ಪದ ಸರ್ಕಾರ

‘ನಕಲಿ ಜಾತಿ’ಯಿಂದ ಬಚಾವಾದ ಸಂಸದೆ- ಸುಪ್ರೀಂನಿಂದ ಸದ್ಯ ಖುರ್ಚಿ ಭದ್ರ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + ten =
Remember me
