ಚೆನ್ನೈ:ರಾತ್ರಿ ಸಮಯದಲ್ಲಿ ಅಪರಾಧ ಚಟುವಟಿಕೆಗಳು ಹೆಚ್ಚಾಗಿ ನಡೆಯುವುದು ಸಾಮಾನ್ಯ. ಈ ಹಿನ್ನೆಲೆಯಲ್ಲಿ ಅದನ್ನು ತಡೆಗಟ್ಟಲು ಗಸ್ತು ವಾಹನಗಳನ್ನು ನಿಯೋಜಿಸಲಾಗಿರುತ್ತದೆ. ಆದರೆ, ಕೆಲ ಗಸ್ತು ವಾಹನದ ಸಿಬ್ಬಂದಿ ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸುವುದಿಲ್ಲ. ಹೀಗಾಗಿ ನಗರದಲ್ಲಿ ಗಸ್ತು ಸಿಬ್ಬಂದಿ ಎಷ್ಟರ ಮಟ್ಟಿಗೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬುದನ್ನು ತಿಳಿಯಲು ಮಹಿಳಾ ಐಪಿಎಸ್​ ಅಧಿಕಾರಿಯೊಬ್ಬರು ಮಧ್ಯರಾತ್ರಿ ಸಿವಿಲ್​ ಡ್ರೆಸ್​ನಲ್ಲಿ ಬೈಸಿಕಲ್​ನಲ್ಲಿ ನಗರವನ್ನೆಲ್ಲ ಸುತ್ತಾಡಿರುವ ಅಪರೂಪದ ಪ್ರಸಂಗ ಜರುಗಿದೆ.
ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ. ಉತ್ತರ ಚೆನ್ನೈ ವಲಯದಲ್ಲಿ ಗಸ್ತು ಸಿಬ್ಬಂದಿ ಎಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಯಲು 2008ನೇ ಬ್ಯಾಚ್​ನ ಐಪಿಎಸ್​ ಅಧಿಕಾರಿ ಹಾಗೂ ಉತ್ತರ ಗ್ರೇಟರ್​ ಚೆನ್ನೈ ಪೊಲೀಸ್​ ವಿಭಾಗದ ಜಂಟಿ ಪೊಲೀಸ್​ ಆಯುಕ್ತರಾದ ಆರ್​. ವಿ. ರಮ್ಯಾ ಭಾರತಿ ಅವರು ಮಧ್ಯರಾತ್ರಿ ಬೈಸಿಕಲ್​ನಲ್ಲಿ ನಗರದ ಪ್ರಮುಖ ಏರಿಯಾಗಳಲ್ಲಿ ಸುತ್ತಾಟ ನಡೆಸಿದ್ದಾರೆ.
ಸ್ಪೋರ್ಟ್ಸ್​ ಟಿ ಶರ್ಟ್​ ಮತ್ತು ಪ್ಯಾಂಟ್​ ಧರಿಸಿ ಶುಕ್ರವಾರ ಮಧ್ಯರಾತ್ರಿ ಬೈಸಿಕಲ್​ ಸವಾರಿ ಮಾಡಿದ್ದಾರೆ. ಈ ವೇಳೆ ಅವರ ಭದ್ರತಾ ಸಿಬ್ಬಂದಿ ಜತೆಗಿದ್ದರು ಮತ್ತು ರಮ್ಯಾ ಭಾರತಿ ಅವರಿಗೆ ಮಾರ್ಗವನ್ನು ತೋರಿಸುತ್ತಿದ್ದರು. ತಡರಾತ್ರಿ 2.45ಕ್ಕೆ ಚೆನ್ನೈನ ವಾರ್​ ಮೊಮೊರಿಯಲ್​ನಲ್ಲಿ ಪಯಣ ಆರಂಭಿಸಿದ ರಮ್ಯಾ ಅವರು ಮುತ್ತುಸ್ವಾಮಿ ಸೇತುವೆ, ರಾಜಾ ಅಣ್ಣಮಲೈ ಮಂದ್ರಮ್​, ಎಸ್ಪ್ಲಾನೇಡ್ ರಸ್ತೆ, ಕುರಲಗಾಮ್​, ಎನ್​ಎಸ್​ಸಿ ಬೋಸ್​ ರಸ್ತೆ ಮತ್ತು ಗೋವಿಂದಪ್ಪ ನಾಯ್ಕನ್ ಸ್ಟ್ರೀಟ್ ಮೂಲಕ ಸಂಚರಿಸಿದರು. ಅಲ್ಲದೆ, ಆರ್​.ಕೆ. ನಗರ, ತೊಂಡಿಯಾರ್ಪೇಟ್​ ಮತ್ತು ಥಿರುವೊತ್ತಿಯೂರ್​ ಮುಖ್ಯರಸ್ತೆ ಸೇರಿದಂತೆ ಸುಮಾರು 10 ಕಿ.ಮೀ ಏರಿಯಾವನ್ನು ಕವರ್​ ಮಾಡಿದರು.
ಎಲ್ಲಿ ಗಸ್ತು ವಾಹನ ಮತ್ತು ಸಿಬ್ಬಂದಿ ಪ್ರತ್ಯಕ್ಷರಾಗುತ್ತಾರೋ ಅಲ್ಲೆಲ್ಲ ಬೈಸಿಕಲ್​ ನಿಲ್ಲಿಸಿ ಪರಿಸ್ಥಿತಿಯ ಬಗ್ಗೆ ವಿಚಾರಿಸಿ, ಗಸ್ತು ಸಿಬ್ಬಂದಿ ನಿರ್ವಹಿಸುವ ದಿನಚರಿಯಲ್ಲಿ ತಮ್ಮ ಭೇಟಿಯನ್ನು ನಮೂದಿಸುತ್ತಿದ್ದರು.
ಭೇಟಿ ಕುರಿತು ಮಾತನಾಡಿರುವ ರಮ್ಯಾ ಭಾರತಿ, ಈ ರೀತಿಯ ಆಶ್ಚರ್ಯಕರ ರಾತ್ರಿ ಭೇಟಿ ಹೊಸದೇನಲ್ಲ. ಹಿರಿಯ ಅಧಿಕಾರಿಯಾಗಿರುವುದರಿಂದ, ನಾವು ಘಟನಾ ಸ್ಥಳಕ್ಕೆ ಹೋಗುವವರೆಗೆ ಮೈದಾನದಲ್ಲಿ ಏನು ನಡೆಯುತ್ತಿದೆ ಎಂಬುದರ ಕುರಿತು ಮೊದಲ ಮಾಹಿತಿ ಪಡೆಯುವುದು ಕಷ್ಟ. ಅಲ್ಲದೆ, ನಾವು ಅಧಿಕೃತ ವಾಹನದಲ್ಲಿ ಹಗಲಿನಲ್ಲಿ ಅಥವಾ ರಾತ್ರಿಯಲ್ಲಿ ಚಲಿಸುವಾಗ ಜಾಗೃತ ಮತ್ತು ಜಾಗರಣೆ ಪ್ರಜ್ಞೆ ಇರುವುದರಿಂದ ನೆಲದ ಪರಿಸ್ಥಿತಿಯನ್ನು ಕಂಡುಹಿಡಿಯುವುದು ಕಷ್ಟ. ನಾವು ಅಜ್ಞಾತವಾಗಿ ಚಲಿಸಿದಾಗ, ನಾವು ನಿಜವಾಗಿ ನೈಜ ಪರಿಸ್ಥಿತಿಯನ್ನು ತಿಳಿದುಕೊಳ್ಳುತ್ತೇವೆ. ಆಗ ಮಾತ್ರ ನಮ್ಮ ರಾತ್ರಿ ಭೇಟಿಗಳು ಎಷ್ಟು ಪರಿಣಾಮಕಾರಿ ಎಂದು ನಮಗೆ ತಿಳಿಯುತ್ತದೆ ಮತ್ತು ಅವುಗಳನ್ನು ಸುಧಾರಿಸುವ ಮಾರ್ಗಗಳನ್ನು ಕಂಡುಕೊಳ್ಳುತ್ತೇವೆ. ಪರಿಸ್ಥಿತಿಯನ್ನು ನಿರ್ಣಯಿಸಲು ಮತ್ತು ಪರಿಶೀಲಿಸಲು ಇದು ಒಂದು ರೀತಿಯ ವ್ಯಾಯಾಮವಾಗಿದೆ ಎಂದು ಹೇಳಿದರು.
ಅಪರಾಧ ಪೀಡಿತ ಪ್ರದೇಶಗಳಲ್ಲಿ ಮತ್ತು ಗಸ್ತು ವಾಹನಗಳನ್ನು ಅಗತ್ಯವಿರುವ ಸ್ಥಳಗಳಲ್ಲಿ ಇರಿಸಲಾಗಿದೆಯೇ ಎಂದು ನೋಡಲು ಬಯಸುತ್ತೇನೆ. ಕ್ರಿಯಾಶೀಲವಾಗಿರುವುದು ಮುಖ್ಯ. ನಾನು ಸರ್ಕಾರಿ ವಾಹನದಲ್ಲಿ ಚಲಿಸುವ ಬದಲು ಈ ರೀತಿ ದಿಢೀರ್ ಭೇಟಿ ನೀಡಿದಾಗ ನಮ್ಮ ಸಿಬ್ಬಂದಿಗೆ ಒಂದು ಸಂದೇಶ ರವಾನೆಯಾಗುತ್ತದೆ. ನಾನು ಬಂದು ಗಸ್ತು ಚಟುವಟಿಕೆಗಳನ್ನು ನೋಡುತ್ತೇನೆ ಎಂಬುದು ಸಿಬ್ಬಂದಿಗೆ ಬಲವಾದ ಸಂದೇಶವಾಗಿದೆ. ಕೆಲಸ ಮಾಡಲು ಮತ್ತು ಸಾರ್ವಜನಿಕರಿಗೆ ಉತ್ತಮ ಸೇವೆಗಳನ್ನು ನೀಡಲು ಯುವಕರನ್ನು ಪ್ರೋತ್ಸಾಹಿಸಲಾಗುವುದು ಎಂದು ತಿಳಿಸಿದರು.
15 ದಿನಗಳಿಗೊಮ್ಮೆ ಇಂತಹ ತಪಾಸಣೆ ನಡೆಸಲು ಯೋಜಿಸಿರುವುದಾಗಿ ಅವರು ಹೇಳಿದರು.(ಏಜೆನ್ಸೀಸ್​)
The 2008-batch IPS officer RV Ramya Bharathi, who is posted as the joint commissioner of Chennai city north zone, decided to ride on her cycle to surprise the policemen on patrol on Thursday.@aselvarajTOIpic.twitter.com/iBGuc5bq0X
— A Selvaraj (@selvarajtoi)March 24, 2022

10 ಮಹಿಳೆಯರ ಜತೆ ದೈಹಿಕ ಸಂಬಂಧ ಹೊಂದಿದ್ದೇನೆ: ನಟನ ಹೇಳಿಕೆ ಖಂಡಿಸದೇ ಕೆಂಗಣ್ಣಿಗೆ ಗುರಿಯಾದ ನವ್ಯಾ!

ನಾನು ಮಹಿಳೆಯರನ್ನ ಮಂಚಕ್ಕೆ ಕರಿತೀನಿ.. ನೇರವಾಗೇ ಕೇಳ್ತೀನಿ, ಒಪ್ಪದಿದ್ರೆ… ನಾಲಿಗೆ ಹರಿಬಿಟ್ಟ ಖ್ಯಾತ ನಟ

ಗ್ರಾಹಕರ ಜೇಬಿಗೆ ಮತ್ತಷ್ಟು ಕತ್ತರಿ: 6 ದಿನದಲ್ಲಿ 5ನೇ ಬಾರಿ ಪೆಟ್ರೋಲ್​-ಡೀಸೆಲ್​ ಬೆಲೆ ಏರಿಕೆ, ಇಂದಿನ ದರ ಹೀಗಿದೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − nine =
Remember me
