ನವದೆಹಲಿ:ರಷ್ಯಾ ಮತ್ತು ಯೂಕ್ರೇನ್​ ನಡುವೆ ನಾಲ್ಕನೇ ದಿನವೂ ಯುದ್ಧ ಮುಂದುವರಿದಿದ್ದು, ಎಲ್ಲೆಡೆ ಯುದ್ಧದ ಭೀತಿಯ ಬಗ್ಗೆಯೇ ಚರ್ಚೆಯಾಗುತ್ತಿದೆ. ಪುಟ್ಟ ಯೂಕ್ರೇನ್​ ಮೇಲೆ ರಷ್ಯಾ ಎಲ್ಲ ಕಡೆಗಳಿಂದಲೂ ದಾಳಿ ಮಾಡಿ ರಕ್ತ ಚರಿತ್ರೆ ಬರೆಯುತ್ತಿದೆ. ಯುದ್ಧಭೂಮಿಯಲ್ಲಿ ಬಲಿಷ್ಠ ರಷ್ಯಾ ಮುಂದೆ ಯೂಕ್ರೇನ್​ ಏಕಾಂಗಿಯಾಗಿ ಹೋರಾಡುತ್ತಿದ್ದು, ಸಹಾಯದ ನಿರೀಕ್ಷೆಯಲ್ಲಿದೆ. ಆದರೆ, ಅದರ ನೆರವಿಗೆ ಧಾವಿಸಿದರೆ ಎಲ್ಲಿ ಮೂರನೇ ವಿಶ್ವಯುದ್ಧಕ್ಕೆ ಹಾದಿಯಾಗುತ್ತದೋ ಎಂಬ ಆತಂಕದ ವಾತಾವರಣವು ನಿರ್ಮಾಣವಾಗಿದೆ. ಏಕೆಂದರೆ ಬೆಂಬಲದ ರಾಷ್ಟ್ರಗಳು ಯುದ್ಧಕ್ಕೆ ನಿಂತರೆ ಇಡೀ ವಿಶ್ವ ವಿನಾಶವಾಗುವುದರಲ್ಲಿ ಸಂದೇಹವೇ ಇಲ್ಲ. ಏಕೆಂದರೆ ಅನೇಕ ರಾಷ್ಟ್ರಗಳು ತಮ್ಮ ಬಲಿಷ್ಠ ಸೇನೆಗಳಿಂದಲೇ ಹೆಸರಾಗಿವೆ.
ಹೌದು, ದೇಶದ ಭದ್ರತೆಯಲ್ಲಿ ಸೇನೆಯ ಪಾತ್ರ ತುಂಬಾ ಪ್ರಮುಖವಾದದ್ದು. ಪ್ರತಿಯೊಂದು ದೇಶವು ತನ್ನದೆಯಾದ ವಿಶೇಷ ಹಾಗೂ ಶಕ್ತಿಶಾಲಿ ಸೇನಾ ಪಡೆಗಳನ್ನು ಹೊಂದಿರುತ್ತದೆ. ಯಾವ ದೇಶದ ಸೇನೆ ತುಂಬಾ ಬಲಿಷ್ಠವಾಗಿದೆ ಎಂದು ತಿಳಿದುಕೊಳ್ಳುವ ಕುತೂಹಲ ಎಲ್ಲರಿಗೂ ಇದ್ದೇ ಇರುತ್ತದೆ. ಹೀಗಾಗಿ ಮಿಲಿಟರಿ ಡೈರೆಕ್ಟ್​ ಹೆಸರಿನ ಮಿಲಿಟರಿ ವೆಬ್​ಸೈಟ್​ ಸಮೀಕ್ಷೆಯೊಂದನ್ನು ಪ್ರಕಟಿಸುವ ಮೂಲಕ ಆ ಕುತೂಹಲಕ್ಕೆ ತೆರೆ ಎಳೆದಿದೆ.
2021ರಲ್ಲಿ ಯಾವ ದೇಶವು ಪ್ರಬಲ ಮಿಲಿಟರಿ ಪಡೆಯನ್ನು ಹೊಂದಿದೆ? ಎಂಬ ಪ್ರಶ್ನೆಗೆ ಉತ್ತರ ನೀಡಿರುವ ಸಮೀಕ್ಷೆ, ಮೊದಲ ಸ್ಥಾನದಲ್ಲಿ ಚೀನಾ ಮತ್ತು ನಾಲ್ಕನೇ ಸ್ಥಾನದಲ್ಲಿ ಭಾರತ ಇದೆ ಎಂದಿದೆ.
ಮಿಲಿಟರಿ ಮೇಲೆ ಸಾಕಷ್ಟು ಹಣವನ್ನು ಖರ್ಚು ಮಾಡುವ ಅಮೆರಿಕ 744 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ರಷ್ಯಾ 699 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದರೆ, ಭಾರತ 611 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. 56 ಅಂಕಗಳೊಂದಿಗೆ ಫ್ರಾನ್ಸ್​ 5 ಮತ್ತು 43 ಅಂಕಗಳೊಂದಿಗೆ ಬ್ರಿಟನ್​ 43ನೇ ಸ್ಥಾನದಲ್ಲಿವೆ.
ಮಿಲಿಟರಿ ಬಜೆಟ್, ಸಕ್ರಿಯ ಮತ್ತು ನಿಷ್ಕ್ರಿಯ ಮಿಲಿಟರಿ ಸಿಬ್ಬಂದಿಗಳ ಸಂಖ್ಯೆ, ವಿಮಾನ, ಸಾಗರ, ಭೂಮಿ ಮತ್ತು ಪರಮಾಣು ಸಂಪನ್ಮೂಲಗಳು, ಸರಾಸರಿ ಸಂಬಳ ಮತ್ತು ಉಪಕರಣಗಳು ಸೇರಿದಂತೆ ವಿವಿಧ ಅಂಶಗಳನ್ನು ಪರಿಗಣಿಸಿದ ನಂತರ ‘ಸೇನಾ ಸಾಮರ್ಥ್ಯ ಸೂಚ್ಯಂಕ’ ರಚಿಸಲಾಗಿದೆ ಎಂದು ಸಮೀಕ್ಷೆ ಹೇಳಿದೆ.
ಸೂಚ್ಯಂಕದಲ್ಲಿ 100ಕ್ಕೆ 82 ಅಂಕಗಳೊಂದಿಗೆ ಚೀನಾ ವಿಶ್ವದ ಅತ್ಯಂತ ಪ್ರಭಾವಶಾಲಿ ಮಿಲಿಟರಿ ಆಗಿ ಹೊರಹೊಮ್ಮಿದೆ. “ಬಜೆಟ್, ಮಿಲಿಟರಿ ಮತ್ತು ವಾಯು ಮತ್ತು ನೌಕಾ ಸಾಮರ್ಥ್ಯಗಳಂತಹ ಅಂಶಗಳನ್ನು ಆಧರಿಸಿದ ಈ ಅಂಕಗಳು ಕಾಲ್ಪನಿಕ ಸಂಘರ್ಷದಲ್ಲಿ ಚೀನಾ ವಿಜಯಶಾಲಿಯಾಗಲಿದೆ ಎಂದು ಸೂಚಿಸುತ್ತದೆ” ಎಂದು ಸಮೀಕ್ಷೆ ತಿಳಿಸಿದೆ.
ವೆಬ್​ಸೈಟ್​ ಪ್ರಕಾರ ಅಮೆರಿಕವು ತನ್ನ ಸೇನೆಗೆ 732 ಬಿಲಿಯನ್​ ಡಾಲರ್​ ಖರ್ಚು ಮಾಡುತ್ತದೆ. ಉಳಿದಂತೆ ಚೀನಾ 261 ಬಿಲಿಯನ್​ ಮತ್ತು ಭಾರತ 71 ಬಿಲಿಯನ್​ ಡಾಲರ್​ ಖರ್ಚು ಮಾಡುತ್ತದೆ. ಸಮೀಕ್ಷೆ ಪ್ರಕಾರ ಒಂದು ವೇಳೆ ಯುದ್ಧ ನಡೆದರೆ, ನೌಕಾ ಯುದ್ಧದಲ್ಲಿ ಚೀನಾ, ವಾಯುದಾಳಿಯಲ್ಲಿ ಅಮೆರಿಕ ಮತ್ತು ಭೂಸೇನಾ ಯುದ್ಧದಲ್ಲಿ ರಷ್ಯಾ ಜಯ ಸಾಧಿಸಲಿದೆ ಎಂದು ಹೇಳಿದೆ.(ಏಜೆನ್ಸೀಸ್​)
ದೇಶದಲ್ಲೇ ವೈದ್ಯ ಶಿಕ್ಷಣ ಪಡೆಯಿರಿ- ಯುವ ಸಮುದಾಯಕ್ಕೆ ಪ್ರಧಾನಿ ಮೋದಿ ಕರೆ

ಪಕ್ಕಾ ಲೆಕ್ಕ ಕೊಟ್ಟು ಪೆಟ್ರೋಲ್‌ ಬಂಕ್‌ ಮಾಲೀಕನಿಗೆ 44 ಲಕ್ಷ ರೂ. ಟೋಪಿ ಹಾಕಿದ ಖದೀಮ- ಇದ್ಹೇಗೆ ನೋಡಿ…

ಯೂಕ್ರೇನ್​ ನೆರವಿಗೆ ಬಂದ ನ್ಯಾಟೋ, ಮಹಾಸಮರ ತುರುಸು: ಆಪರೇಷನ್​ ಗಂಗಾ ಶುರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + 18 =
Remember me
