ನವದೆಹಲಿ:ದೇಶದಲ್ಲಿ ಕೋವಿಡ್​ ಪ್ರಕರಣಗಳು ಸಂಪೂರ್ಣವಾಗಿ ಇಳಿಕೆಯಾಗಿದೆ. ಹೀಗಾಗಿ ನವೆಂಬರ್​ ಮತ್ತು ಡಿಸೆಂಬರ್​ನಲ್ಲಿ ನಡೆಯಲಿರುವ ಮದುವೆಗಳಲ್ಲಿ ಭಾಗಿಯಾಗಲಿರುವ ಶೇ. 76 ರಷ್ಟು ಮಂದಿ ಕರೊನಾ ಸೋಂಕಿನಿಂದ ಯಾವುದೇ ತೊಂದರೆ ಇಲ್ಲ ಎಂದು ನಂಬಿರುವುದಾಗಿ ಸಮೀಕ್ಷೆಯೊಂದು ಬಹಿರಂಗಪಡಿಸಿದೆ.
ಮೊದಲೇ ಹೇಳಿದಂತೆ ಸೆಪ್ಟೆಂಬರ್​ ಮತ್ತು ಅಕ್ಟೋಬರ್​ ಹಬ್ಬದ ಸಮಯದಲ್ಲಿ ಕರೊನಾ ಮೂರನೇ ಅಲೆ ಅಪ್ಪಳಿಸಿಲ್ಲ. ಇನ್ನು ಕರೊನಾ ಸೋಂಕು ಸಂಪೂರ್ಣವಾಗಿ ಮರೆಯಾಗದೇ ಇದ್ದರೂ ಅದನ್ನು ಸಂಪೂರ್ಣವಾಗಿ ಮರೆತಿರುವ ಜನ ಈಗಾಗಲೇ ಸುರಕ್ಷತಾ ಕ್ರಮಗಳನ್ನು ಕಡಿಮೆ ಮಾಡಿದ್ದಾರೆ. ಅಲ್ಲದೆ, ಮುಂಬರುವ ಮದುವೆ ಸೀಸನ್​ನಲ್ಲಿ ಮುಕ್ತವಾಗಿ ಭಾಗವಹಿಸುವ ತಯಾರಿಯಲ್ಲಿದ್ದಾರೆ.
ಲೋಕಲ್​ಸರ್ಕಲ್​ ಸಂಸ್ಥೆ ಭಾರತದ 319 ಜಿಲ್ಲೆಗಳಲ್ಲಿ ಸರ್ವೆ ಮಾಡಲಾಗಿದ್ದು, 17 ಸಾವಿರಕ್ಕೂ ಹೆಚ್ಚು ನಾಗರಿಕರು ಸರ್ವೆಗೆ ಪ್ರತಿಕ್ರಿಯಿಸಿದ್ದಾರೆ. ಅದರಲ್ಲಿ ಶೇ. 62 ರಷ್ಟು ಪುರುಷರು ಮತ್ತು ಶೇ. 38ರಷ್ಟು ಮಹಿಳೆಯರು ಪ್ರತಿಕ್ರಿಯೆ ನೀಡಿದ್ದಾರೆ. ಲೋಕಲ್​ಸರ್ಕಲ್​ ವರದಿಯ ಪ್ರಕಾರ ಅನೇಕ ರಾಜ್ಯಗಳು ಮದುವೆಯಲ್ಲಿ ಸೀಮಿತ ಜನರು ಪಾಲ್ಗೊಳ್ಳಬೇಕೆಂಬ ಕಟ್ಟುನಿಟ್ಟಿನ ಕ್ರಮಗಳನ್ನು ಈಗಾಗಲೇ ತೆರವುಗೊಳಿಸಿದ್ದು, ಶೇ. 100 ರಷ್ಟು ಜನರು ಕಾರ್ಯಕ್ರಮಗಳಲ್ಲಿ ಭಾಗವಹಿಸಬಹುದಾಗಿದೆ.
ಸಾಂಕ್ರಮಿಕಗೂ ಮೊದಲು ಬುಕ್​ ಆಗಿದ್ದಷ್ಟೇ ಕಲ್ಯಾಣ ಮಂಟಪಗಳು ಈಗಲೂ ಬುಕ್​ ಆಗಿವೆ ಎಂದು ವರದಿಯಲ್ಲಿ ತಿಳಿಸಿದೆ. ನವೆಂಬರ್​ 14 ರಿಂದ ಡಿಸೆಂಬರ್​ 13ರವರೆಗೆ ದೆಹಲಿ ಒಂದರಲ್ಲೇ 1.5 ಲಕ್ಷ ಮದುವೆ ನಡೆಯಲಿದ್ದು, ದೇಶಾದ್ಯಂತ ಬರೋಬ್ಬರಿ 25 ಲಕ್ಷ ಕ್ಕೂ ಹೆಚ್ಚು ವಿವಾಹ ಸಮಾರಂಭಗಳು ನಡೆಯಲಿವೆ.
ನವೆಂಬರ್​ -ಡಿಸೆಂಬರ್​ನಲ್ಲಿ ತಲಾ ಹತ್ತು ಮಂದಿಯಲ್ಲಿ 6 ಮಂದಿ ನಿಶ್ಚಿತಾರ್ಥ ಮತ್ತು ಮದುವೆ ಸಮಾರಂಭಗಳಲ್ಲಿ ಭಾಗವಹಿಸುತ್ತಾರೆ ಎಂಬುದು ಸರ್ವೇಯಲ್ಲಿ ತಿಳಿದುಬಂದಿದೆ. ಅಲ್ಲದೆ, ಕರೊನಾ ಪ್ರಕರಣಗಳ ಸಂಖ್ಯೆ ತುಂಬಾ ಕಡಿಮೆ ಆಗಿರುವುದರಿಂದ ನವೆಂಬರ್​-ಡಿಸೆಂಬರ್​ನಲ್ಲಿ ಮದುವೆ ಹಾಗೂ ನಿಶ್ಚಿತಾರ್ಥಗಳಲ್ಲಿ ಪಾಲ್ಗೊಳ್ಳುವವರ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆ. ಈ ಮದುವೆಗಳಲ್ಲಿ ಭಾಗವಹಿಸುವುದರಿಂದ ಕರೊನಾ ಹರಡಬಹುದು ಎಂದು ಕಳೆದ ಬಾರಿ ಶೇ. 57ರಷ್ಟು ಮಂದಿ ನಂಬಿದ್ದರು. ಆದರೆ, ಈ ಬಾರಿ ಶೇ. 60 ರಷ್ಟು ಮಂದಿ ಏನು ಸಮಸ್ಯೆಯಿಲ್ಲ ಎಂದು ನಂಬಿದ್ದಾರೆ.
ದೇಶಾದ್ಯಂತ ಮಾಸ್ಕ್​ ಮರೆಯಾಗಿದೆ. ಸಾಮಾಜಿಕ ಅಂತರ ಕಾಣೆಯಾಗಿದ್ದು, ಕರೊನಾ ಲಸಿಕೆಯಿಂದ ಪಡೆದ ಪ್ರತಿಕಾಯಗಳು ಕ್ಷಿಣಿಸುವ ಸಾಧ್ಯತೆ ಇದ್ದು, ನಿಶ್ಚಿತಾರ್ಥ ಮತ್ತು ಮದುವೆಗಳಲ್ಲಿ ಗುಂಪು ಗುಂಪಾಗಿ ಜನ ಭಾಗವಹಿಸುತ್ತಿರುವುದು ಕೋವಿಡ್​ ಅಪಾಯ ಹೆಚ್ಚಿಸುವ ಮತ್ತು ಮೂರನೇ ಅಲೆಯ ಆತಂಕವನ್ನು ಸೃಷ್ಟಿಸಿದೆ ಎಂದು ಸರ್ವೇ ತಿಳಿಸಿದೆ.(ಏಜೆನ್ಸೀಸ್​)
ಅಪ್ಪಾಜಿಯ ಪ್ರತಿಮೆ ಉದ್ಘಾಟನೆಗೆ ಅಂದು ಅಪ್ಪು ಹೋಗಿದ್ದ, ಆದ್ರೆ ಇವತ್ತು… ಎನ್ನುತ್ತಲೇ ಭಾವುಕರಾದ ರಾಘಣ್ಣ

ನಿರಂತರ ಮಳೆಯಿಂದ ಬೇಸತ್ತ ಜನತೆಗೆ ಗುಡ್​ನ್ಯೂಸ್​: ಬದಲಾದ ಹವಾಮಾನ ಹಿನ್ನೆಲೆ ಸೈಕ್ಲೋನ್ ಇಲ್ಲ

ನಿಕ್​ ಜೋನಾಸ್​ ಜತೆ ಡಿವೋರ್ಸ್! ಅನುಮಾನಗಳನ್ನು ಬಗೆಹರಿಸಿದ ನಟಿ ಪ್ರಿಯಾಂಕಾ ಚೋಪ್ರಾ

ದುನಿಯಾ ವಿಜಯ್​ ಬಾರದಿದ್ದಲ್ಲಿ ತಾಳಿ ಕಟ್ಟಿಸಿಕೊಳ್ಳಲ್ಲ ಎಂದು ಹಠ ಹಿಡಿದ ಮದುಮಗಳು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + fifteen =
Remember me
